ವಿವಿ ಸಾಗರ ಹಿನ್ನೀರು ತಂದ ಸಂಕಟ; ಹೊಸದುರ್ಗ ತಾಲೂಕಿಗೆ ಸಂಕಷ್ಟ

ಮಳೆ ನೀರು ಸೇರಿದರೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು

Team Udayavani, Sep 12, 2022, 4:18 PM IST

ವಿವಿ ಸಾಗರ ಹಿನ್ನೀರು ತಂದ ಸಂಕಟ; ಹೊಸದುರ್ಗ ತಾಲೂಕಿಗೆ ಸಂಕಷ್ಟ

ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯ ತುಂಬಿ ಕೋಡಿ ಬೀಳುವುದು ಇಡೀ ಚಿತ್ರದುರ್ಗದ ಜನರ ಕನವರಿಕೆಯಾಗಿತ್ತು. ಇಂಥದ್ದೊಂದು ಕ್ಷಣಕ್ಕಾಗಿ ಎಲ್ಲರೂ ಹಂಬಲಿಸಿದ್ದರು. ಪವಾಡ ಎಂಬಂತೆ ನಿರೀಕ್ಷೆ ಮೀರಿ ಎಲ್ಲವೂ ನಡೆದು ಹೋಗಿದೆ. 130 ಅಡಿಗೆ ನೀರು ತಲುಪುತ್ತಿದ್ದಂತೆ ತಾಯಿ ವೇದಾವತಿ ಕೋಡಿಯ ಮೂಲಕ ಹೊರಗೆ ಕಾಲಿಟ್ಟಿದ್ದೂ ಆಯಿತು. ಆನಂತರ ಈ ಮಟ್ಟ 135 ಅಡಿ ತಲುಪಿದೆ. ಡ್ಯಾಂನ ಎತ್ತರ 142 ಅಡಿವರೆಗೆ ಇದ್ದರೂ, ಜಲಾಶಯ ನಿರ್ವಹಣಾ ತಂಡ ನೀರಿನ ಮಟ್ಟವನ್ನು 135 ಅಡಿವರೆಗೆ ಮಾತ್ರ ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ದಿನವೂ 14 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಕೋಡಿ ಹಾಗೂ ತೂಬಿನ ಮೂಲಕ ಹೊರಗೆ ಬಿಡಲಾಗುತ್ತಿದೆ. ಜಲಾಶಯ ಭರ್ತಿಯಾಗಿ ಹೊಸದುರ್ಗ ತಾಲೂಕಿನ ಹಲವು ಗ್ರಾಮಗಳು, ಜಮೀನು, ತೋಟಗಳು ಮುಳುಗಡೆಯಾಗಿ ರೈತರು ಸಂಕಟ ಅನುಭವಿಸುತ್ತಿದ್ದಾರೆ.

ಕೋಡಿಯ ಮಟ್ಟ ತಗ್ಗಿಸಬೇಕೇ?: ವಾಣಿವಿಲಾಸ ಜಲಾಶಯ ಕೋಡಿ ಬಿದ್ದ ನಂತರ ಜಲಾಶಯದ ಅಕ್ಕ-ಪಕ್ಕದ ಹಾಗೂ ಹಿನ್ನೀರು ಪ್ರದೇಶದ ರೈತರ ಬವಣೆ ಹೇಳತೀರದಾಗಿದೆ. ಪೂಜಾರಹಟ್ಟಿ ಗ್ರಾಮವೇ ಮುಳುಗಡೆ ಆಗಿದೆ. ಅರೇಹಳ್ಳಿ, ಅತ್ತಿಮಗ್ಗೆ, ಬಂಟನಗವಿ, ನಾಗತಿಹಳ್ಳಿ, ಅಯ್ಯನಹಳ್ಳಿ, ಬೇವಿನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನಿಂದ ಸಮಸ್ಯೆಯಾಗಿದೆ. ನೂರಾರು ರೈತರ ಜಮೀನುಗಳು ಮುಳುಗಡೆಯಾಗಿವೆ. ಜನರನ್ನು ಕಾಳಜಿ ಕೇಂದ್ರದಲ್ಲಿಡಲಾಗಿದೆ.
ಸಣ್ಣ ಪುಟ್ಟ ಹಳ್ಳಿಗಳ ರಸ್ತೆ, ಸೇತುವೆ, ಹೊಲ ಗದ್ದೆಗಳ ಜಾಡುಗಳು ಕಣ್ಮೆರೆಯಾಗಿವೆ.

ಈ ಹಂತದಲ್ಲಿ ಹೊಸದೊಂದು ಚರ್ಚೆ ನಡೆಯುತ್ತಿದ್ದು, ವಿವಿ ಸಾಗರದ ಕೋಡಿಯ ಮಟ್ಟ ಸದ್ಯ 130 ಅಡಿಗೆ ಇದ್ದು, ಇದನ್ನು 125 ಅಡಿಗೆ ಇಳಿಸಿದರೆ ಹಿನ್ನೀರು ಭಾಗದ ರೈತರಿಗೆ ಸಂಕಷ್ಟ ತಪ್ಪಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ನೀರಿನ ಮಟ್ಟ 125 ಅಡಿಗೆ ಬಂದ ತಕ್ಷಣ ಕೋಡಿ ಬಿದ್ದರೆ ಹಿಂಭಾಗದ ರೈತರು ಉಳಿಯುತ್ತಾರೆ. ಯಥೇತ್ಛವಾಗಿ ಮಳೆಯಾಗದಿದ್ದರೆ 125 ಅಡಿಗಿಂತ ಹೆಚ್ಚು ಬಂದ ನೀರನ್ನು ಹರಿಸುವುದರಿಂದ ಜಲಾಶಯದ ಮುಂಭಾಗದ ಹಿರಿಯೂರು, ಚಳ್ಳಕೆರೆ ಭಾಗದಲ್ಲೂ ಅಂತರ್ಜಲ ಹೆಚ್ಚಾಗಿ ಇಲ್ಲಿನ ರೈತರು ಬೆಳೆ ಬೆಳೆದುಕೊಳ್ಳಬಹುದು. ಇಳಿಸುವುದರಿಂದ ಎರಡು ಲಾಭಗಳಿವೆ ಎನ್ನುವುದು ಒಂದು
ಮೂಲದ ವಾದವಾಗಿದೆ.

ಭೂಸ್ವಾಧೀನ, ಪರಿಹಾರ ಕಾರ್ಯಸಾಧುವೇ?: ಇದೇ ವೇಳೆ ಮತ್ತೂಂದು ಆಯಾಮದ ಚರ್ಚೆಯೂ ನಡೆದಿದ್ದು, ಹಿನ್ನೀರು ಭಾಗದಲ್ಲಿರುವ ರೈತರ ಮುಳುಗಡೆಯಾಗುವ ಭೂಮಿಗೆ ಪರಿಹಾರ ನೀಡಿ ಭೂಸ್ವಾ ಧೀನ ಮಾಡಿಕೊಂಡರೆ ಹೇಗೆ ಎಂಬ ಚಿಂತನೆಯೂ ನಡೆದಿದೆ. ಜಲಾಶಯದ ನೀರಿನ ಮಟ್ಟ 130 ಅಡಿವರೆಗೆ ಬಂದರೆ ಇನ್ನೂ 5 ಅಡಿ ಹೆಚ್ಚು ನೀರು ಸಂಗ್ರಹಿಸಬಹುದು. ಅದನ್ನು 125 ಅಡಿಗೆ ಇಳಿಸಿದರೆ ಜಲಾಶಯ ಮಟ್ಟ ಕಡಿಮೆಯಾಗುತ್ತದೆ. ಇಂತಹ ಮಳೆಗಾಲ ಎಲ್ಲಾ ಕಾಲಕ್ಕೂ ಹೀಗೆಯೇ ಇರಲಾರದು ಎನ್ನುವ ವಾದವೂ ಇದೆ. ಆದರೆ ಹೇಗಿದ್ದರೂ ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ 2 ಟಿಎಂಸಿ ನೀರು ಹಂಚಿಕೆಯಾಗಿದೆ.

ಪ್ರತಿ ವರ್ಷ 2 ಟಿಎಂಸಿ ನೀರು ಹರಿದರೆ ಅದರ ಜೊತೆಗೆ ಮಳೆ ನೀರು ಸೇರಿದರೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು. ಹಾಗಾಗಿ ಜಲಾಶಯದ ಹಿಂಭಾಗದ ಹೊಸದುರ್ಗ ತಾಲೂಕಿನ ರೈತರ ಹಿತದೃಷ್ಟಿಯನ್ನೂ ಕಾಯಬೇಕಿದೆ ಎನ್ನುವುದು ಅಲ್ಲಿನ ರೈತರ ಮನವಿ.

ಹೊಸದುರ್ಗ ತಾಲೂಕಿನ ರೈತರ ಜಮೀನುಗಳಲ್ಲಿ ನೀರು ನಿಂತು ಸಾಕಷ್ಟು ತೊಂದರೆಯಾಗಿದೆ. ಇದು ನನಗೂ ನೋವು ತಂದಿದೆ. ಈ ರೈತರಿಗೆ ಸರಿಯಾದ ಪರಿಹಾರ ಸಿಗಬೇಕು. ಆದರೆ ಜಲಾಶಯದ ಕೋಡಿ ಮಟ್ಟವನ್ನು 125 ಅಡಿಗೆ ಇಳಿಸುವುದು ಅವೈಜ್ಞಾನಿಕ ಕ್ರಮವಾಗುತ್ತದೆ. ಈ ಬಗ್ಗೆ ನಮಗೆ ಸರಿಯಾದ ತಾಂತ್ರಿಕ ಮಾಹಿತಿ ಇಲ್ಲ. ಎಷ್ಟೋ ವರ್ಷಗಳ ನಂತರ ನೀರು ಬಂದಿದ್ದು, ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಪೂರ್ಣಿಮಾ ಶ್ರೀನಿವಾಸ್‌,
ಹಿರಿಯೂರು ಶಾಸಕರು

ಜಲಾಶಯಕ್ಕಾಗಿ ಹಿಂದೆ ಭೂಸ್ವಾಧೀನ ಆಗಿರುವ ಭೂಮಿ ಬಿಟ್ಟು ಇತರೆ ರೈತರ ಜಮೀನು, ಗ್ರಾಮಗಳು ಮುಳುಗಡೆ ಆಗಿವೆ. ಅವರಿಗೆ ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ. ಇದರೊಟ್ಟಿಗೆ 125 ಅಡಿಗೆ ನೀರು ಬಿಡಲು ಅನುಕೂಲವಾಗುವಂತೆ ಒಂದು ಗೇಟ್‌ ಮಾಡಿ, ಅತಿಯಾದ ಮಳೆಯಾಗಿ ನೆರೆಯಂತೆ ಬರುವ ನೀರನ್ನು ಹೊರ ಬಿಟ್ಟು ಆನಂತರ ಬರುವ ನೀರನ್ನು 130 ಅಡಿವರೆಗೆ ನಿಲ್ಲಿಸಿದರೆ ಅಷ್ಟಾಗಿ ತೊಂದರೆ ಆಗುವುದಿಲ್ಲ. ಆದರೆ ಈಗ 135 ಅಡಿವರೆಗೆ ನೀರು
ನಿಂತಿದೆ. ಹರಿದು ಬರುತ್ತಿರುವ ನೀರಿನ ಪ್ರಮಾಣ ಸೇರಿದರೆ 140 ಅಡಿಯಷ್ಟಾಗಿದೆ.
ಗೂಳಿಹಟ್ಟಿ ಡಿ. ಶೇಖರ್‌, ಹೊಸದುರ್ಗ
ಶಾಸಕರು

*ತಿಪ್ಪೇಸ್ವಾಮಿ ನಾಕೀಕೆರೆ

ಟಾಪ್ ನ್ಯೂಸ್

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.