ದೇಶ ರಕ್ಷಣೆಯ ವೃತ್ತಿಯಲ್ಲಿ ಬಹಳಷ್ಟು ಅವಕಾಶಗಳಿವೆ; ರಮೇಶ್ ಕಾರ್ಣಿಕ್
Team Udayavani, Dec 9, 2023, 5:32 PM IST
ಮೂಡುಬಿದಿರೆ: ದೇಶದ ರಕ್ಷಣೆಯಲ್ಲಿ ಒಂದನೆಯದು ಬಾಹ್ಯ ರಕ್ಷಣೆ, ಎರಡನೆಯದು ಆಂತರಿಕ ರಕ್ಷಣೆ. ಆಂತರಿಕ ರಕ್ಷಣೆ ಬಾಹ್ಯ ರಕ್ಷಣೆಗಿಂತ ಹೆಚ್ಚು ಮುಖ್ಯ ಎಂದು ನಿವೃತ್ತ ಏರ್ ವೈಸ್ಮಾರ್ಶಲ್ ರಮೇಶ್ ಕಾರ್ಣಿಕ್ ಹೇಳಿದರು.
ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎನ್ಸಿಸಿ ಘಟಕದ ವತಿಯಿಂದ ನಡೆದ ಎನ್ಸಿಸಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದೇಶೀಯರು ಭಾರತೀಯ ರಾಜರೊಳಗೆ ಆಂತರಿಕ ಕಲಹವನ್ನು ತಂದಿಟ್ಟು ದೇಶವನ್ನು ಆಳಲಾರಂಭಿಸಿ, ನೂರಾರು ವರ್ಷಗಳ ಕಾಲ ನಾವೆಲ್ಲ ವಿದೇಶೀಯರ ಆಳ್ವಿಕೆಯಲ್ಲಿ ಇರಲು ಕಾರಣ ನಮ್ಮ ದೇಶದೊಳಗಿರುವ ಒಗ್ಗಟ್ಟಿನ ಕೊರತೆ. ಹೀಗಾಗಿ ದೇಶದೊಳಗೆ
ಯಾವುದೇ ಸಮಸ್ಯೆ ಬಾರದಂತೆ ತಡೆಗಟ್ಟಲು ಅನೇಕ ಪೊಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ದೇಶ ಕಾಯುವ ವೃತ್ತಿಯೂ ಒಂದು ಪವಿತ್ರ ವಾದ ವೃತ್ತಿ. ನಿಮ್ಮ ಚಿತ್ತ ಅಂಥ ವೃತ್ತಿಯನ್ನು ಆಯ್ದುಕೊಳ್ಳುವ ಕಡೆಗಿರಲಿ ಎಂದರು.
ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಶಿಸ್ತಿನ ಜೀವನವನ್ನು ನಡೆಸುವಲ್ಲಿ ಎನ್ಸಿಸಿ ನೆರವಾಗುತ್ತದೆ. ಅದೇ ರೀತಿ ನಿಮ್ಮ ಆಸಕ್ತಿ ಯೋಗ್ಯತೆಗನುಗುಣವಾಗಿ ಸೇವೆ ಸಲ್ಲಿಸಲು ಹಲವಾರು ವೃತ್ತಿಗಳಿರುದನ್ನು ಗಮನಿಸಿ ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹಿತವಾದ ಹೇಳಿದರು.
ಕೆಡೆಟ್ಗಳಿಗೆ ಶ್ರೇಣಿ, ಕ್ಯಾಂಪುಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ಮತ್ತು ಕೆಡೆಟ್ಗಳಿಗಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾುತು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಎಕ್ಸಲೆಂಟ್ ಆಂ.ಮಾ. ಶಾಲೆಯ
ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಎಎನ್ಒ 18 ಕಾರ್ ಆರ್ಮಿ ಎನ್ಸಿಸಿ ಸಬ್ ಯೂನಿಟ್ನ ಲೆ|| ಮಹೇಂದ್ರ ಜೈನ್, 5 ಕಾರ್ ನೇವಲ್ ಸಬ್ ಯೂನಿಟ್ ಕೇರ್ ಟೇಕರ್ ರಾಜ್ ಪ್ರಸಾದ್, ಸೀನಿಯರ್ ಕೆಡೆಟ್ ಸ್ಫೂರ್ತಿ ಬೈಲೂರು ಉಪಸ್ಥಿತರಿದ್ದರು. ಸಿಪಿಎಲ್ ಮೋನಿಶ್ ಗೌಡ ಸ್ವಾಗತಿಸಿದರು. ಸಿಎಸ್ ಎಂ ಪೂರ್ಣಚಂದ್ರ ವಂದಿಸಿದರು. ಸಿಕ್ಯೂಎಂಎಸ್ ಶ್ರೇಯಾ ಪಿಳ್ಳೈ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ