ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಇಂದು ಮಂಗಳೂರಿಗೆ
Team Udayavani, Apr 8, 2017, 8:27 AM IST
ಮಂಗಳೂರು: ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಹಾಗೂ ಪತಿ ಅಭಿಷೇಕ್ ಬಚ್ಚನ್ ಎ. 8ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಐಶ್ವರ್ಯಾ ರೈ ಅವರ ತಂದೆ ಕೃಷ್ಣರಾಜ್ ರೈ ಅವರು ಇತ್ತೀಚೆಗೆ ಮುಂಬಯಿಯಲ್ಲಿ ನಿಧನ ಹೊಂದಿದ್ದು, ಅವರ ಪಿಂಡ ಪ್ರದಾನ ಕಾರ್ಯಕ್ರಮ ಮಂಗಳೂರಿನಲ್ಲಿ ಶನಿವಾರ ನಡೆಯಲಿದೆ. ಐಶ್ವರ್ಯಾ ದಂಪತಿಯ ಪುತ್ರಿ ಆರಾಧ್ಯ ಹಾಗೂ ಸಹೋದರ ಆದಿತ್ಯ ರೈ ಅವರು ಜತೆಗಿರಲಿದ್ದಾರೆ.
ಮುಂಬಯಿಯಿಂದ ವಿಮಾನದ ಮೂಲಕ ಬೆಳಗ್ಗೆ 10.45ಕ್ಕೆ ಬಜಪೆ ತಲುಪುವರು. ಅನಂತರ ಅವರು ಶ್ರೀ ಕ್ಷೇತ್ರ ಕದ್ರಿ ಮತ್ತು ಉಪ್ಪಿನಂಗಡಿಯ ಶ್ರೀ ಸಹಸ್ರಧಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವರು ಎಂದು ಮೂಲಗಳು ತಿಳಿಸಿವೆ. ಪಿಂಡ ಪ್ರದಾನ ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ತಂಗುವ ಅವರು, ರವಿವಾರ ನಗರದ ವಿವಿಧ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ವಿಮಾನದ ಮೂಲಕ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.