ಬೆಟ್ಟದ ಜೀವ: ಬತ್ತದ ಜೀವನೋತ್ಸಾಹ

ಚಾರಣ ಬರುವವರಿಗೆ ಆಶ್ರಯ, ಆತಿಥ್ಯ ನೀಡುವ ಗಿರಿಗದ್ದೆ ಭಟ್ಟರು

Team Udayavani, Oct 12, 2019, 5:44 AM IST

d-24

ಸುಬ್ರಹ್ಮಣ್ಯ: ಅವರದು ಬೆಟ್ಟದ ಮೇಲಿನ ಬದುಕು. ಸುಮಾರು 45 ವರ್ಷಗಳಿಂದ ಗಿರಿಗದ್ದೆಯಲ್ಲೇ ಅವರ ವಾಸ. ನಾಡಿನ ಸ್ಪರ್ಶವಿಲ್ಲದ ಪರಿಸರ ಪ್ರೇಮಿ. ಚಾರಣಕ್ಕೆ ತೆರಳುವ ಆಸಕ್ತರಿಗೆ ಆತಿಥ್ಯ, ಅಶ್ರಯ ಎರಡನ್ನೂ ಒದಗಿಸುವ ಹಿರಿಯ ಜೀವ.

ಕುಮಾರಪರ್ವತಕ್ಕೆ ಚಾರಣ ತೆರಳಿ ಪರಿಸರದ ಸವಿಯುಣ್ಣುವ ಜನರು ಗಿರಿಗದ್ದೆಯಲ್ಲಿರುವ ಮಹಾಲಿಂಗೇಶ್ವರ ಭಟ್ಟರ ಆತಿಥ್ಯಕ್ಕೂ ಮಾರು ಹೋಗುತ್ತಾರೆ. ದಸರಾ ಸರಣಿ ರಜೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಜನ ಇಲ್ಲಿಗೆ ಬಂದಿದ್ದರು. ಹೀಗೆ ವರ್ಷದಲ್ಲಿ ಏನಿಲ್ಲವೆಂದರೂ 10 ಸಾವಿರ ಜನ ಭಟ್ಟರ ಮನೆಗೆ ಭೇಟಿ ನೀಡುತ್ತಾರೆ.

ಜಾಲತಾಣದಿಂದ ಸಂಪರ್ಕ
ಮಹಾಲಿಂಗೇಶ್ವರ ಭಟ್ಟರು ಚಾರಣಪ್ರಿಯರಿಗೆ ಚಿರಪರಿಚಿತರು. ಸುಬ್ರಹ್ಮಣ್ಯದಿಂದ 4 ಕಿ.ಮೀ. ದೂರದಲ್ಲಿ, ಕುಮಾರಪರ್ವತದ ದಾರಿಯಲ್ಲಿ ಸಿಗುವ ಗಿರಿಗದ್ದೆಯಲ್ಲಿ ಅವರ ಮನೆಯಿದೆ. ಹೀಗಾಗಿ, ಗಿರಿಗದ್ದೆ ಭಟ್ಟರು ಎಂದೇ ಹೆಸರುವಾಸಿ. ಬೆಟ್ಟದ ಮನುಷ್ಯನಾದರೂ ಸಾಮಾಜಿಕ ಜಾಲತಾಣದ ಮೂಲಕ ಜಗತ್ತಿನ ಸಂಪರ್ಕ ಬೆಳೆಸಿಕೊಂಡಿದ್ದಾರೆ.

ಅದುವರೆಗೆ ಕುಲ್ಕುಂದದಲ್ಲಿದ್ದ ಮಹಾಲಿಂಗೇಶ್ವರ ಭಟ್ಟರು 1974ರಲ್ಲಿ ಗಿರಿಗದ್ದೆಗೆ ಬಂದರು. ಕುಮಾರಪರ್ವತವೇರಲು ಬಂದಿದ್ದ ಅವರು ದಣಿವಾರಿಸಿಕೊಳ್ಳಲು ಕುಳಿತಾಗ ಗಿರಿಮನೆಯಲ್ಲಿ ಮನೆಯೊಂದರ ಕುರುಹು ಕಂಡರು. ಕೆಲವೇ ಸಮಯದಲ್ಲಿ ಕುಟುಂಬ ಸಮೇತ ಇಲ್ಲಿಗೆ ಬಂದು ವಾಸ್ತವ್ಯ ಆರಂಭಿಸಿದರು. ಮಣ್ಣಿನ ಮನೆ ಕೊಟ್ಟಿಗೆ, ಹಟ್ಟಿ ನಿರ್ಮಿಸಿಕೊಂಡು ಏಕಾಂತದ ಬದುಕು ಆರಂಭಿಸಿದರು. ಅಡಿಕೆ ತೋಟ, ತರಕಾರಿ ಕೃಷಿ ಮಾಡುತ್ತ, ಪರ್ವತ ಚಾರಣಕ್ಕೆ ತೆರಳುವ ಚಾರಣಿಗರಿಗೂ ಹತ್ತಿರವಾದರು.

ಮಹಾಲಿಂಗೇಶ್ವರ ಭಟ್ಟರ ಮಕ್ಕಳೂ ಗಿರಿಗದ್ದೆ ವಾಸ ಇಷ್ಟಪಟ್ಟರು. ಇಬ್ಬರು ಸಹೋದರರ ಕುಟುಂಬಗಳೂ ಇವೆ. ಭಟ್ಟರ ಅತ್ತೆಯೂ ಇಲ್ಲಿದ್ದಾರೆ. ಕೃಷಿ ಕಾಯಕದ ಭಟ್ಟರ ಮನೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳಿವೆ. ನಿತ್ಯ 20-25 ಲೀ. ಹಾಲನ್ನು ಸುಬ್ರಹ್ಮಣ್ಯಕ್ಕೆ ತರುತ್ತಾರೆ. ಮಲೆನಾಡು ಗಿಡ್ಡ ಜಾತಿಯ ಗೋವುಗಳು ಬಿಸಿಲಿಗೆ ಮೈಯೊಡ್ಡಿ, ಹುಲ್ಲು ತಿಂದು ಕೊಡುವ ಹಾಲು ಔಷಧಕ್ಕೂ ಬಳಕೆಯಾಗುತ್ತದೆ. ಅಕ್ಕಿ, ಬೇಳೆ, ಹಾಲು ಇತ್ಯಾದಿಗಳನ್ನು ಹೊತ್ತುಕೊಂಡು ಅನಾಯಾಸವಾಗಿ ಹತ್ತಿಳಿಯುತ್ತಾರೆ. ಚಾರಣಿಗರು ಬರುವ ದಿನಗಳಲ್ಲಿಯೂ ಸಾಮಾನು ಹೊತ್ತುಕೊಂಡೇ ಬೆಟ್ಟವೇರಬೇಕು. ಆದರೂ ಇದನ್ನೆಲ್ಲ ಅವರು ತಪಸ್ಸಿನಂತೆ ಮಾಡುತ್ತಿದ್ದಾರೆ. ಊಟ, ತಿಂಡಿಗೆ ನಿರ್ದಿಷ್ಟ ಮೊತ್ತವನ್ನು ಪಡೆಯುತ್ತಾರೆ. ಅಗತ್ಯವಿರುವವರಿಗೆ ವಸತಿ ಇತ್ಯಾದಿ ವ್ಯವಸ್ಥೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

 ಖುಷಿ ನೀಡಿದೆ
ಕಾಡಿನ ಬದುಕು ಖುಷಿ ನೀಡಿದೆ. ಚಾರಣಕ್ಕೆ ಬರುವ ತಂಡಗಳ ಜತೆಗೆ ನಾನೂ ವಾರಕ್ಕೆ ಒಂದು ಸಲವಾದರೂ ಕುಮಾರಪರ್ವತ ಏರುತ್ತೇನೆ. ನವರಾತ್ರಿ ಸಂದರ್ಭದಲ್ಲಿ 25 ಜನರ ತಂಡದೊಂದಿಗೆ ಹೋಗಿ ಬಂದಿದ್ದೆ. ಚಾರಣಿಗರ ಆತಿಥ್ಯ ವಹಿಸುವುದು ಪುಣ್ಯದ ಕೆಲಸ. ಅವರ ಊಟ, ತಿಂಡಿಗಳ ಬೇಡಿಕೆಯನ್ನು ಹೊರೆಯಾಗದಂತೆ ಪೂರೈಸುವುದರಲ್ಲೇ ಸಾರ್ಥಕತೆ ಕಾಣುತ್ತಿದ್ದೇವೆ.
– ಮಹಾಲಿಂಗೇಶ್ವರ ಭಟ್‌, ಗಿರಿಗದ್ದೆ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.