ಬ್ಯಾರಿಕೇಡ್‌ ಸಮಸ್ಯೆ: ಬೇಕಿದೆ ಶಾಶ್ವತ ಪರಿಹಾರ


Team Udayavani, Dec 13, 2017, 4:33 PM IST

13-Dec-14.jpg

ಪುತ್ತೂರು: ಬ್ಯಾರಿಕೇಡ್‌ ಪಾದಚಾರಿಗಳಿಗೆ ಕಂಟಕ ಎನ್ನುವ ವಿಷಯ ಹೊಸದೇನಲ್ಲ. ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸ್ವತಃ ಪೊಲೀಸ್‌ ಇಲಾಖೆಯೇ ವಿಫಲವಾಗಿದೆ. ಇದಕ್ಕೊಂದು ತಾಜಾ ನಿದರ್ಶನ ಸಂಪ್ಯ ಗ್ರಾಮಾಂತರ ಠಾಣೆಯ ಮುಂಭಾಗದ ಬ್ಯಾರಿಕೇಡ್‌.

ಅಪಘಾತ ತಡೆಯುವ ಉದ್ದೇಶದಿಂದ ಹಾಕಲಾದ ಬ್ಯಾರಿಕೇಡ್‌ಗಳೇ ಈಗ ಅಪಘಾತಕ್ಕೆ ಮೂಲವಾಗುತ್ತಿವೆ. ಕೆಲವು ವರ್ಷಗಳ ಮೊದಲು ಸಂಪ್ಯ ಠಾಣೆ ಮುಂಭಾಗ ಗೇಟ್‌ ವ್ಯವಸ್ಥೆ ಇತ್ತು. ತುರ್ತು ಸಂದರ್ಭ ಗೇಟನ್ನು ಹಾಕಿ, ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಬಳಿಕ ಗೇಟನ್ನು ತೆರವು ಮಾಡಿ, ಬ್ಯಾರಿಕೇಡ್‌ ಹಾಕಲಾಯಿತು. ವಾಹನಗಳ ವೇಗವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದೇ ಹೊರತು, ಅಪಘಾತವನ್ನಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿದೆ.

ಹೆದ್ದಾರಿಗಳಲ್ಲಿ ಹಂಪ್ಸ್‌ ಹಾಕಬಾರದು ಎಂಬ ನಿಯಮ ಜಾರಿಗೆ ಬರುತ್ತಿದ್ದಂತೆ ಬ್ಯಾರಿಕೇಡ್‌ಗಳ ಮೊರೆ ಹೋಗಲಾಗಿದೆ. ಬ್ಯಾರಿಕೇಡ್‌ ಅಳವಡಿಕೆಗೂ ಕೆಲ ನಿಯಮಗಳಿವೆ. ಆದರೆ, ಅವುಗಳನ್ನು ಪಾಲಿಸದೆ ಏಕಾಏಕಿ ತಂದು ನಿಲ್ಲಿಸುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ.

ವಾಸ್ತವದಲ್ಲಿ ಬ್ಯಾರಿಕೇಡ್‌ಗಳು ಸಮಸ್ಯೆಯಲ್ಲ. ಅವುಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಇಡುವುದರಿಂದ ಸಮಸ್ಯೆ ಸೃಷ್ಟಿ ಯಾಗಿದೆ. ಸಾಮಾನ್ಯವಾಗಿ ಬ್ಯಾರಿಕೇಡ್‌ಗಳು ರಸ್ತೆಯಲ್ಲಿ ಇರಬೇಕು. ಫುಟ್‌ಪಾತ್‌ನಲ್ಲಿ ಇಡುವುದಾದರೆ ಪಾದಚಾರಿಗಳಿಗೆ ನಡೆದಾಡಲು ಸಾಕಷ್ಟು ಜಾಗ ಇರಬೇಕು. ಆದರೆ ಕೆಲವು ಕಡೆ ಈ ಎಲ್ಲ ನಿಯಮವನ್ನು ಗಾಳಿಗೆ ತೂರಲಾಗಿದೆ. ಬ್ಯಾರಿಕೇಡ್‌ಗಳನ್ನು ಸಂಪೂರ್ಣವಾಗಿ ಫುಟ್‌ಪಾತ್‌ಗೆ ಅಡ್ಡವಾಗಿ ಇಡಲಾಗಿದೆ. ಇದರಿಂದ ಪಾದ
ಚಾರಿಗಳಿಗೆ ನಡೆದಾಡಲು ಫುಟ್‌ಪಾತ್‌ ಇಲ್ಲವಾಗಿದೆ. ರಸ್ತೆಯೇ ಫುಟ್‌ಪಾತ್‌ ಆಗಿ ಪರಿಣಮಿಸಿದೆ.

ಎಸ್ಪಿಗೆ ಅಧಿಕಾರ
ಭಾರತದ ಮೋಟಾರ್‌ ವಾಹನ ಅಧಿನಿಯಮ ಹಾಗೂ ಕರ್ನಾಟಕ ಪೊಲೀಸ್‌ ಅಧಿನಿಯಮದಂತೆ ಜಿಲ್ಲಾ ವ್ಯಾಪ್ತಿ ಯಲ್ಲಿ ಬ್ಯಾರಿಕೇಡ್‌ ಅಳವಡಿಸಲು ಆದೇಶ ಹೊರಡಿಸುವ ಅಧಿಕಾರ ಪೊಲೀಸ್‌ ವರಿಷ್ಠಾಧಿಕಾರಿಗಿದೆ. ಇವರು ಸ್ಥಳೀಯ ಠಾಣಾಧಿಕಾರಿಗಳಿಗೆ ಈ ಅಧಿಕಾರವನ್ನು ಹಂಚಿ, ಬ್ಯಾರಿಕೇಡ್‌ ಅಳವಡಿಸುತ್ತಾರೆ. ಹಾಗೆಂದು ಏಕಾಏಕಿ ಬ್ಯಾರಿಕೇಡ್‌ ಹಾಕುವಂತಿಲ್ಲ. ಇದಕ್ಕೆ ಮೊದಲು ಅಪಘಾತದ ಸಂಖ್ಯೆ, ಒಳರಸ್ತೆ, ಜಂಕ್ಷನ್‌, ಬಸ್‌ ಹತ್ತುವ ಜನರ ಪ್ರಮಾಣ ಮೊದಲಾದವುಗಳ ಅಧ್ಯಯನ ಆಗ ಬೇಕು. ಇದರ ವರದಿ ಆಧರಿಸಿ ಬ್ಯಾರಿ ಕೇಡ್‌ ಹಾಕಲಾಗುತ್ತದೆ. ಇದೀಗ ಈ ಅಧ್ಯಯನದ ಮೇಲೆಯೇ ಸಣ್ಣ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಬೆಳೆದ ಪೊದೆ
ಸಂಪ್ಯ ಠಾಣೆ ಮುಂಭಾಗದ ಬ್ಯಾರಿಕೇಡ್‌ ತೀರಾ ಅವೈಜ್ಞಾನಿಕವಾಗಿದೆ. ರಸ್ತೆಯ ಅರ್ಧ ಭಾಗವನ್ನು ಮತ್ತು ಕಾಲುದಾರಿಯನ್ನು ಬ್ಯಾರಿಕೇಡ್‌ ಆಕ್ರಮಿಸಿಕೊಂಡಿದೆ. ನಡುರಸ್ತೆಯಲ್ಲೇ ವಾಹನಗಳು ಮತ್ತು ಪಾದಚಾರಿಗಳು
ಸಾಗಬೇಕು. ಕಾಲುದಾರಿಯ ಜಾಗವನ್ನು ಸಂಪೂರ್ಣವಾಗಿ ಬ್ಯಾರಿಕೇಡ್‌ ಹಾಗೂ ಪೊದೆ ಆಕ್ರಮಿಸಿಕೊಂಡಿದ್ದು, ಈ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ದಿನನಿತ್ಯ ಸಮಸ್ಯೆ ಯಾಗಿದೆ. ಠಾಣೆಯ ಮುಂಭಾಗವೇ ಇಂತಹ ಪರಿಸ್ಥಿತಿ ಇದ್ದು, ಎರಡು ಅಪಘಾತ ನಡೆದ ಬಳಿಕವೂ ಯಾವುದೇ ರೀತಿಯ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿಲ್ಲ, ಇದ ರಿಂದಾಗಿ ಅನಾಹುತಗಳಿಗೆ ದಾರಿ ಮಾಡಿ ದಂತೆಯಾಗುತ್ತದೆ, ಇನ್ನಾದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ಷೇಪಿಸುತ್ತಾರೆ.

ರಸ್ತೆಯೇ ಕಿರಿದು
ವಾಹನ ಸಂಚಾರಕ್ಕೆ ಅಗತ್ಯವಾದಷ್ಟು ರಸ್ತೆಗಳು ಇವೆ. ಆದರೆ ಬ್ಯಾರಿಕೇಡ್‌ ಗಳನ್ನು ಇಟ್ಟಾಗ ರಸ್ತೆ ಇನ್ನಷ್ಟು ಕಿರಿದಾಗುತ್ತದೆ. ಇರುವ ರಸ್ತೆಯನ್ನು ಬ್ಯಾರಿಕೇಡ್‌ಗಳು ನುಂಗುತ್ತವೆ. ಇಂತಹ ಸಂದರ್ಭ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಘನ ವಾಹನಗಳು ಎದುರಿನಿಂದ ಬರುವ ವಾಹನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತವೆ. ಇಂತಹ ಸಂದರ್ಭ ಲಘು ವಾಹನಗಳ ಸವಾರರು ಭಯ ಬೀಳುತ್ತಾರೆ. ಇಷ್ಟೇ ಸಾಕು ಅಪಘಾತ ಸಂಭವಿಸಲು.

ಸಲಹೆ ಸಿಕ್ಕರೆ
ಬ್ಯಾರಿಕೇಡ್‌ಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹಾಗೆಂದು ಬ್ಯಾರಿಕೇಡ್‌ ಹಾಕದೇ ಬಿಡುವಂತೆಯೂ ಇಲ್ಲ. ಶಾಶ್ವತ ಪರಿಹಾರದ ಸಲಹೆ ಸಿಕ್ಕಿದರೆ, ಅದನ್ನು ಕಾರ್ಯಗತ ಗೊಳಿಸಲಾಗುವುದು. ವಾಹನ ಸವಾರರ ಜತೆಗೆ ಪಾದಚಾರಿಗಳ ಕ್ಷೇಮವೂ ತುಂಬಾ ಅಗತ್ಯ.
– ಸುಧೀರ್‌ ಕುಮಾರ್‌ ರೆಡ್ಡಿ, ಎಸ್ಪಿ, ದ.ಕ.

ವಿಶೇಷ ವರದಿ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.