ಪುಂಜಾಲಕಟ್ಟೆ: ಸಹಕಾರಿ ಸಂಘದ ಸಿಬಂದಿಗೆ ತರಾಟೆ; ವೀಡಿಯೋ ವೈರಲ್
Team Udayavani, Dec 22, 2022, 8:10 AM IST
ಪುಂಜಾಲಕಟ್ಟೆ: ಸಹಕಾರಿ ಸಂಘದಲ್ಲಿ ವಂಚನೆ ನಡೆಸಿದ ವಿಚಾರವಾಗಿ ಸಿಬಂದಿಯನ್ನು ಸಂಘದ ಸದಸ್ಯರೋರ್ವರು ತರಾಟೆಗೆ ತೆಗೆದು ಕೊಂಡು ತಳ್ಳಿರುವ ಘಟನೆ ಬುಧವಾರ ಸಂಘದ ಅವರಣದಲ್ಲಿ ನಡೆದಿದ್ದು, ಈ ಹೈಡ್ರಾಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಟ್ವಾಳ ತಾಲೂಕಿನ ಕಾವಳ ಮೂಡೂರು ವ್ಯ.ಸೇ.ಸ. ಸಂಘದಲ್ಲಿ ಸದಸ್ಯ ಗ್ರಾಹಕರನ್ನೇ ವಂಚಿಸಿ ಸಾಲ ಮಾಡಲಾಗಿದೆ ಎಂಬ ಆರೋಪದಲ್ಲಿ ಸದಸ್ಯ ಗ್ರಾಹಕರೋರ್ವರು ಆಕ್ರೋಶಿತ ರಾಗಿ ಸಂಘದ ಹೊರ ಭಾಗದ ಬಾಗಿಲಲ್ಲಿ ನಿಂತಿದ್ದ ಸಿಬಂದಿಗಳನ್ನು ತರಾಟೆಗೆ ತೆಗೆದು ನಮ್ಮ ಹೆಸರಲ್ಲಿ ಲಕ್ಷಾಂತರ ಸಾಲ ಪಡೆದು ನಮ್ಮನ್ನು ವಂಚಿಸಿದ್ದಿಯಾ ಈ ಸಾಲ ಯಾವಾಗ ಮರುಪಾವತಿ ಮಾಡುತ್ತಿ ಎಂದು ಆಕ್ರೋಶ ಭರಿತರಾಗಿ ಸಿಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿ ಎಳೆದಾಡಿದರು.
ಈ ಸಂದರ್ಭ ಸಂಘದಲ್ಲಿ ನಡೆದಿದೆ ಎನ್ನಲಾದ ಹಣ ದುರು ಪಯೋಗದ ಕುರಿತಾಗಿ ಹೈಕೋರ್ಟ್ ಆದೇಶದಂತೆ ವಿಚಾರಣೆ ನಡೆಸುತ್ತಿದ್ದ ಸಹಕಾರ ಸಂಘದ ಅಧಿಕಾರಿ ಮಧ್ಯಪ್ರವೇಶಿಸಿ ವಿಚಾರಣೆಗಾಗಿ ಬಂದಿರುವ ಹಿನ್ನೆಲೆಯಲ್ಲಿ ತನ್ನ ಮುಂದೆ ಹೇಳಿಕೆ ನೀಡುವಂತೆ ಸೂಚಿಸಿದಂತೆ ಸದಸ್ಯ ಗ್ರಾಹಕ ವಿಚಾರಣಾಧಿಕಾರಿ ಬಳಿ ತೆರಳಿದರು. ಬಳಿಕ ಸಿಬಂದಿ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರಕ್ಕೆ ದಾಖ ಲಾಗಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ಮಾಹಿತಿ ಹೋಗಿದ್ದು, ಪ್ರಕರಣ ದಾಖಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ