ಮನೆಯೊಳಗೇ ಜಿಹಾದಿ ಶಕ್ತಿಗಳನ್ನು ಕಂಡು ಕೈ ನಾಯಕರು ಮೂಕಪ್ರೇಕ್ಷಕರಾಗಿದ್ದಾರೆ: ಡಾ.ಭರತ್ ಶೆಟ್ಟಿ
ಕಾಂಗ್ರೆಸ್ ತನ್ನ ನಿಲುವೇನು ಎಂಬುದನ್ನು ಜನತೆಯ ಮುಂದೆ ಸ್ಪಷ್ಟ ಪಡಿಸಬೇಕಿದೆ
Team Udayavani, Jan 6, 2023, 9:35 PM IST
ಮಂಗಳೂರು: ಸದಾ ಹಿಂದುತ್ವನ್ನು ದೂಷಿತ್ತಾ ಬಂದಿರುವ ಕಾಂಗ್ರೆಸ್ ನಾಯಕರು, ಇದೀಗ ಜಿಹಾದಿಗಳಾಗಿ ಬದಲಾಗಿರುವ ಕಾಂಗ್ರೆಸ್ ನಾಯಕರ ಮಕ್ಕಳೇ ಜೈಲು ಪಾಲಾಗುತ್ತಿದ್ದರೂ,ಖಂಡಿಸದೆ ಕಣ್ಮುಚ್ಚಿ ಕುಳಿತಿರುವುದು ಅದರ ಹಿಂದೂ ವಿರೋದಿ ಅಜೆಂಡಾ ಬಯಲಿಗೆ ಬಂದಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಕ್ಜರ್ ಬಾಂಬ್ ಸ್ಫೋಟದ ಬಗ್ಗೆ ಕಪೋಲಕಲ್ಪಿತವಾಗಿ ಬಿಜೆಪಿಯನ್ನು ದೂಷಿಸಿದ ಕಾಂಗ್ರೆಸ್ ನಾಯಕರು ಪಕ್ಷದ ನಾಯಕರ ಮಕ್ಕಳೇ ಜೆಹಾದಿ ಚಟುವಟಿಕೆಗಳನ್ನು ಮಾಡಿ ಸಿಕ್ಕಿಬಿದ್ದರೂ ಇದುವರೆಗೂ ಖಂಡಿಸಿಲ್ಲ.ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಹಿಂದುತ್ವದ ಪರವಾಗಿ ನಿಂತಿರುವ ಬಿಜೆಪಿ ಪಕ್ಷವನ್ನು ಪದೇ ಪದೇ ಕೋಮುವಾದಿ ಎಂದು ದೂಷಿಸುವ ಮೂಲಕ ಹಿಂದೂ ಸಮಾಜಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಮನೆಯೊಳಗೆ ದೇಶ ವಿರೋಧಿ ಶಕ್ತಿಗಳು ಇರುವುದು ತಿಳಿದರೂ ದೂಷಿಸುವ ಧೈರ್ಯವಿಲ್ಲ.ಹಿಂದೂ ಸಂಸ್ಕೃತಿ ಆಚಾರ ವಿಚಾರ, ಹಿಂದೂ ಸಮುದಾಯದ ಒಳಿತಿಗಾಗಿ ಬಿಜೆಪಿ ಸದಾ ಕೆಲಸ ಮಾಡುತ್ತಾ ಬಂದಿದೆ.ಇದಕ್ಕಾಗಿ ನಮಗೆ ಹೆಮ್ನೆಯಿದೆ.ಆದರೆ ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಒಂದು ಸಮುದಾಯವನ್ನು ತುಷ್ಟಿಕರಣ ಮಾಡುತ್ತಾ ಬಂದ ಪರಿಣಾಮ ಕಾಂಗ್ರೆಸ್ ಮುಖಂಡರ ಪುತ್ರನೊಬ್ಬ ದೇಶದ ವಿರುದ್ಧ ಕೆಲಸ ಮಾಡಿದ ಆಪಾದನೆಗೆ ಒಳಗಾಗಿ ಜೈಲು ಸೇರುವಂತಾಗಿದೆ . ಜಿಹಾದಿ ಉಗ್ರವಾದ ಬಗ್ಗೆ ಕಾಂಗ್ರೆಸ್ ತನ್ನ ನಿಲುವೇನು ಎಂಬುದನ್ನು ಜನತೆಯ ಮುಂದೆ ಸ್ಪಷ್ಟ ಪಡಿಸಬೇಕಿದೆ ಎಂದು ಡಾ.ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.