ಅಹವಾಲು ತ್ವರಿತ ವಿಲೇವಾರಿಗೆ ಡಿಸಿ ಆದೇಶ


Team Udayavani, Mar 20, 2022, 4:30 AM IST

ಅಹವಾಲು ತ್ವರಿತ ವಿಲೇವಾರಿಗೆ ಡಿಸಿ ಆದೇಶ

ಬಾಳೆಪುಣಿ: ಕುಡಿಯುವ ನೀರಿನ ಸಮಸ್ಯೆ, ಮನೆ ನಿವೇಶನ, ವಸತಿ ರಹಿತರಿಗೆ ಸರಕಾರಿ ಭೂಮಿ ನೀಡುವ ಕುರಿತು, ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಶನಿವಾರ ಬಾಳೆಪುಣಿ – ಕೈರಂಗಳ ಗ್ರಾ.ಪಂ.ನ ಹೂಹಾಕುವ ಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿಯನ್ನು ತ್ವರಿತ ವಿಲೇವಾರಿಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ನೀಡಿದರು.

ಈ ಸಂದರ್ಭ ಕೊರಗರ ಕಾಲನಿಗೆ ಭೇಟಿ ನೀಡಿದ ಅವರು, ಸ್ಥಳೀಯವಾಗಿ ಕೆರೆ ಅಭಿವೃದ್ಧಿ ಮತ್ತು ಮೂಳೂರು – ಇರಾ ಕೈಗಾರಿಕೆ ವಲಯ ಸಂಪರ್ಕಿಸುವ ರಸ್ತೆ ಸಮಸ್ಯೆಯ ಸ್ಥಳ ತನಿಖೆ ನಡೆಸಿದರು.

ವಸತಿ ಸಮಸ್ಯೆಗೆ ಹೆಚ್ಚು ಅರ್ಜಿ :

ಬಾಳೆಪುಣಿ ಮತ್ತು ಕೈರಂಗಳ ಗ್ರಾಮದಲ್ಲಿ ನಿವೇಶನ ರಹಿತರ ಸಮ ಸ್ಯೆಯೇ ಪ್ರಮುಖವಾಗಿತ್ತು. ನಿವೇಶನದ ಕುರಿತು ಅರ್ಜಿ ಸ್ವೀಕರಿಸಿ ಪಂಚಾಯತ್‌ನಲ್ಲಿ ಎಷ್ಟು ನಿವೇಶ ಕ್ಕಾಗಿ ಅರ್ಜಿ ಬಂದಿದೆ, ಅರ್ಜಿಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿಚಾರಣೆಗೆ ಉತ್ತರಿಸಿದ ಪಿಡಿಒ ಚೆನ್ನಪ್ಪ ನಾಯ್ಕ, ಈವರೆಗೆ 248 ಅರ್ಜಿ ಪಂಚಾಯತ್‌ನಲ್ಲಿದ್ದು, ಪರಿಸರ ಇಲಾಖೆಯಡಿ ಭೂಮಿಯಿದ್ದು ಅದನ್ನು ನಿವೇಶನ ರಹಿತರಿಗೆ ನೀಡಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಪರಿಸರ ಇಲಾಖೆಗೆ 15 ಎಕರೆ ಜಮೀನು ಮೀಸಲಿಟ್ಟಿದ್ದು, ಅದನ್ನು ಬಳಕೆ ಮಾಡಿಲ್ಲ ಈ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಗ್ರಾ.ಪಂ.ಗೆ

ಹಸ್ತಾಂತರಿಸಲು ತಹಶೀಲ್ದಾರ್‌ಗೆ ತಿಳಿಸಿ ದ್ದೇನೆ. ಆದರೆ 248 ನಿವೇಶನ ರಹಿತರಲ್ಲಿ ಅತೀ ಕಡು ಬಡವರನ್ನು ಗುರುತಿಸಿ ಪ್ರಥಮ ಆದ್ಯತೆಯಲ್ಲಿ ನಿವೇಶನ ನೀಡಿ ಅದಕ್ಕೆ ಸಂಬಂಧಿಸಿದಂತೆ ಪಂಚಾ

ಯತ್‌ನಲ್ಲಿ ವಾರ್ಡ್‌ವಾರು ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಸಭೆಯಲ್ಲಿ ನಿರ್ಣಯ ತೆಗೆದು ಕೊಳ್ಳಿ. ಬಳಿಕ ಪಂಚಾಯತ್‌ನಲ್ಲಿ ನಿವೇಶನ ರಹಿತರ ಮಾಹಿತಿಯನ್ನು ಸಾರ್ವ ಜನಿಕರ ಮಾಹಿತಿಗಾಗಿ ಪ್ರಕಟಿಸಿ, ಇದರಲ್ಲಿ ಅರ್ಹರನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು.

ಕ್ರಮಕೈಗೊಳ್ಳಿ  :

ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆಗೆ ತುರ್ತು ಅನುದಾನ ಬಳಸಿಕೊಂಡು ಹಳೆ ಬೋರ್‌ವೆಲ್‌ಗ‌ಳ ದುರಸ್ತಿ, ಪೈಪ್‌ಲೈನ್‌ ಸಮಸ್ಯೆ ಇರುವಲ್ಲಿ ಜಲ್‌ಜೀವನ್‌ ಮಿಷನ್‌ನಡಿ ಅನುದಾನ ಬಿಡುಗಡೆಗೆ ಅವಕಾಶವಿದ್ದು, ಸಂಬಂಧಪಟ್ಟ ಅಧಿ ಕಾರಿಗಳಿಗೆ ತುರ್ತುಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಗ್ರಾಮವಾಸ್ತವ್ಯದಲ್ಲಿ ರಸ್ತೆ ಅತಿ ಕ್ರಮಣ, ಕಾಲು ದಾರಿ ಅತಿಕ್ರಮಣಕ್ಕೆ ಸಂಬಂಧಿಸಿದ ಅರ್ಜಿಗಳಿಗೆ ಪ್ರತಿ ಕ್ರಿಯಿಸಿ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅತಿಕ್ರಮಣ ಆಗಿದ್ದರೆ ಪಿಡಿಒ ಮತ್ತು ಗ್ರಾಮಕರಣಿಕರು ಸ್ಥಳ ತನಿಖೆ ನಡೆಸಿ ಕ್ರಮ ಕೈಗೊಳ್ಳಿ, ಜಿಲ್ಲಾಧಿಕಾರಿ ಗಳಿಗೆ ಅರ್ಜಿ ನೀಡಿದ ಕಾರಣದಿಂದ ಅರ್ಜಿದಾರರ ಪರವಾಗಿ ಸ್ಪಂದನೆ ಬೇಡ, ಅಲ್ಲಿ ನ್ಯಾಯಯುತ ಪರಿಹಾರ ಕೈಗೊಳ್ಳಿ ಎಂದು ಡಿಸಿ ತಿಳಿಸಿದರು.

ಕೊರಗರ ಕಾಲನಿಗೆ ಭೇಟಿ  :

ಕುಕ್ಕುದಕಟ್ಟೆ ಸಹಿತ ಕೊರಗ ಜನಾಂಗದ ಕಾಲನಿಗೆ ಭೇಟಿ ನೀಡಿ ಅವರ ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾಭ್ಯಾಸ ಮೊಟಕುಗೊಳಿಸಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವ ರಿಗೆ ಶಿಕ್ಷಣ ಮುಂದುವರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಬಾಬು ಕೊರಗ, ಗುರುವ, ಬಾಗಿ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು.

ನಾರ್ಯ ಪರಿಶಿಷ್ಟ ಕಾಲನಿಗೆ ಭೇಟಿ ನೀಡಿ ಹಿರಿಯರ ಹೆರಸಲ್ಲಿರುವ ಜಮೀನನ್ನು ಈಗಿರುವ ಹಕ್ಕುದಾರರ ಹೆಸರ‌್ಲಲಿ ಮಾಡುವಂತೆ ಅದಾಲತ್‌ ಕರೆದು ವಿಲೇವಾರಿ ಮಾಡಲು ಸೂಚಿಸಿ ದರು. ಅನಂತರ ಮೈದಾನಕ್ಕೆ ಭೇಟಿ ನೀಡಿ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದರು.

ರಸ್ತೆ ಸ್ಥಳ ತನಿಖೆ :

ಬಾಳೆಪುಣಿ ಮತ್ತು ಇರಾ ಗ್ರಾ.ಪಂ. ಗಡಿಭಾಗದಲ್ಲಿ ಬರುವ ಇರಾ ಕೈಗಾರಿಕೆ ಸಂಪರ್ಕ ರಸ್ತೆ ದುರವಸ್ಥೆಯಿಂದ  ಜನರು ತೊಂದರೆ ಅನುಭವಿಸುತ್ತಿರವ ವಿಚಾರ ದಲ್ಲಿ ಸ್ಥಳ ತನಿಖೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಉದಯವಾಣಿ ಸುದಿನ ವರದಿಗೆ ಸ್ಪಂದನೆ  :

ಜಿಲ್ಲಾಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಉದಯವಾಣಿ ಸುದಿನದ ಶನಿವಾರದ ಸಂಚಿಕೆಯಲ್ಲಿ ಬಾಳೆಪುಣಿ ಗ್ರಾಮದ ಸಮಸ್ಯೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಈ ವರದಿಯ ಆಧಾರದಲ್ಲಿ ಕೊರಗ ಜನಾಂಗದ ಮೂಲ ಸೌಕರ್ಯ ಅಭಿವೃದ್ಧಿಗೆ, ಮೂಳೂರು ರಸ್ತೆ ದುರವಸ್ಥೆಯ ಸ್ಥಳ ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು ವಸತಿ ನಿವೇಶನಕ್ಕೆ ಸಂಬಂಧಿಸಿದ ವಿಚಾರದಲ್ಲಿ ತತ್‌ಕ್ಷಣವೇ ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು.

 

ಚರ್ಚಿತ ಪ್ರಮುಖ ಅಂಶ  :

  • ಎಪಿಎಲ್‌ನಲ್ಲಿದ್ದು, ಬಿಪಿಎಲ್‌ ಕಾರ್ಡ್‌ಗೆ ಅರ್ಹ ರಾಗಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ವೃದ್ಧಾಪ್ಯವೇತನ ಸಮರ್ಪಕವಾಗಿ ದೊರೆಯುವಂತೆ ಮಾಡಿ.
  • ಕೋವಿಡ್‌ನಿಂದ ಸಾವಿಗೀಡಾಗಿ ಅವರಿಗೆ ಪರಿಹಾರ ಬರದೇ ಇದ್ದಲ್ಲಿ ಸಾವಿಗೆ ಸಂಬಂಧಪಟ್ಟ ದಾಖಲೆಗಗಳನ್ನು ಸಲ್ಲಿಸಿ.
  • ನಿವೇಶನ ರಹಿತರಾಗಿರುವ ಜೋಗಿ ಸಮುದಾಯದ ಅನೇಕ ಕುಟುಂಬಗಳಿಗೆ ಜಮೀನು ಗುರುತಿಸಲು ಸೂಚನೆ.

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.