ದಶಮ ಸಂಭ್ರಮ ಕಾರ್ಯಕ್ರಮ
Team Udayavani, Oct 22, 2017, 11:01 AM IST
ಮಹಾನಗರ: ಕದ್ರಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ದಶಮ ಸಂಭ್ರಮವು ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಯರ್ ಕವಿತಾ ಸನಿಲ್ ಮಾತನಾಡಿ, ಸಮಾಜದ ಧ್ರುವೀಕರಣಕ್ಕಾಗಿ ಸಂಘಟನೆಗಳು ಅಗತ್ಯ. ಈ ಮೂಲಕ ಸಮಾಜದ ಋಣವನ್ನು ತೀರಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕದ್ರಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಎ.ಜೆ.ಶೆಟ್ಟಿ ಅವರು ಶುಭ ಹಾರೈಸಿದರು. ವೇದಿಕೆಯಲ್ಲಿ ಮೋಹನ್ ಅಮೀನ್, ರಾಜಶೇಖರ ಕೋಟ್ಯಾನ್, ದಿನೇಶ್ರಾಜ್, ಸುರೇಶ್ಕುಮಾರ್ ಕದ್ರಿ, ಅಕ್ಷಿತ್ ಸುವರ್ಣ, ಅಶೋಕ್ಕುಮಾರ್ ಡಿ.ಕೆ., ರೂಪಾ ಡಿ.ಬಂಗೇರ, ಪ್ರಕಾಶ್ ಸಾಲ್ಯಾನ್, ಅಧ್ಯಕ್ಷ ಭೋಜ, ಕೋಶಾಧಿಕಾರಿ ಗಿರೀಶ್ಕುಮಾರ್ ಉಪಸ್ಥಿತರಿದ್ದರು.
ಸಮ್ಮಾನ
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅರ್ಹರಿಗೆ ಸಹಾಯಧನ, ಬಹುಮಾನ ವಿತರಿಸಲಾಯಿತು. ದಿನೇಶ್ ರಾಜ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಶರ್ಮಿಳಾ ತೇಜಪಾಲ್ ಸ್ವಾಗತಿಸಿದರು. ಮಮತಾ ರಾಜೇಶ್ ಮತ್ತು ನಿರಂಜನ್ ಕೆ.ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.