ಬೈಕಂಪಾಡಿ-ಮುಕ್ಕವರೆಗೆ ಅವೈಜ್ಞಾನಿಕ ಡಿವೈಡರ್: ಅಪಘಾತ ಹೆಚ್ಚಳ
ಪ್ರಾಣಕ್ಕೆ ಕುತ್ತು ತರುತ್ತಿರುವ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಕಟ್ಟಿಂಗ್
Team Udayavani, Feb 9, 2020, 5:21 AM IST
ವಿಶೇಷ ವರದಿ–ಸುರತ್ಕಲ್: ಎನ್ಐಟಿಕೆಯ ಟೋಲ್ಗೇಟ್ ಸಮೀಪದಲ್ಲಿ ಬುಧವಾರ ಪಿಕಪ್ಗೆ ಬಸ್ ಢಿಕ್ಕಿ ಹೊಡೆದ ಘಟನೆ ಬಳಿಕ ವಿವಿಧೆಡೆ ಇರುವ ಅಪಾಯಕಾರಿ ಡಿವೈಡರ್ ಮುಚ್ಚಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.
ಹೆದ್ದಾರಿ ಇಲಾಖೆಯ ವಿನ್ಯಾಸದಂತೆ ತಿರುವಿನಲ್ಲಿ ಪ್ರತ್ಯೇಕ ಲೈನ್ ಇದ್ದು ಸಿಗ್ನಲ್ ನೀಡಿ ತಿರುಗಲು ಮುಕ್ಕ, ಪಾವಂಜೆ ಬಳಿ ಅಧಿಕೃತ ಅವಕಾಶವಿದೆ. ಆದರೆ ಬೈಕಂಪಾಡಿಯಿಂದ ಸುರತ್ಕಲ್ವರೆಗೆ ಇಂತಹ ವಿನ್ಯಾಸದ ಯಾವುದೇ ತಿರುವುಗಳಿಲ್ಲ. ಈ ಹಿಂದೆ ಹಲವು ಬಾರಿ ಸ್ಥಳೀಯರ ಒತ್ತಾಯಕ್ಕೆ ಮಣಿದು ಮುಚ್ಚಿಸಲಾಗಿತ್ತಾದರೂ ಬಳಿಕ ವಿನಾಯಿತಿ ನೀಡಲಾಗಿತ್ತು.
ಬೈಕಂಪಾಡಿ, ತಡಂಬೈಲ್, ಮುಕ್ಕ, ಪಡುಪಣಂಬೂರು ಸಹಿತ ರಸ್ತೆಯ ಎದುರಿನಲ್ಲಿಯೇ ಈ ಅಪಾಯಕಾರಿ ಡಿವೈಡರ್ ಇದೆ. ಮುಕ್ಕ, ಸುರತ್ಕಲ್ ಮತ್ತಿತರೆಡೆ ಇರುವ ಡಿವೈಡರ್ ದಾಟುವ ಸಂದರ್ಭ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿ ಮತ್ತು ಮಂಗಳೂರು ನಡುವೆ ನಿಮಷಕ್ಕೆ ಒಂದರಂತೆ ವೇಗದೂತ ಬಸ್ಗಳ ಓಡಾಟ ಒಂದಡೆಯಾದರೆ, ಮಂಗಳೂರು, ಗೋವಾ, ಮುಂಬಯಿ ಮತ್ತು ಕಾರವಾರ ಸಹಿತ ಪ್ರದೇಶಗಳಿಗೆ ಸಾಗುವ ಪ್ರಮುಖ ಹೆದ್ದಾರಿ ಇದಾಗಿದೆ. ದಿನಕ್ಕೆ ಐದಾರು ಸಾವಿರ ವಾಹನಗಳ ಓಡಾಟವಿದೆ. ಹೀಗಾಗಿ ಅಸುರಕ್ಷಿತ ಪ್ರದೇಶದಲ್ಲಿ ಪೊಲೀಸ್ ಕಾವಲು ಇಲ್ಲದೆಡೆ ಹಲವಾರು ಡಿವೈಡರ್ ಅನ ಧಿಕೃತವಾಗಿ ತೆರೆದು ಅಪಘಾತ ವಲಯ ನಿರ್ಮಿಸಲಾಗಿದೆ.
ಟೋಲ್ ಸೋರಿಕೆ!
ಮುಕ್ಕ ಬಳಿಯ ಡಿವೈಡರ್ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಟೋಲ್ ಸೋರಿಕೆಯೂ ಆಗುತ್ತಿದೆ. ಇಲ್ಲಿನ ಮಾಹಿತಿ ಹೊಂದಿರುವವರು ಕಿರಿದಾದ ಪಡ್ರೆ ರಸ್ತೆಯ ಮೂಲಕ ಸಾಗುತ್ತಾರೆ. ಅಪಾಯಕಾರಿಯಾದ ಡಿವೈಡರ್ ಮತ್ತು ಕಿರಿದಾದ ಪಡ್ರೆ ರಸ್ತೆ ಸೇರಿ ಕೊಂಡ ಫಲವಾಗಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಬೀಚ್ ರಸ್ತೆಯೂ ಅಗಲ ಕಿರಿದಾಗಿದ್ದರೂ ದೊಡ್ಡ ವಾಹನಗಳೂ ಓಡಾಟ ನಡೆಸುತ್ತಿವೆ. ಧಾವಂತದ ಓಡಾಟಕ್ಕೆ ಇನ್ನಷ್ಟು ಸ್ಥಳೀಯರ ಪ್ರಾಣ ಹರಣವಾಗುವ ಮುನ್ನ ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಅನಧಿಕೃತ ಡಿವೈಡರ್ ಮುಚ್ಚಲು ಬದ್ಧ
ಈಗಾಗಲೇ ಡಿವೈಡರ್ ತುಂಡರಿಸಿದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಇಲ್ಲಿ ಅಪಘಾತವಲಯವಾಗುತ್ತಿರುವ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಜಿಲ್ಲಾಡಳಿತ ರಕ್ಷಣೆಯೊಂದಿಗೆ ಅನ ಧಿಕೃತ ಡಿವೈಡರ್ ಮುಚ್ಚಲು ಹೆದ್ದಾರಿ ಇಲಾಖೆ ಬದ್ಧವಾಗಿದೆ.
-ಶಿಶುಮೋಹನ್,
ಯೋಜನ ನಿರ್ದೇಶಕ, ಎನ್ಎಚ್ಎಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ