ವೆಲೆನ್ಸಿಯಾದ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ “ಜಲ ಬಂಧನ’ಕ್ಕೆ ಚಾಲನೆ

"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನ ಪರಿಣಾಮ

Team Udayavani, Jul 4, 2019, 5:11 AM IST

0307MLR24-VALENCIA

ಮಹಾನಗರ: ಮಂಗಳೂರು ನಗರ ಸೇರಿದಂತೆ ಕರಾವಳಿ ಭಾಗದಲ್ಲಿ ಮುಂಗಾರು ಮತ್ತಷ್ಟು ದುರ್ಬಲವಾಗುತ್ತಿದ್ದು, ನೀರಿನ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿ ಒಂದು ತಿಂಗಳು ಕಳೆದಿದ್ದು, ಎಲ್ಲಿಯೂ ವಾಡಿಕೆಯಷ್ಟು ಕೂಡ ಮಳೆ ಬಂದಿಲ್ಲ.

ಸಾಮಾನ್ಯವಾಗಿ ಮಳೆಗಾಲದ ಅವಧಿಯು ಮುಂಗಾರು ಹಾಗೂ ಹಿಂಗಾರು ಸೇರಿ ಜೂನ್‌ನಿಂದ ನವೆಂಬರ್‌ 2ನೇ ವಾರದವರೆಗೆ ಇರುವುದು ವಾಡಿಕೆ. ಈ ಕಾರಣದಿಂದ ಜುಲೈ- ಆಗಸ್ಟ್‌ನಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಬಹುದು ಎನ್ನುವ ಲೆಕ್ಕಾಚಾರ ಹವಾಮಾನ ತಜ್ಞರದ್ದು. ಹೀಗಿರುವಾಗ, ಒಂದು ವೇಳೆ, ಬಾಕಿ ಉಳಿದಿರುವ ಎರಡು ಅಥವಾ ಮೂರು ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದರೆ, ಆ ನೀರನ್ನು ಸಂರಕ್ಷಿಸುವ ಅಥವಾ ಸಂಗ್ರಹಿಸುವತ್ತ ಕಾರ್ಯಪ್ರವೃತಗೊಳ್ಳಬೇಕಾದ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಇದಕ್ಕಿರುವ ಏಕೈಕ ಮಾರ್ಗ ಮಳೆಕೊಯ್ಲು.

ಇದನ್ನು ಪ್ರೇರೇಪಿಸುವ ಸಲುವಾಗಿ ಉದಯವಾಣಿ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಈಗ ನಿರೀಕ್ಷೆಗೂ ಮೀರಿದ ಫಲ ನೀಡುತ್ತಿದೆ. ಮನೆ, ಸಂಘಸಂಸ್ಥೆಗಳು ಮಾತ್ರವಲ್ಲ ದೇವಸ್ಥಾನ, ಚರ್ಚ್‌ಗಳಲ್ಲೂ ಅಳವಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಈಗ ನಗರದ ವೆಲೆನ್ಸಿಯಾದಲ್ಲಿರುವ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಕೆ ಕಾಮಗಾರಿ ಪ್ರಾರಂಭಗೊಂಡಿದೆ.

ಗೋಲ್ಡನ್‌ ಜುಬ್ಲಿ ಸಭಾಂಗಣ, ಕಾನ್ಫರೆನ್ಸ್‌ ಹಾಲ್‌, ಪೆರಾರ್‌ ಹಾಲ್‌, ಚರ್ಚ್‌ ಆಫೀಸ್‌, ಧರ್ಮಗುರುಗಳ ಮನೆ ಸಹಿತ ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದುರ ಚರ್ಚ್‌ನಲ್ಲಿ ಒಂದು ಹಳೆ ಬಾವಿ ಮತ್ತು ಕೊಳವೆ ಬಾವಿಗಳಿವೆ. ಇದೇ ಕಾರಣಕ್ಕೆ ಕಳೆದ ವರ್ಷದವರೆಗೆ ನೀರಿನ ಅಭಾವ ಬರಲಿಲ್ಲ. ಆದರೆ ಈ ವರ್ಷ ಮಾರ್ಚ್‌ನಲ್ಲೇ ಬಾವಿಯಲ್ಲಿ ನೀರು ಬತ್ತಿದ್ದು, ಸಂಪ್‌ನಲ್ಲಿದ್ದ ನೀರು ಕೂಡ ಖಾಲಿಯಾಗಿತ್ತು. ಈ ಕಾರಣಕ್ಕೆ ನೀರಿನ ಉಪಯೋಗಕ್ಕೆ ಕೊಳವೆ ಬಾವಿ ಉಪಯೋಗಿಸುತ್ತಿದ್ದರು. ಬೇಸಗೆ ಕೊನೆಯಲ್ಲಿ ಕೊಳವೆ ಬಾವಿಯಲ್ಲೂ ನೀರು ಖಾಲಿಯಾಗಿತ್ತು.

ಚರ್ಚ್‌ ಸುತ್ತಮುತ್ತಲಿನ ಹೂದೋಟಗಳು ಇವೆ. ಆದರೆ, ಈ ಬೇಸಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದರಿಂದ ಇದಕ್ಕೆ ಹಾಯಿಸಲು ಸಮರ್ಪಕ ನೀರು ಇರಲಿಲ್ಲ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ತಡೆಯಬೇಕು ಎಂಬ ಉದ್ದೇಶದಿಂದ ಈಗ ಚರ್ಚ್‌ನಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ.

ಚರ್ಚ್‌ನ ಮೇಲ್ಛಾವಣಿಯಿಂದ ಪೈಪ್‌ ಮುಖೇನ ನೀರು ಬಂದು ಬಾವಿಗೆ ಸಂಪರ್ಕ ಕಲ್ಲಿಸಲಾಗುತ್ತಿದೆ. ಬಾವಿ ಪಕ್ಕದಲ್ಲಿ ಫಿಲ್ಟರ್‌ ಇಡಲಾಗಿದ್ದು, ಶುದ್ಧ ನೀರು ಬಾವಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನ ಗಳಲ್ಲಿ ಕೊಳವೆ ಬಾವಿಗೂ ಮಳೆನೀರು ಕೊಯ್ಲು ಸಂಪರ್ಕ ಕಲ್ಪಿಸಲಾಗುತ್ತದೆ.

ಪೋಪ್‌ ಅವರಿಂದ ಕರೆ
ಕ್ರಿಶ್ಚಿಯನ್‌ ಸಮುದಾಯದ ಪೋಪ್‌ ಅವರು “ಲಾವುದಾತೊಸಿ’ (ದೇವರಿಗೆ ಮಹಿಮೆಯಾಗಲಿ) ಎಂಬ ಧ್ಯೇಯ ವಾಕ್ಯದೊಂದಿಗೆ ಪರಿಸರ ಸಂರಕ್ಷಿಸಬೇಕು ಎಂಬ ಕರೆ ನೀಡಿದ್ದರು. ಅಲ್ಲದೆ ಮಂಗಳೂರು ಬಿಷಪ್‌ ಡಾ| ಪೀಟರ್‌ ಪೌಲ್‌ ಸಲ್ಡಾನ ಅವರು ಪರಿಸರ ಸಂರಕ್ಷಣೆ ಬಗ್ಗೆ ಚಿಂತಿಸುವಂತೆ ಸಲಹೆ ನೀಡಿದ್ದರು. ಇದರ ಅಂಗವಾಗಿ ಈಗಾಗಲೇ ಗಿಡಗಳನ್ನು ನೆಡಲಾಗಿದೆ.

ಎರಡನೇ ಹಂತವಾಗಿ “ಜಲಬಂಧನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಅದರಆಂಗವಾಗಿ ಮಳೆನೀರು ಕೊಯ್ಲು ಅಳವಡಿಸಲಾಗುತ್ತಿದೆ.

ರವಿವಾರ ಚಾಲನೆ
ವೆಲೆನ್ಸಿಯಾದಲ್ಲಿರುವ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ ಅಳವಡಿಸುತ್ತಿರುವ ಮಳೆನೀರು ಕೊಯ್ಲು ಕಾರ್ಯಕ್ರಮದ ಉದ್ಘಾಟನೆಯು ಚರ್ಚ್‌ನ ಗೋಲ್ಡನ್‌ ಜುಬ್ಲಿ ಸಭಾಂಗಣದಲ್ಲಿ ಜು.7ರಂದು ಬೆಳಗ್ಗೆ 8.45 ನಡೆಯಲಿದೆ. ಚರ್ಚ್‌ಗೆ ಒಳಪಟ್ಟ 1,250 ಕುಟುಂಬ ಸದಸ್ಯರು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಅವರು ಮಳೆನೀರು ಕೊಯ್ಲು ಬಗ್ಗೆ ಮಾಹಿತಿ ನೀಡಲಿದ್ದಾರೆ.

 ಮಳೆನೀರು ಹಿಡಿದಿಟ್ಟು ಬಾವಿಗೆ
ಪರಿಸರದ ಬಗ್ಗೆ ಕಾಳಜಿ ಹೊಂದಬೇಕು ಎಂದು ಪೋಪ್‌ ಅವರು ಕರೆ ನೀಡಿದ್ದರು. ಅದರ ಪ್ರಕಾರ ಮಂಗಳೂರು ಡಯಾಸಿಸ್‌ನ ಬಿಷಪ್‌ ಅವರು ಪರಿಸರ ಸಂರಕ್ಷಣೆಗೆ ಮನವಿ ಮಾಡಿದ್ದರು. ಇದೇ ಕಾರಣಕ್ಕೆ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿದ್ದೇವೆ. ಮಳೆ ನೀರನ್ನು ಪೋಲು ಮಾಡದೆ ಹಿಡಿದಿಟ್ಟುಕೊಂಡು ಬಾವಿ ನೀರು ಬಿಡಲಾಗುತ್ತಿದೆ.
– ರೆ|ಫಾ| ಜೇಮ್ಸ್‌ ಡಿ’ಸೋಜಾ, ಪ್ರ. ಧರ್ಮಗುರುಗಳು, ವೆಲೆನ್ಸಿಯಾ ವಿನ್ಸೆಂಟ್‌ ಪೆರಾರ್‌ ಚರ್ಚ್‌

ಉದಯವಾಣಿ ಅಭಿಯಾನದಿಂದ ಪ್ರೇರಣೆ
“ಉದಯವಾಣಿ’ ಪತ್ರಿಕೆಯು ಕಳೆದ ಕೆಲವು ವಾರಗಳಿಂದ ಮನೆ ಮನೆಗೆ ಮಳೆಕೊಯ್ಲು ಎಂಬ ಅಭಿಯಾನ ಗಮನಿಸಿ ಚರ್ಚ್‌ನಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲು ಮುಂದಾದೆವು. ನಿರ್ಮಿತಿ ಕೇಂದ್ರದ ಪರಿಣಿತರ ಮಾರ್ಗದರ್ಶನ ಪಡೆದು ಈಗ ಸುಮಾರು ಎರಡು ಲಕ್ಷ ರೂ. ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ.
– ಅನಿಲ್‌ ಲೋಬೊ,
ಉಪಾಧ್ಯಕ್ಷ ವೆಲೆನ್ಸಿಯಾ ವಿನ್ಸೆಂಟ್‌ ಪೆರಾರ್‌ ಚರ್ಚ್‌

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.