ನೇತ್ರದಾನದಿಂದ ವ್ಯಕ್ತಿಗೆ ಮರುಜೀವ : ಮೀನಾಕ್ಷಿ
Team Udayavani, Mar 21, 2017, 5:09 PM IST
ಕೊಟ್ಟಾರ: ಕಣ್ಣು ದೇಹದ ಅತಿ ಶ್ರೇಷ್ಠ ಅಂಗವಾಗಿದ್ದು, ಅದು ನಮಗೆ ಜಗತ್ತಿನ ಬೆಳಕನ್ನು ತೋರಿಸುತ್ತದೆ. ನಾವು ನೇತ್ರದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡರೆ ಒಬ್ಬ ವ್ಯಕ್ತಿಗೆ ಮರುಜೀವ ಕೊಟ್ಟ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.
ಇಲ್ಲಿನ ಜಿ.ಪಂ.ಸಭಾಂಗಣದಲ್ಲಿ ಜಿ.ಪಂ.ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿ.ಪಂ. ಅಧಿಕಾರಿಗಳು ಹಾಗೂ ಸಿಬಂದಿಗೆ ಸೋಮವಾರ ಆಯೋಜಿಸಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೇತ್ರದಾನದ ಮಹತ್ವ ಅರಿತುಕೊಂಡು ಅದನ್ನು ಇನ್ನೊಬ್ಬರಿಗೂ ತಿಳಿಸುವ ಪ್ರಯತ್ನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಮಾತನಾಡಿ, ನಮ್ಮ ದೈನಂದಿನ ಬದುಕಿನ ಸಮಯ ನಿರ್ವ ಹಣೆಯಲ್ಲಿ ಎಡವುತ್ತಿರುವುದರಿಂದ ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಒತ್ತಡ ಎನ್ನುವುದು ನಮ್ಮ ಇಡೀ ಕಾರ್ಯವೈಖರಿಯನ್ನು ಕಟ್ಟಿ ಹಾಕುತ್ತಿದ್ದು, ನಾವು ಅದರ ನಿರ್ವಹಣೆ ಕೌಶಲವನ್ನು ಕರಗತ ಮಾಡಿಕೊಂಡಿರಬೇಕು.
ಸಹಾಯ ಎನ್ನುವುದನ್ನು ನಾವು ಒಂದು ಧರ್ಮವಾಗಿ ಸ್ವೀಕರಿಸಿಕೊಂಡಿದ್ದೇವೆ. ಸತ್ತ ಬಳಿಕ ಮಣ್ಣಾಗಿ ಹೋಗುವ ದೇಹದ ಕೆಲವು ಭಾಗಗಳನ್ನು ದಾನ ಮಾಡುವುದರಿಂದ ನಮ್ಮ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ನಾವು ಜೀವನದ ಸಂಭ್ರಮದ ಕ್ಷಣಗಳನ್ನು ಇಂತಹ ದಾನಗಳ ಮೂಲಕ ಆಚರಿಸಬೇಕು. ನಾನು ಮತ್ತು ನನ್ನ ಹೆಂಡತಿ ನಮ್ಮ ಮದುವೆಯ 25ನೇ ವರ್ಷದ ಸಂಭ್ರಮವನ್ನು ನೇತ್ರ ದಾನ ನೋಂದಣಿ ಮಾಡುವ ಮೂಲಕ ಆಚರಿಸಿದ್ದೇವೆ ಎಂದು ಡಾ| ರವಿ ತಿಳಿಸಿದರು.
ಉದ್ಘಾಟನೆಯ ಬಳಿಕ ಕುಷ್ಠರೋಗ ನಿರ್ವಹಣೆ, ನೇತ್ರದಾನ ಅರಿವು ಹಾಗೂ ಒತ್ತಡ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ಸಂಪನ್ಮೂಲಕ ವ್ಯಕ್ತಿಗಳಾದ ಡಾ| ಜಯಂತ್, ಡಾ| ಶ್ರೀನಿವಾಸ್ ಭಟ್ ವೇದಿಕೆಯಲ್ಲಿದ್ದರು. ವೈದ್ಯಾಧಿಕಾರಿ ಡಾ| ರತ್ನಾಕರ್ ಸ್ವಾಗತಿಸಿದರು.
ವೆನಲಾಕ್ಗೆ ನೇತ್ರಬ್ಯಾಂಕ್.!
ವೈದ್ಯಕೀಯ ಕ್ಷೇತ್ರದಲ್ಲಿ ಮಂಗಳೂರು ಅಭಿವೃದ್ಧಿ ಸಾಧಿಸಿದ್ದರೂ, ನಗರದಲ್ಲಿ ಸರಕಾರಿ ನೇತ್ರಬ್ಯಾಂಕ್ ಇಲ್ಲ ಎಂಬ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವೆನಲಾಕ್ ಆಸ್ಪತ್ರೆಗೆ ನೇತ್ರ ಬ್ಯಾಂಕ್ ಮಂಜೂರು ಮಾಡ ಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಈ ಕುರಿತು ವೈದ್ಯ ಕೀಯ ಅಧೀಕ್ಷಕರಲ್ಲಿ ಮಾತುಕತೆ ನಡೆಸ ಲಾಗಿದ್ದು, 10 ಸಾವಿರ ಮಂದಿ ಯಿಂದ ನೇತ್ರದಾನದ ಕುರಿತು ನೋಂದಣಿ ಮಾಡಿಸಿಕೊಳ್ಳುವ ಯೋಚನೆ ಇದೆ ಎಂದು ಜಿ. ಪಂ. ಸಿಇಒ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ