ಗುರುಪುರ ಕೃತಕ ನೆರೆ ಭೀತಿ: ಚರಂಡಿ ಹೂಳೆತ್ತುವಿಕೆ
Team Udayavani, Jun 9, 2019, 6:10 AM IST
ಗುರುಪುರ: ಕಳೆದ ವರ್ಷ ಸಂಭವಿಸಿದ ಭಾರೀ ಮಳೆಯಿಂದ ನೆರಹಾವಳಿ ಉಂಟಾಗಿ ಗುರುಪುರದಿಂದ ಕೈಕಂಬದವರೆಗಿನ ರಾಷ್ಟ್ರೀಯ ಹೆದ್ದಾರಿ 169 ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಕೃತಕ ನೆರೆಹಾವಳಿಯ ಹೂಳೆತ್ತುವ ಕೆಲಸ ಆರಂಭವಾಗಿದೆ. ಕೆಲವು ಆಯ್ದ ಪ್ರದೇಶಗಳಲ್ಲಿ ಇನ್ನೂ ಹೂಳೆತ್ತದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಹೂಳೆತ್ತದ ಗುರುಪುರ-ಕೈಕಂಬದ ಮಾರುಕಟ್ಟೆ ರಸ್ತೆ ಯಲ್ಲಿ ಈ ಬಾರಿ ಹೂಳೆತ್ತಿದರೂ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲೇ ಹಾಕಲಾಗಿದೆ. ಈ ತ್ಯಾಜ್ಯ ಕೊಳೆತ ಸ್ಥಿತಿಯಲ್ಲಿದ್ದು ವಿಲೇಗೊಳಿಸದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಕಂಬದ ಒಳಚರಂಡಿಯನ್ನು ತೆರೆಯದಿರುವುದರಿಂದ ಅದರ ಮಣ್ಣು-ತ್ಯಾಜ್ಯದಿಂದ ಭರ್ತಿಯಾಗಿದೆ. ಭಾರೀ ಪ್ರಮಾಣದಲ್ಲಿ ಮಳೆಯೂ ಈ ಬಾರಿಯೂ ಬಂದರೆ ಮತ್ತೆ ಕೃತಕ ನೆರೆಹಾವಳಿ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಇದೆಲ್ಲ ಮಾರುಕಟ್ಟೆ ಸಮೀಪ ಶೇಖರಗೊಂಡು ಕೊಳೆಯುವ ಸಾಧ್ಯತೆ ಇದೆ. ಮೀನು ಮಾರುಕಟ್ಟೆಯ ಕೊಳಚೆ ನೀರು ಈಗಾಗಲೇ ಅಲ್ಲಿ ಸೇರು ತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಅಡ್ಡೂರಿಗೆ ಹೋಗುವ ತಿರುವು ರಸ್ತೆ ಸಮೀಪ ಇನ್ನೂ ಚರಂಡಿ ನಿರ್ಮಿ ಸದಿರುವುದರಿಂದ ಈ ಬಾರಿಯೂ ಗುಡ್ಡದ ನೀರು ರಸ್ತೆಯ ಮೇಲೆಯೇ ಹರಿದುಹೋಗುವ ಸಂಭವವಿದೆ. ಕೆಲವು ಭಾಗಗಳಲ್ಲಿ ಮಾತ್ರ ಹೂಳೆತ್ತಿದ್ದು, ಕಾಟಾ ಚಾರಕ್ಕೆ ಮುಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.