ಪತ್ತನಾಜೆಯ ಎಫೆಕ್ಟ್: ನಾಟಿ ಕೋಳಿ ಕೆ.ಜಿ.ಗೆ 360 ರೂ.


Team Udayavani, May 24, 2017, 11:45 PM IST

Naati-Koli-Original-600.jpg

ನಗರ: ತುಳುನಾಡಿನಲ್ಲಿ ಪತ್ತನಾಜೆ (ಹತ್ತನಾವಧಿ) ಆಚರಣೆಯಲ್ಲಿ ದೈವಗಳಿಗೆ ಕೋಳಿ ಬಲಿ ನೀಡುವ ಸಂಪ್ರದಾಯ ಪ್ರಮುಖವಾಗಿರುವುದರಿಂದ ನಾಟಿ ಕೋಳಿಗೆ ವ್ಯಾಪಕ ಬೇಡಿಕೆ ಉಂಟಾಗಿದೆ ಮತ್ತು ಬೆಲೆಯೂ ವಿಪರೀತ ಏರಿಕೆ ಕಂಡಿದೆ. ತುಳುನಾಡಿನ ನಂಬಿಕೆ, ಆಚರಣೆಗೆ ಪೂರಕವಾಗಿ ಪತ್ತನಾಜೆ ಆಚರಣೆಯ ಅಗೇಲು, ತಂಬಿಲಾದಿಗಳು ಮೇ 24ರಂದು ನಡೆಯಲಿವೆ. ಹತ್ತನಾವಧಿಯಂದು ತುಳುನಾಡಿನಲ್ಲಿ ದೈವಾರಾಧನೆಗೆ ಪೂರಕವಾಗಿ ಬನಗಳಲ್ಲಿ ದೈವಗಳಿಗೆ ಕೋಳಿ ಬಲಿಕೊಡುವುದು, ಎಳನೀರು ಹಾಗೂ ಇತರ ಪರಿಕರಗಳನ್ನು ಇಟ್ಟು ದೈವಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಆಚರಣೆ ರೂಢಿಯಲ್ಲಿದೆ.

ಹತ್ತನಾವಧಿಯವರೆಗೆ ಬೇಡಿಕೆ
ಈ ದಿನ ಗುಳಿಗ, ಭೈರವ ದೈವ ಮೊದಲಾದ ದೈವಗಳಿಗೆ ಭಕ್ತರು ವಿವಿಧ ನಿವೇದನೆಗಳನ್ನು ಮಾಡಿ ಪ್ರಾರ್ಥಿಸುತ್ತಾರೆ, ಹರಕೆಗಳನ್ನು ಒಪ್ಪಿಸುತ್ತಾರೆ. ಹತ್ತನಾವಧಿಯವರೆಗೆ ಭೂತ ಕೋಲಗಳು ನಡೆದು ಅನಂತರದಲ್ಲಿ ಗೆಜ್ಜೆ ಬಿಚ್ಚುವ ನಂಬಿಕೆ ಇರುವುದರಿಂದ ಹತ್ತನಾವಧಿಯವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.

ಬೇಡಿಕೆ ಇದ್ದರೂ ಸಾಕುವವರಿಲ್ಲ
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವೆಂದು ಪರಿಗಣಿಸಲ್ಪಟ್ಟಿರುವುದರಿಂದ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ವಿರಳವಾಗಿರುವ ನಾಟಿ ಕೋಳಿ ಸಾಕುವವರಲ್ಲಿ ನಾಟಿ ಕೋಳಿ ಖರೀದಿಸಲು ಎಲ್ಲ ಸಮಯದಲ್ಲೂ ಬೇಡಿಕೆ ಇದ್ದರೂ ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಹತ್ತನಾವಧಿಯ ಸಂದರ್ಭದಲ್ಲಿ ನಾಟಿ ಕೋಳಿ ಸಾಕಣೆದಾರರು ಹೇಳಿದ ಬೆಲೆ ಲಭಿಸುತ್ತದೆ. ಆದರೆ ಅಂಕದ ಕೋಳಿಗಳಿಗೆ ಕೆ.ಜಿ. ಲೆಕ್ಕದ ದರ ಲಗಾವಾಗುವುದಿಲ್ಲ, ಬದಲಾಗಿ ಕೋಳಿಯೊಂದರ ಅದರ ಜಾತಿಯನ್ನು ಅವಲಂಬಿಸಿ 1,000ರಿಂದ 10 ಸಾವಿರ ರೂ. ತನಕವೂ ಬೆಲೆ ಬಾಳುತ್ತದೆ.

ನಾಟಿ ಕೋಳಿಯ ಬೇಡಿಕೆಯನ್ನು ಆಧರಿಸಿ ಬ್ರಾಯ್ಲರ್‌, ಟೈಸನ್‌ ಕೋಳಿ ಫಾರ್ಮ್ಗಳು ಇರುವಂತೆ ನಾಟಿ ಕೋಳಿ ಮಾರಾಟದ ಫಾರ್ಮ್ಗಳೂ ಹುಟ್ಟಿಕೊಂಡಿವೆ. ಪುತ್ತೂರು ತಾಲೂಕಿನ ಪಡೀಲ್‌ ಸೇರಿದಂತೆ 5-6 ಕಡೆಗಳಲ್ಲಿ ಸೀಸನ್‌ ಅವಧಿಗೆ ನಾಟಿ ಕೋಳಿ ಫಾರ್ಮ್ನಲ್ಲಿ ಕ್ಯೂ ಆರಂಭಗೊಳ್ಳುತ್ತದೆ. ಇನ್ನು ನಾಟಿ ಕೋಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಹೈಬ್ರೀಡ್‌ ಊರಿನ ಕೋಳಿಗಳಾದ ಮೈಸೂರು, ಮಂಡ್ಯಗಳಿಂದ ಆಮ ದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ. ತಮಿಳುನಾಡಿನಿಂದ ಆಮದಾಗುವ ಹೈಬ್ರೀಡ್‌ ಕೋಳಿಗಳು ತೂಕದಲ್ಲಿ ಹೆಚ್ಚು ತೂಗುತ್ತವೆ.

ಒಂಜಿ ಕೋರಿ ಆವೊಡು
ಹತ್ತನಾವಧಿಗೆ 4-5 ತಿಂಗಳಿಗೆ ಮೊದಲೇ ಕೋಳಿ ಮರಿ ಸಂಪಾದಿಸಿ ಹತ್ತನಾವಧಿಗೆ ಸಿದ್ಧಗೊಳ್ಳುವಂತೆ ಸಾಕುವವರೂ ಇದ್ದಾರೆ. ಹತ್ತನಾವಧಿ ಸಮೀಪಿಸಿದಾಗ ಎಚ್ಚೆತ್ತುಕೊಳ್ಳುವವರು ಎಂಕ್‌ ಒಂಜಿ ಕೋರಿ ಆವೊಡು (ನನಗೆ ಒಂದು ಕೋಳಿ ಆಗಬೇಕು)ಎಂದು ಮನೆ ಮನೆಗೆ ಸಂದರ್ಶಿಸುತ್ತಾರೆ. ಕೊನೆಗೆ ನಾಟಿ ಕೋಳಿ ಸಾಕಾಣೆದಾರರು ಕೇಳಿದಷ್ಟು ಹಣವನ್ನು ಕೊಟ್ಟು ಖರೀದಿಸುತ್ತಾರೆ.

ಸೀಸನ್‌ ಬೇಡಿಕೆ
ಪತ್ತನಾಜೆಯ ಸೀಸನ್‌ ಅವಧಿಯಲ್ಲಿ ದಿನವೊಂದರ 1 ಕ್ವಿಂಟಾಲ್‌ಗ‌ೂ ಮಿಕ್ಕಿ ನಾಟಿ ಕೋಳಿಗಳಿಗೆ ಬೇಡಿಕೆ ಇದೆ. ಮಂಗಳೂರು ಸಹಿತ ಜಿಲ್ಲೆಯ ವಿವಿಧ ಕಡೆಗಳಿಂದ ನಾಟಿ ಕೋಳಿಗಾಗಿ ಬರುತ್ತಾರೆ. ಪತ್ತನಾಜೆಯ ಬಳಿಕ ಆರಾಧನೆಗಳು ಇರದಿರು ವುದರಿಂದ ಬೇಡಿಕೆ ಕಡಿಮೆಯಾಗುತ್ತದೆ. ಸೀಸನ್‌ ಅವಧಿಯಲ್ಲಿ ಯಾವ ಗಾತ್ರದ ಕೋಳಿ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬುದು ಪಡೀಲು ನಾಟಿ ಕೋಳಿ ವ್ಯಾಪಾರಿ ಮೋಹನ್‌ ಶೆಟ್ಟಿ ಅವರ ಅಭಿಪ್ರಾಯ.

ಕೆ.ಜಿ.ಗೆ 360 ರೂ.
ಪ್ರಸ್ತುತ ಸಾದಾ ಊರಿನ ಕೋಳಿಗೆ ಕೆ.ಜಿ.ಯೊಂದರ 360 ರೂ.ಗೆ ಮಾರಾಟವಾಗುತ್ತಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾಗುವ ಹೈಬ್ರೀಡ್‌ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 200ರಿಂದ 250 ರೂ. ತನಕ ಮಾರಾಟವಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಮೇ 23, 24ರಂದು ಈ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬಿಳಿ ಗರಿ ಕೋಳಿ ಬೇಡ
ದೈವಗಳಿಗೆ ಬಲಿ ಕೊಡುವ ಸಂದರ್ಭದಲ್ಲಿ ಹುಂಜವನ್ನೇ ಬಲಿ ಕೊಡಬೇಕು, ಸಂಪೂರ್ಣ ಬಿಳಿ ಗರಿಗಳನ್ನು ಹೊಂದಿರುವ ಕೋಳಿಯನ್ನು ಬಲಿ ಕೊಡಬಾರದು ಎಂಬ ನಂಬಿಕೆ ತುಳು ನಾಡಿನಲ್ಲಿದೆ. ಈ ಕಾರಣದಿಂದ ಒಂದು ಗರಿಯಾದರೂ ಬೇರೆ ಬಣ್ಣವನ್ನು ಹೊಂದಿರುವ ಕೋಳಿಯನ್ನೇ ಆಯ್ದುಕೊಳ್ಳುತ್ತಾರೆ.

– ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.