ಮರವೂರು ಸೇತುವೆ ರಕ್ಷಣೆಗೆ ಹೈಟೆಕ್‌ ತಂತ್ರಜ್ಞಾನ

ಕೋಲ್ಕತ ತಜ್ಞರಿಂದ ಕಾಮಗಾರಿ

Team Udayavani, Apr 26, 2019, 6:00 AM IST

2504BAJ1

ಮರವೂರು ಸೇತುವೆಯ ಹೈಟೆಕ್‌ ಕಾಮಗಾರಿ ಕೈಗೊಂಡಿರುವುದು.

ಬಜಪೆ: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆಯ ಸ್ಲ್ಯಾಬ್‌ಗಳ ನಡುವೆ ಅಂತರ ಹಿಗ್ಗಿರುವ ಹಿನ್ನೆಲೆಯಲ್ಲಿ ಹೈಟೆಕ್‌ ಶೈಲಿಯ ವಿನೂತನ ಮಾದರಿ ಸ್ಟ್ರಿಪ್‌ ಸೀಲ್ ವಿಸ್ತರಣೆ ಜೋಡಣೆಯನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ.

ಇಲಾಖೆಯ ಬೆಂಗಳೂರಿನ ತಾಂತ್ರಿಕ ಸಲಹೆಗಾರರ ಸೂಚನೆಯ ಮೇರೆಗೆ ಇದೀಗ ಕೋಲ್ಕತ್ತದಿಂದ ಆಗಮಿಸಿರುವ ತಾಂತ್ರಿಕ ಪರಿಣತರು ಮರವೂರು ಸೇತುವೆಯಲ್ಲಿ ವಿಸ್ತರಣೆ ಜೋಡಣೆ ಆರಂಭಿಸಿದ್ದಾರೆ. ಬುಧವಾರ ಈ ಕಾಮಗಾರಿ ಆರಂಭಗೊಂಡಿದ್ದು, ಒಂದು ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹಳೆಯ ಸೇತುವೆಗಳ ಸ್ಲ್ಯಾಬ್‌ಗಳ ನಡುವೆ ಅಂತರ ಸಮಯ ಕಳೆದಂತೆ ಹಿಗ್ಗುವುದು ಹಾಗೂ ಕುಗ್ಗುವ ಸ್ವರೂಪ ಪಡೆದುಕೊಳ್ಳುತ್ತದೆ. ಇದರಂತೆ ಈ ಹಿಂದೆ ರಾಡ್‌ಗಳನ್ನು ಹಾಕಿ ಈ ವಿಸ್ತರಣೆಯನ್ನು ಜೋಡಣೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನದಲ್ಲಿ ವಿಸ್ತರಣೆ ಜೋಡಣೆಗೆ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಅದರಂತೆ, ಸ್ಲ್ಯಾಬ್‌ನ ಸ್ವಲ್ಪ ಭಾಗವನ್ನು ತುಂಡರಿಸಿ, ಅದರೊಳಗಡೆ ಇರುವ ರಾಡ್‌ಗೆ ವೆಲ್ಡ್ ಮಾಡುವ ಮೂಲಕ ಜೋಡಣೆ ನಡೆಸಲಾಗುತ್ತದೆ. ರಾ.ಹೆ.ಪ್ರಾಧಿಕಾರದ ಬಹುತೇಕ ಸೇತುವೆಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ. ಅದೇ ರೀತಿ ಮರವೂರು ಸೇತುವೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಸೇತುವೆಯ ಫಿಲ್ಲರ್‌ನ ಮೇಲೆ ಎರಡು ಸ್ಲ್ಯಾಬ್‌ಗಳು ಕೂಡುವಲ್ಲಿ ನಡುವೆ ಅಂತರ ಹೆಚ್ಚಾಗಿ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ಲಘುವಾಹನಗಳಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಜತೆಗೆ ಈ ಅಂತರದ ಮೂಲಕ ಸೇತುವೆಯ ಕೆಳಗೆ ಹರಿಯುವ ನದಿ ನೀರು ಕೂಡ ಕಾಣಿಸುತ್ತಿತ್ತು. ಆದರೆ, ಕೆಲವು ಸಮಯದ ಹಿಂದೆ ಡಾಮರೀಕರಣ ಕಾರಣ ಅದು ತಾತ್ಕಾಲಿಕವಾಗಿ ಪರಿಹಾರ ಕಂಡಿತ್ತು. ಅದರೆ ಮತ್ತೆ ಸೇತುವೆಯ ಸ್ಲ್ಯಾಬ್‌ಗಳ ಅಂತರ ಅಧಿಕವಾದ ಹಿನ್ನೆಲೆಯಲ್ಲಿ ಇದೀಗ ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಮುಂದಾಗಿದೆ.

ಈ ಹಿಂದೆಯೇ ಎಚ್ಚರಿಸಿದ್ದ ಉದಯವಾಣಿ
5ವರ್ಷದ ಹಿಂದೆ ಸೇತುವೆಯ ಸ್ಲ್ಯಾಬ್‌ಗಳ ನಡುವಿನ ಅಂತರ ಹೆಚ್ಚಾದ ಕುರಿತಂತೆ ಉದಯವಾಣಿ ವರದಿ ಮಾಡಿತ್ತು. ಸ್ಲ್ಯಾಬ್‌ಗಳ ಬಿರುಕು ದೊಡ್ಡದಾದ ಕಾರಣ ಲಘು ವಾಹನಗಳಿಗೆ ತೊಂದರೆಯ ಬಗ್ಗೆಯೂ ಅಂದು ಉಲ್ಲೇಖೀಸಲಾಗಿತ್ತು.

ಅದು ಶಾಶ್ವತ ಪರಿಹಾರವಾಗಲಿಲ್ಲ. ಮರವೂರು ಸೇತುವೆಗೆ 8 ಫಿಲ್ಲರ್‌ಗಳಿವೆ. ಅದರ ಮೇಲೆ ಸುಮಾರು 9 ಸ್ಲ್ಯಾಬ್‌ಗಳಿವೆ. ಈ ಪೈಕಿ 8 ಕಡೆಗಳಲ್ಲಿ ವಿಸ್ತರಣೆ ಜೋಡಣೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಿಂದ ಮಂಗಳೂರು ಕಡೆಗೆ ಹೋಗುವಾಗ ಸೇತುವೆಯ ಬಲಬದಿಯ ಕಾಮಗಾರಿಯನ್ನು ಮಾಡಲಾಗುತ್ತದೆ. ಎಡಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ವಾಹನ ದಟ್ಟಣೆಯಿಂದಾಗಿ ಈಗ ಸಂಚಾರ ಸಮಸ್ಯೆಯೂ ಉಂಟಾಗಿದೆ. ಒಂದು ಬದಿಯ ಕಾಮಗಾರಿ ಆದ ನಂತರ ಡಡಿಡಿಇನ್ನೊಂದು ಬದಿಯ ಕಾಮಗಾರಿಯನ್ನು ಮಾಡಲಾಗುತ್ತದೆ.

ಸೇತುವೆಯ ಸುರಕ್ಷತೆಗೆ ಕಾಮಗಾರಿ
ಮರವೂರು ಸೇತುವೆಯ ಸುರಕ್ಷೆ ದೃಷ್ಟಿಯಿಂದ ಸ್ಲ್ಯಾಬ್‌ಗಳ ನಡುವಿನ ಅಂತರವನ್ನು ವಿಸ್ತರಣೆ ಜೋಡಣೆ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ಕೊಲ್ಕತ್ತದ ಪರಿಣತರ ಮೂಲಕ ಕಾಮಗಾರಿ ನಡೆಸಲಾಗುತ್ತಿದ್ದು, ಮುಂದಿನ ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
– ರವಿಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

ಸ್ಲ್ಯಾಬ್‌ಗಳ ಅಂತರಸರಿಪಡಿಸಲು ಕಾಮಗಾರಿ
ಮರವೂರು ಸೇತುವೆಯಲ್ಲಿ ವಿಸ್ತರಣೆ ಜೋಡಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿದೆ. ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನಿಂದ ಬಂದ ತಾಂತ್ರಿಕ ತಜ್ಞರು ಈ ಸೇತುವೆಯ ಸ್ಲ್ಯಾಬ್‌ಗಳ ನಡುವೆಯ ಅಂತರವನ್ನು ಕೂಡಲೇ ಸರಿಪಡಿಸಬೇಕಾಗಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
– ಉಮಾನಾಥ ಕೋಟ್ಯಾನ್‌, ಶಾಸಕರು, ಮೂಲ್ಕಿ-ಮೂಡುಬಿದಿರೆ

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.