ಕರಾವಳಿ ಮೀನುಗಾರರಲ್ಲಿಯೂ ಹೆಚ್ಚಿದ ಆತಂಕ


Team Udayavani, Oct 31, 2018, 10:31 AM IST

karavali-meenugararu.png

ಮಂಗಳೂರು: ವಾಣಿಜ್ಯ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಮುದ್ರದಲ್ಲಿ 15ರಿಂದ 20 ನಾಟಿಕಲ್‌ ಮೈಲುಗಳ ನಡುವಣ ವಲಯವನ್ನು “ಶಿಪ್ಪಿಂಗ್‌ ಕಾರಿಡಾರ್‌’ ಆಗಿ ಘೋಷಿಸಿ ಮೀನುಗಾರಿಕೆ ನಿಷೇಧಿಸಲು ಕೇಂದ್ರ ನೌಕಾಯಾನ ಸಚಿವಾಲಯ ತೀರ್ಮಾನಿಸಿದೆ. ಇದು ಮೀನುಗಾರಿಕೆಯನ್ನು ನಂಬಿರುವ ಲಕ್ಷಾಂತರ ಮಂದಿಗೆ ಸಂಕಷ್ಟ ತರುವ ಆತಂಕವಿದೆ. 

ಸಮುದ್ರದಲ್ಲಿ 15ರಿಂದ 20 ನಾಟಿಕಲ್‌ ಮೈಲು ನಡುವಣ 5 ನಾಟಿಕಲ್‌ ಮೈಲು ವಲಯವನ್ನು ಶಿಪ್ಪಿಂಗ್‌ ಕಾರಿಡಾರ್‌ ಆಗಿ ಗುರುತಿಸಲು ಶಿಪ್ಪಿಂಗ್‌ ಮಹಾನಿರ್ದೇಶಕರು (ಡಿಜಿಎಸ್‌) ಉದ್ದೇಶಿಸಿದ್ದಾರೆ. ಮೀನುಗಾರಿಕೆ ದೋಣಿಗಳು ಹಾಗೂ ವಾಣಿಜ್ಯ ಹಡಗುಗಳ ಢಿಕ್ಕಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವನೆ ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮೀನುಗಾರರು ಮುಂದಾಗಿದ್ದಾರೆ.

ಶಿಪ್ಪಿಂಗ್‌ ಕಾರಿಡಾರ್‌ ಗುಜರಾತ್‌ನ ಕಚ್‌fನಿಂದ ಕರ್ನಾಟಕ-ಕೇರಳ ವರೆಗಿನ ಪ. ಕರಾವಳಿ ಹಾಗೂ ಪೂರ್ವ ಕರಾವಳಿಯ ಸುಮಾರು 3 ಕೋಟಿ ಮೀನು ಗಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 2,300 ಕಿ.ಮೀ. ಉದ್ದ ಹಾಗೂ 37.04 ಕಿ.ಮೀ. (20 ನಾಟಿಕಲ್‌ ಮೈಲ್‌) ಅಗಲ ಪ್ರದೇಶದಲ್ಲಿ ಮೀನುಗಾರಿಕೆ ನಿಷೇಧವಾಗಿ ಒಟ್ಟು 85,000 ಚ. ಕಿ.ಮೀ. ಪ್ರದೇಶ ಮೀನುಗಾರಿಕೆ ಚಟುವಟಿಕೆಯಿಂದ ವಂಚಿತವಾಗಲಿದೆ. ಈ ಅಧಿಸೂಚನೆ ಪ್ರಕಟವಾದರೆ ಯಾಂತ್ರೀಕೃತ ದೋಣಿಗಳು ತೀರದಿಂದ 20 ನಾ. ಮೈಲು ದೂರದವರೆಗೆ ಮೀನುಗಾರಿಕೆ ಮಾಡುವಂತಿಲ್ಲ. ಸಣ್ಣ ಮೀನುಗಾರಿಕೆ ದೋಣಿಗಳು 27.78 ಕಿ.ಮೀ. (15 ನಾಟಿಕಲ್‌ ಮೈಲು) ಕಿ.ಮೀ.ಯಿಂದಾಚೆಗೆ ಮೀನುಗಾರಿಕೆಗೆ ಹೋಗುವಂತಿಲ್ಲ.

ಸರಕಾರ ಈ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಮೀನುಗಾರ ಸಮುದಾಯ, ಸಂಘಟನೆಗಳ ಜತೆ ಚರ್ಚಿಸಿಲ್ಲ. ಮೀನುಗಳ ನಿಕ್ಷೇಪ ಇಂಥಲ್ಲೇ ಇರುತ್ತದೆ ಎಂದು ಹೇಳಲಾಗದು. ಅದರ ಜಾಡು ಹಿಡಿದು ಮೀನುಗಾರಿಕೆ ಬೋಟುಗಳು ಚಲಿಸಬೇಕಾಗುತ್ತದೆ. ಭಾರತಕ್ಕೆ ಸೇರಿದ ಸಮುದ್ರ ಭಾಗದಲ್ಲಿ 200 ನಾಟಿಕಲ್‌ ಮೈಲುವರೆಗೆ ನಮಗೆ ಮೀನುಗಾರಿಕೆ ನಡೆಸಲು ಅವಕಾಶವಿದೆ. ಉದ್ದೇಶಿತ ಶಿಪ್ಪಿಂಗ್‌ ಕಾರಿಡಾರ್‌ ಪ್ರದೇಶವೇ ಮೀನುಗಾರಿಕೆಯ ಪ್ರಮುಖ
ತಾಣ. ಆದುದರಿಂದ ಇಲ್ಲಿ ನಿಷೇಧ ಸರಿಯಲ್ಲ ಎಂದು ಮೀನುಗಾರಿಕೆ ಸಂಘಟನೆಗಳು ಹೇಳುತ್ತಿವೆ. 

ಈವರೆಗೆ ಶಿಪ್ಪಿಂಗ್‌ ಕಾರಿಡಾರ್‌ ಇರಲಿಲ್ಲ. ಈಗ ಕೇಂದ್ರ ಸರಕಾರ ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ನಿರ್ದಿಷ್ಟ ಪಥ ಗುರುತಿಸಲು ಉದ್ದೇಶಿಸಿದೆ. ಇದೊಂದು ಉತ್ತಮ ಕ್ರಮ ಎಂಬುದು ವಾಣಿಜ್ಯ ಹಡಗಿನ ಮಾಜಿ ಕ್ಯಾಪ್ಟನ್‌ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರತಿಭಟನೆ
ಕೇಂದ್ರ ಸರಕಾರದ ನೌಕಾ ಯಾನ ಸಚಿವಾಲಯದ ಪ್ರಸ್ತಾವನೆಯನ್ನು ಪ್ರತಿಭಟಿಸಿ ದೇಶಾದ್ಯಂತ ಅ. 30ರಂದು ಪ್ರತಿಭಟನೆ ನಡೆದಿದೆ. ಮಂಗಳೂರು ಹಾಗೂ ಮಲ್ಪೆಯಲ್ಲೂ ಟ್ರಾಲ್‌ಬೋಟು, ಪರ್ಸಿನ್‌ ಹಾಗೂ ಗಿಲ್‌ನೆಟ್‌ ಬೋಟುಗಳ ಮೀನುಗಾರರು ಸಭೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಶಿಪ್ಪಿಂಗ್‌ ಕಾರಿಡಾರ್‌ ರೂಪಿಸಿ, ಮೀನುಗಾರಿಕೆ ನಿಷೇಧಿಸುವ ಕೇಂದ್ರದ ಪ್ರಸ್ತಾವನೆ ಮೀನುಗಾರಿಕೆಗೆ ತೀವ್ರ ಹೊಡೆತ ನೀಡಲಿದೆ. ಇದರ ವಿರುದ್ಧ ರಾಷ್ಟ್ರೀಯ ಮೀನುಗಾರರ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅ.30ರಂದು ದೇಶಾದ್ಯಂತ ಒಂದು ದಿನದ ಪ್ರತಿಭಟನೆ ನಡೆದಿದ್ದು, ಇಲ್ಲೂ ಮೀನುಗಾರರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

-ವಾಸುದೇವ ಬೋಳೂರು, ರಾ. ಮೀನುಗಾರರ ವೇದಿಕೆ ಉಪಾಧ್ಯಕ್ಷ 

– ಕೇಶವ ಕುಂದರ್‌

ಟಾಪ್ ನ್ಯೂಸ್

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

Highway ಕಾಮಗಾರಿಯ ಸ್ಕ್ರಾಪ್ ಕಳವು: ಆರೋಪಿಗಳು ಪರಾರಿ; ಸಿಬಂದಿಯದೇ ಕೃತ್ಯ!

Highway ಕಾಮಗಾರಿಯ ಸ್ಕ್ರಾಪ್ ಕಳವು: ಆರೋಪಿಗಳು ಪರಾರಿ; ಸಿಬಂದಿಯದೇ ಕೃತ್ಯ!

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

Prajwal Revanna ಗೆದ್ದರೆ ಎನ್‌ಡಿಎಯಿಂದ ಕ್ರಮ: ಆರ್‌. ಅಶೋಕ್‌

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್‌ ಪರೀಕ್ಷೆ

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.