2020ರ ಒಲಿಂಪಿಕ್ಸ್‌ನಲ್ಲಿ ಸರ್ಫಿಂಗ್‌: ಜಾಂಟಿ ರೋಡ್ಸ್‌ ಆಶಯ


Team Udayavani, May 29, 2017, 11:02 AM IST

Surfing-29-5.jpg

ಮಂಗಳೂರು: ಒಲಿಂಪಿಕ್ಸ್‌ನಲ್ಲಿ 2020ರ ವೇಳೆಗೆ ಸರ್ಫಿಂಗ್‌ ಕ್ರೀಡೆಯನ್ನು ಇನ್ನಷ್ಟು ಪರಿಪೂರ್ಣ ರೀತಿಯಲ್ಲಿ ಆಡುವ ಮೂಲಕ ಈ ಕ್ರೀಡೆಗೆ ವಿಶೇಷ ಒತ್ತು ನೀಡಬೇಕು. ಈ ಕುರಿತು ಎಲ್ಲ ಸಾಧ್ಯತೆಗಳಿಗೆ ಸರ್ಫಿಂಗ್‌ ಪಟುಗಳು ಸಿದ್ಧರಾಗಿರಬೇಕು ಎಂದು ದಕ್ಷಿಣ ಆಫ್ರಿಕಾದ ಖ್ಯಾತ‌ ಕ್ರಿಕೆಟ್‌ ಆಟಗಾರ ಜಾಂಟಿ ರೋಡ್ಸ್‌ ಆಶಯ ವ್ಯಕ್ತಪಡಿಸಿದರು. ಸಸಿಹಿತ್ಲು ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ನ ಕೊನೆಯ ದಿನವಾದ ರವಿವಾರ ಸಂಜೆ ನಡೆದ ಅದ್ದೂರಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮಸ್ಕಾರ’ ಎಂದು ಮಾತು ಆರಂಭಿಸಿದ ಜಾಂಟಿ ರೋಡ್ಸ್‌, ಸರ್ಫಿಂಗ್‌ ಆಸಕ್ತಿಯುತ ಕ್ರೀಡೆ. ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಈ ಕ್ರೀಡೆ ಅತ್ಯಂತ ಉಪಯುಕ್ತ. ಭಾರತದಲ್ಲಿ ಸರ್ಫಿಂಗ್‌ ಆಸಕ್ತರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಸಾಹಸ ಕ್ರೀಡೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿರುವುದು ಸಂತೋಷದ ವಿಚಾರ ಎಂದರು. ಕಳೆದ ಮೂರು ವರ್ಷಗಳ ಹಿಂದೆ ಸಸಿಹಿತ್ಲುವಿಗೆ ನಾನು ಬಂದಾಗ ಇಲ್ಲಿನ ಬೀಚ್‌ ನಿರೀಕ್ಷಿತ ಅಭಿವೃದ್ಧಿ ಕಂಡಿರಲಿಲ್ಲ. ಆದರೆ ಕಳೆದ ವರ್ಷ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ನ ಮೂಲಕ ಪ್ರಸ್ತುತ ಸಸಿಹಿತ್ಲು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಪ್ರಸ್ತುತ, ಭಾರತ ಸರ್ಫಿಂಗ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಈ ಬಾರಿ ನಡೆದ ಇಂಡಿಯನ್‌ ಓಪನ್‌ ಸರ್ಫಿಂಗ್‌ ಅತ್ಯಂತ ಯಶಸ್ವಿಯಾಗಿದೆ ಎಂದರು.

ಸರ್ಫಿಂಗ್‌ ಮಾಂತ್ರಿಕ ಕ್ರೀಡೆ: ಸುನೀಲ್‌ ಶೆಟ್ಟಿ
ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮಾತನಾಡಿ, ಸರ್ಫಿಂಗ್‌ ಒಂದು ಮಾಂತ್ರಿಕ ಕ್ರೀಡೆ. ಕರಾವಳಿಯಲ್ಲಿ ಸರ್ಫಿಂಗ್‌ಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿರುವುದು ಹೊಸ ಪ್ರತಿಭೆಗಳಿಗೆ ಇನ್ನಷ್ಟು ಪ್ರೇರಕವಾಗಲಿದೆ. ತನ್ವಿ ಜಗದೀಶ್‌ ಸೇರಿದಂತೆ ಕರಾವಳಿಯ ಬಹಳಷ್ಟು ಸರ್ಫಿಂಗ್‌ ಸಾಧಕರ ಹೆಸರು ಇಂದು ದೇಶ -ವಿದೇಶದಲ್ಲಿ ಮಾನ್ಯತೆ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದರು. ಸರ್ಫಿಂಗ್‌ನ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಶಾಸಕರಾದ ಕೆ. ಅಭಯಚಂದ್ರ ಜೈನ್‌, ಐವನ್‌ ಡಿ’ಸೋಜಾ, ಮೇಯರ್‌ ಕವಿತಾ ಸನಿಲ್‌, ಮಿಸ್‌ ಇಂಡಿಯಾ ಸೌತ್‌ ನಿಶಿತಾ ಶೆಣೈ, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಪ್ರಮುಖರಾದ ಮನೋಹರ ಶೆಟ್ಟಿ, ವಸಂತ ಬರ್ನಾಡ್‌, ಸರ್ಫಿಂಗ್‌ ಸ್ವಾಮಿ, ಜಲಜಾ, ಕಿಶೋರ್‌ ಕುಮಾರ್‌, ಮಿಥುನ್‌ ರೈ, ಯತೀಶ್‌ ಬೈಕಂಪಾಡಿ, ಗೌರವ ಹೆಗ್ಡೆ, ಜೀವನ್‌ ಸಲ್ದಾನ ಉಪಸ್ಥಿತರಿದ್ದರು.

ನೀರಾಟವಾಡಿದ ಜಾಂಟಿ ರೋಡ್ಸ್‌ 
ಇಂಡಿಯನ್‌ ಓಪನ್‌ ಸರ್ಫಿಂಗ್‌ನಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಕ್ರಿಕೆಟ್‌ ತಾರೆ ಜಾಂಟಿ ರೋಡ್ಸ್‌ ಸಸಿಹಿತ್ಲು ಕಡಲ ಕಿನಾರೆಯಲ್ಲಿ ನೀರಾಟವಾಡುತ್ತಾ ಗಮನ ಸೆಳೆದರು. ಸಂಜೆ ಸಸಿಹಿತ್ಲುವಿಗೆ ಆಗಮಿಸಿದ ಅವರು ಫೈನಲ್‌ ಸ್ಟಾಂಟ್‌ ಅಪ್‌ ಪೆಡ್ಲಿಂಗ್‌ ಮತ್ತು ಸರ್ಫಿಂಗ್‌ನ ಫೈನಲ್‌ ಪಂದ್ಯಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಸ್ಪೀಡ್‌ ಬೋಟ್‌ ಮೂಲಕ ಸುಮಾರು ಹೊತ್ತು ನೀರಿನಲ್ಲಿ ಸವಾರಿ ನಡೆಸಿದರು. ಅನಂತರ ಸಸಿಹಿತ್ಲು ಬೀಚ್‌ ವ್ಯಾಪ್ತಿಯಲ್ಲಿ ನಡೆದುಕೊಂಡು ಎಲ್ಲರ ಜತೆಗೆ ಬೆರೆಯುತ್ತಿದ್ದ ದೃಶ್ಯ ಕಂಡು ಬಂತು. ಜತೆಗೆ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಕೂಡ ಬೀಚ್‌ ವ್ಯಾಪ್ತಿಯಲ್ಲಿ ಸಂಜೆಯ ಸುಮಾರಿಗೆ ಸುತ್ತಾಡುತ್ತಾ ಕಾಲ ಕಳೆದರು. ಸರ್ಫಿಂಗ್‌ ಕ್ರೀಡಾಪಟುಗಳು ಹಾಗೂ ಅಭಿಮಾನಿಗಳ ಜತೆಗೆ ಬೆರೆಯುತ್ತಾ, ತುಳುವಿನಲ್ಲೇ ಮಾತನಾಡುತ್ತಾ ಗಮನ ಸೆಳೆದರು. ಸಮಾರೋಪ ಸಮಾರಂಭದಲ್ಲೂ ತುಳುವಿನಲ್ಲಿ ಮಾತನಾಡಿದರು, ಆದರೆ ಇಲ್ಲಿ ಬೇರೆ ನಗರದವರು ಇರುವುದರಿಂದ ಅವರಿಗೆ ತುಳು ಅರ್ಥವಾಗಲ್ಲ, ಅದಕ್ಕಾಗಿ ಇಂಗ್ಲಿಷ್‌ನಲ್ಲಿ ಮಾತನಾಡುವ ಎಂದರು. ಈ ಮಧ್ಯೆ ಮಧ್ಯಾಹ್ನದ ವೇಳೆಗೆ ಚಿತ್ರನಟ ಹುಚ್ಚ ವೆಂಕಟ್‌ ಆಗಮಿಸಿ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದರು.

ಕಡಲ ಕಿನಾರೆಯಲ್ಲಿ ಬೃಹತ್‌ ಜನಸ್ತೋಮ 
ಸರ್ಫಿಂಗ್‌ಗೆ ಕೊನೆ ದಿನವಾದ ಕಾರಣ ಹಾಗೂ ರಜಾದಿನವಾದ ಹಿನ್ನೆಲೆಯಲ್ಲಿ ರವಿವಾರ ಸುಮಾರು 15 ಸಾವಿರಕ್ಕೂ ಮಿಕ್ಕಿ ಜನರು ಆಗಮಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಪಾರ್ಕಿಂಗ್‌ಗಾಗಿ ಕೆಲವು ಕಿ.ಮೀ. ಅಂತರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಸಂಘಟಕರ ಉಚಿತ ವಾಹನ ಸೇವೆ ಮೂಲಕ ಜನರನ್ನು ಬೀಚ್‌ನತ್ತ ಕರೆತರಲಾಯಿತು. ಜನ ಜಾಸ್ತಿಯಾದ ಹಿನ್ನೆಲೆಯಲ್ಲಿ ಉಚಿತ ವಾಹನಕ್ಕಾಗಿ ಕ್ಯೂ ನಿಲ್ಲುವ ಪ್ರಮೇಯ ಎದುರಾಯಿತು. ಸರ್ಫಿಂಗ್‌ನ ಮೊದಲ ದಿನ ಸುಮಾರು 5,000, ಎರಡನೇ ದಿನ ಸುಮಾರು 6,000 ಜನರು ಸೇರಿದ್ದರು. ದೇಶ-ವಿದೇಶದ ಸುಮಾರು 300ಕ್ಕೂ ಅಧಿಕ ಕ್ರೀಡಾಪಟುಗಳು ಮೂರು ದಿನ ಭಾಗವಹಿಸಿದ್ದರು. ಅವರ ಜತೆಗೆ ನೂರಾರು ಬೆಂಬಲಿಗರು ಕೂಡ ಇದ್ದರು.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.