ಕೀಟ ಬಾಧೆ- ಅಧ್ಯಯನ ಅಗತ್ಯ: ಸಚಿವ ರೈ
Team Udayavani, Dec 22, 2017, 9:59 AM IST
ಮಂಗಳೂರು: ರೈತರ ಬೆಳೆಗೆ ಕೀಟ ಬಾಧೆ, ರೋಗ ಮತ್ತಿತರ ಸಮಸ್ಯೆಗಳು ಎದು ರಾದಾಗ ಸಂಬಂಧಪಟ್ಟ ಇಲಾಖೆಗಳು ವಿಜ್ಞಾನಿ ಗಳ ಸಹಕಾರದಿಂದ ಅಧ್ಯಯನ ನಡೆಸಿ ಪರಿಹಾರೋ ಪಾಯ ಕಂಡುಕೊಳ್ಳಬೇಕು; ಸರಕಾರ ರೈತರ ಕಷ್ಟ ಸಂಕಷ್ಟಗಳಲ್ಲಿ ಸಹಭಾಗಿಯಾಗಿ ನೆರವು ಒದಗಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ರಾಷ್ಟ್ರೀಯ ರೈತ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ.ಜಿ.ಪಂ. ತೋಟಗಾರಿಕಾ ಇಲಾಖೆ ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೊಡಿಯಾಲ್ಬೈಲ್ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣ ದಲ್ಲಿ ಗುರುವಾರ “ಕಲ್ಪವೃಕ್ಷಕ್ಕೆ ಕೀಟ – ಕಾಟ’ ವಿಷಯದ ಕುರಿತು ನಡೆದ ರೈತ- ವಿಜ್ಞಾನಿ- ಅಧಿಕಾರಿ- ಮಾಧ್ಯಮಗಳ ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೀಟ ಬಾಧೆಯಿಂದ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಲಭ್ಯವಿಲ್ಲ. ಸರಕಾರ ಮಧ್ಯ ಪ್ರವೇಶಿಸಿ ರೈತರಿಗೆ ನೆರವಾಗುವ ಅಗತ್ಯ ಇದೆ ಎಂದರು.
ಸಹಕಾರಿ ವ್ಯವಸ್ಥೆಯ ಮೂಲಕ ನೀರಾ ತೆಂಗಿನ ಕಾಯಿಯ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಚಿಂತನೆ ಮಾಡಿದರೆ ತೆಂಗಿನ ಕೃಷಿ ಲಾಭದಾಯಕವಾಗ ಬಲ್ಲುದು. ಈ ದಿಶೆಯಲ್ಲಿ ತೆಂಗಿನ ನೀರಾ ತೆಗೆಯಲು ಅಬಕಾರಿ ಇಲಾಖೆ ಸೂಕ್ತ ರಿಯಾಯಿತಿ ನೀಡಿದೆ. ಸರಕಾರವು ಸಹಕಾರಿ ವ್ಯವಸ್ಥೆಯ ಮೂಲಕ ನೀರಾ ಮಾರಾಟ ಮಾಡಲು ಅನುಮತಿ ನೀಡುವ ಹಂತದಲ್ಲಿದೆ ಎಂದರು.
ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ತೆಂಗು ಸಂಸ್ಕರಣೆಗೆ ವ್ಯವಸ್ಥೆಯನ್ನು ನಾವು ಮಾಡುವ ಆವಶ್ಯಕತೆ ಇದೆ ಎಂದರು.
ಫಿಶರೀಸ್ ಕಾಲೇಜಿನ ವಿಸ್ತರಣಾ ನಿರ್ದೇಶಕ ಡಾ| ಎಸ್.ಎಂ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ| ಎಚ್.ಆರ್. ನಾಯ್ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಿಇಒ ಸತೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್. ಕೆಂಪೇ ಗೌಡ, ಬೆಂಗಳೂರಿನ ಎನ್ಬಿಎಐಆರ್ ಮುಖ್ಯ ವಿಜ್ಞಾನಿ ಡಾ| ಶೈಲೇಶ್, ಕಾಸರಗೋಡು ಸಿಪಿಸಿಆರ್ಐ ವಿಜ್ಞಾನಿ ಡಾ| ವಿನಾಯಕ ಹೆಗಡೆ, ಉಡುಪಿಯ ಜಂಟಿ ಕೃಷಿ ನಿರ್ದೇಶಕರಾದ ಭುವನೇಶ್ವರಿ, ಕದ್ರಿ ನವನೀತ್ ಶೆಟ್ಟಿ, ರಾಮಕೃಷ್ಣ ಅವರು ವೇದಿಕೆಯಲ್ಲಿದ್ದರು. ವಿಜಯಕರ್ನಾಟಕ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್ ಸ್ವಾಗತಿಸಿದರು. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಶಿವಕುಮಾರ್ ಮಗದ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ