ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರಿಂದ ದಿಢೀರ್ ಭೇಟಿ
Team Udayavani, Apr 10, 2019, 6:00 AM IST
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ದಿಢೀರಾಗಿ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಂಟ್ವಾಳ: ರೋಗಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿರುವ ವಿಚಾರ ವಾಟ್ಸಾಪಿನಲ್ಲಿ ವೈರಲ್ ಆಗಿದ್ದು, ಮಾಹಿತಿ ಪಡೆದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಎ. 9ರಂದು ದಿಢೀರಾಗಿ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಸಂಭವಿಸಿದೆ.
ವಿಪರೀತ ಜ್ವರದಿಂದ ಬಳಲಿದ್ದ, ವಾಂತಿ ಮಾಡಿಕೊಂಡ ರೋಗಿಯೊಬ್ಬರನ್ನು ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಬಳಿಕ ಅಡ್ಮಿಟ್ ಆಗುವಂತೆ ಚೀಟಿ ನೀಡಿದ್ದು, ಅದನ್ನು ಕೌಂಟರಲ್ಲಿ ನೀಡಿ ದಾಖಲಾಗಬೇಕಾಗಿತ್ತು. ಆ ಸಂದರ್ಭ ಸಂಬಂಧಪಟ್ಟ ಸಿಬಂದಿ ಬಾರದೆ ಕೌಂಟರ್ ತೆರೆದಿರಲಿಲ್ಲ. ಇದರಿಂದ ಏಳು ಗಂಟೆಗೆ ಬಂದಿದ್ದ ರೋಗಿಯು 9 ಗಂಟೆವರೆಗೆ ಕಾಯುವಂತಾಗಿತ್ತು ಎಂಬುದಾಗಿ ಹೇಳಲಾಗಿದೆ.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲ ಸಿಬಂದಿಯಲ್ಲಿ, ರೋಗಿಗಳಲ್ಲಿ ಘಟನೆ ಬಗ್ಗೆ ಮಾಹಿತಿಯನ್ನು ಪಡೆದರು. ಅಶುಚಿ ಅವ್ಯವಸ್ಥೆ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೌಚಾಲಯವನ್ನು ಸ್ವತ್ಛಗೊಳಿಸದ ಕುರಿತು ಆರೋಗ್ಯಾಧಿಕಾರಿಯ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ| ದೀಪಾ ಪ್ರಭು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಸದಾಶಿವ ಉಪಸ್ಥಿತರಿದ್ದರು. ಶಾಸಕರ ಜತೆ ಪ್ರಮುಖರಾದ ರಾಮ್ದಾಸ್ ಬಂಟ್ವಾಳ, ರಮಾನಾಥ ರಾಯಿ ಮತ್ತಿತರರಿದ್ದರು.
ದೂರು ವ್ಯಕ್ತವಾಗಿಲ್ಲ
ಶಾಸಕರು ಆಸ್ಪತ್ರೆಗೆ ಆಗಮಿಸಿ ಒಳ ರೋಗಿಗಳಲ್ಲಿ ಸಮಸ್ಯೆಯ ಬಗ್ಗೆ ಪ್ರಶ್ನಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿಯಾಗಿ ಶಾಸಕರ ಆಗಮನದ ಸಂದರ್ಭ ಆಸ್ಪತ್ರೆಯಲ್ಲಿದ್ದೆ. ಯಾರೊಬ್ಬರಿಂದಲೂ ವಿಚಾರಣೆ ಸಂದರ್ಭ ದೂರು ವ್ಯಕ್ತವಾಗಿಲ್ಲ. ಮುಂದಕ್ಕೆ ಇಂತಹ ದೂರು ಬಾರದಂತೆ ಕ್ರಮ ಕೈಗೊಳ್ಳಲು ಶಾಸಕರು ಸಿಬಂದಿಗೆ ಎಚ್ಚರಿಸಿದ್ದಾರೆ. ಅಂತಹ ಅನಪೇಕ್ಷಿತ ಘಟನೆ ನಡೆದಲ್ಲಿ ನೊಂದವರು ಯಾರನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಯ ಹೆಸರು, ಮೊಬೈಲ್ ನಂಬ್ರವನ್ನು ಆಸ್ಪತ್ರೆಯ ಕಚೇರಿಯ ಮುಂದೆ ಪ್ರಕಟಿಸಲಾಗುವುದು.
ಡಾ| ದೀಪಾ ಪ್ರಭು, ತಾಲೂಕು ಆರೋಗ್ಯ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ