ದೇಯಿ ಬೈದ್ಯೆತಿಗೆ ಅವಮಾನ: ಸೆರೆ
Team Udayavani, Sep 11, 2017, 8:25 AM IST
ಪುತ್ತೂರು: ಪಡುಮಲೆಯ ಮುಡಿಪಿನಡ್ಕದಲ್ಲಿರುವ ಕರಾವಳಿಯ ಶಕ್ತಿ ದೇವತೆ ದೇಯಿ ಬೈದ್ಯೆತಿ ಮೂರ್ತಿಯ ಜತೆ ಅಶ್ಲೀಲವಾಗಿ ಫೂಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈಶ್ವರಮಂಗಲ ನಿವಾಸಿ ಸ್ಥಳೀಯ ರಿಕ್ಷಾ ಚಾಲಕ ಹನೀಫ್ ಬಂಧಿತ ಆರೋಪಿ. ಕೋಟಿ-ಚೆನ್ನಯರ ಹುಟ್ಟೂರು ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಗು ತ್ತಿದ್ದಂತೆ, ಅರಣ್ಯ ಇಲಾಖೆಯೂ ಯೋಜನೆಯೊಂದನ್ನು ರೂಪಿಸಿತು. ರಮಾನಾಥ ರೈ ಮುತುವರ್ಜಿಯಲ್ಲಿ ಇಲಾಖೆಯ ಜಾಗದಲ್ಲೇ ಔಷಧವನವೊಂದನ್ನು ನಿರ್ಮಿಸಿ, ಅದಕ್ಕೆ ನಾಟಿ ವೈದ್ಯೆ, ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಹೆಸರಿಡಲಾಯಿತು. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಿರ್ಮಿಸಿದ ಕಲಾಕೃತಿಗಳು ಇದೀಗ ದುರ್ಬಳಕೆಯಾಗುತ್ತಿದ್ದು, ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.
ಹನೀಫ್ನ ಕೃತ್ಯದ ಬಗ್ಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಸಂಘದ ಕೋಶಾಧಿಕಾರಿ ನಾಗೇಶ್ ಬಲಾ°ಡ್, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಕಾರ್ಯ ನಿರ್ವಹಣಾ ಅ ಧಿಕಾರಿ ಆರ್.ಸಿ. ನಾರಾಯಣ್ ರೆಂಜ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು, ಯುವವಾಹಿನಿ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು ಮೊದಲಾದವರ ನಿಯೋಗ ಗ್ರಾಮಾಂತರ ಠಾಣಾಧಿಕಾರಿಯನ್ನು ಭೇಟಿಯಾಗಿ, ಆರೋಪಿಯ ಬಂಧಿಸಿ ಕಠಿನ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದ್ದರು.
ಗ್ರಾಮಾಂತರ ಪೊಲೀಸರು, ಆರೋಪಿಯನ್ನು ರವಿವಾರವೇ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ 295 (ಎ) ಕಲಂ ಮತ್ತು ಐಟಿ ಕಾಯಿದೆ- 2000 ಇದರ 67 ಐಟಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಔಷಧ ವನ
6 ಎಕರೆ ಜಾಗದಲ್ಲಿ ದೇಯಿ ಬೈದ್ಯೆತಿ ಔಷಧವನವನ್ನು ಮುಡಿಪಿನಡ್ಕದಲ್ಲಿ ನಿರ್ಮಿಸಿ ಕಳೆದ ವರ್ಷ ಇದು ಉದ್ಘಾಟಿಸಲಾಗಿತ್ತು. ಇದರ ನಡುವೆ ಪ್ರಾಚೀನ ತುಳುನಾಡಿನ ಶೈಲಿಯನ್ನು ಹೋಲುವ ಪುಟ್ಟ ಕುಟೀರವನ್ನು ನಿರ್ಮಿಸಲಾಗಿದೆ. ಕುಟೀರದ ಮುಂಭಾಗ ದೇಯಿ ಬೈದ್ಯೆತಿ ಔಷಧ ಅರೆಯುವ ರೀತಿಯ ಮೂರ್ತಿಯನ್ನು ನಿರ್ಮಿಸಲಾಗಿದೆ. ಬದಿಯಲ್ಲಿ ಕೋಟಿ- ಚೆನ್ನಯರ ಮೂರ್ತಿಯೂ ಇದೆ. ಕುಟೀರದ ಆವರಣಕ್ಕೆ ಬರಲು ಸಾರ್ವ ಜನಿಕರಿಗೆ ಅವಕಾಶ ಕಲ್ಪಿಸ ಲಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಮೂರ್ತಿಯ ಸುರಕ್ಷತೆ ದೃಷ್ಟಿಯಿಂದ ಆವರಣದ ಒಳಗಡೆ ಪ್ರವೇಶವನ್ನು ನಿರ್ಬಂಧಿಸಬೇಕು. ಮಾತ್ರವಲ್ಲ ಸಿಬಂದಿ ನೇಮಿಸಿ, ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಆರ್.ಸಿ. ನಾರಾಯಣ್ ಆಗ್ರಹಿಸಿದ್ದಾರೆ.
ಸಾರ್ವತ್ರಿಕ ಖಂಡನೆ
ದೇಯಿ ಬೈದ್ಯೆàತಿ ಮೂರ್ತಿಯ ಪಕ್ಕದಲ್ಲಿ ಹನೀಫ್ ಅಶ್ಲೀಲ ಭಂಗಿಯಲ್ಲಿ ಕುಳಿತುಕೊಂಡು ಫೂಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಶನಿವಾರ ರಾತ್ರಿ ವೇಳೆ ಫೇಸ್ಬುಕ್ ಹಾಗೂ ವಾಟ್ಸ್ ಆ್ಯಪ್ನಲ್ಲಿ ಈ ಫೂಟೋ ಕಾಣಿಸಿಕೊಂಡಿದೆ. ಸಾಮಾಜಿಕ ಅಶಾಂತಿಗೆ ಕಾರಣ ವಾಗ ಬಹುದಾದ ಈ ಕೃತ್ಯದ ಬಗ್ಗೆ ಸಮಾಜದ ಎಲ್ಲ ವರ್ಗದವರಿಂದ ಸಾರ್ವತ್ರಿಕ ವಾಗಿ ಖಂಡನೆ ವ್ಯಕ್ತವಾಗಿತ್ತು. ಆರೋಪಿ ಬಂಧನಕ್ಕೆ ಆಗ್ರಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ