ಜೋಡುಪಾಲ ಫಾಲೋ-ಅಪ್ : ಕಣ್ಣೆದುರೇ ಸುನಾಮಿಯಂತೆ ಅಪ್ಪಳಿಸಿತು
Team Udayavani, Aug 22, 2018, 3:45 AM IST
ಸುಳ್ಯ: ಶುಕ್ರವಾರ ಬೆಳಗ್ಗೆ 8.30ರ ಹೊತ್ತು. ಮನೆ ಮೇಲಿನ ಗುಡ್ಡದಿಂದ ಸದ್ದು ಕೇಳಿತಷ್ಟೆ, ಸುನಾಮಿಯಂತೆ ನೀರು ಬಸಪ್ಪನ ಮನೆ ಮೇಲೆರಗಿತ್ತು. ಅಪಾಯ ಅರಿತು ಉಟ್ಟ ಬಟ್ಟೆಯಲ್ಲೇ ಓಡಿದ್ದರಿಂದ ಬದುಕಿದ್ದೇವೆ! ಜೋಡುಪಾಲ ಗುಡ್ಡದ ಮಣ್ಣಿನಲ್ಲಿ ಜೀವಂತ ಸಮಾಧಿಯಾದ ಬಸಪ್ಪ ಹಾಗೂ ಸಹೋದರ ಉಮೇಶ್ ಮತ್ತು ರವಿ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಗುಡ್ಡ ಸೀಳಿ ಬಂದ ನೀರು ಬಸಪ್ಪನ ಮನೆಯನ್ನು ನುಂಗಿತು. ಗುಡ್ಡದತ್ತ ಓಡಿ ಪ್ರಾಣ ಉಳಿಸಿಕೊಂಡೆವು ಎಂದರು ಉಮೇಶ್ ಅವರ ಪತ್ನಿ ಭೋಜಮ್ಮ.
ಒಂದೇ ಮನೆಯಲ್ಲಿ ರಾತ್ರಿ ವಾಸ!
ರವಿ ಒಂದೂವರೆ ತಿಂಗಳ ಹಿಂದೆ ತೀರಿಕೊಂಡಿದ್ದು, ಅವರ ಪತ್ನಿ ಹಾಗೂ ಮಗಳು ಮಾತ್ರ ಇರುವುದರಿಂದ ಉಳಿದೆರಡು ಮನೆಯವರೂ ಅಲ್ಲೇ ರಾತ್ರಿ ಕಳೆಯುತ್ತಿದ್ದರು. ಘಟನೆಯ ಹಿಂದಿನ ದಿನವೂ ಅಲ್ಲೇ ಇದ್ದರು.
ರಜೆ ಹಾಕಿದ್ದರು
ಬಸಪ್ಪ ಪ್ರತಿದಿನ ಬೆಳಗ್ಗೆ 8ಕ್ಕೆ ಸುಳ್ಯ ಆಸ್ಪತ್ರೆಗೆ ತೆರಳುತ್ತಿದ್ದರು. ಶುಕ್ರವಾರ ಮಳೆ ಕಾರಣ ರಜೆ ಹಾಕಿದ್ದರು. ಮಂಜುಳಾಗೂ ಶಾಲೆಗೆ ರಜೆ. ವಿಧಿ ಅವರ ಮೇಲೆ ಎರಗಿತು ಎಂದು ಮೌನವಾದರು ಸುಳ್ಯ ಕೆವಿಜಿ ಸಂಸ್ಥೆಯ ಉದ್ಯೋಗಿ. ಉಮೇಶ್. ಅಂದು ಅವರು ಸುಳ್ಯದಲ್ಲಿದ್ದರು. ಸಂಪಾಜೆ – ಮಡಿಕೇರಿ ರಸ್ತೆಯಿಂದ ಅರ್ಧ ಕಿ.ಮೀ. ದೂರದಲ್ಲಿ 25ಕ್ಕೂ ಅಧಿಕ ಮನೆಗಳಿವೆ. ವಸಂತ ಅವರ ಮನೆಯವರನ್ನು ಗುಡ್ಡ ಜರಿಯುವ ಮುನ್ನಾದಿನ ಸ್ಥಳಾಂತರಿಸಲಾಗಿತ್ತು ಎನ್ನುತ್ತಾರೆ ರವಿ ಅವರ ಪುತ್ರಿ ರೇವತಿ.
ಸುಳ್ಯದಲ್ಲಿ ಆಶ್ರಯ
ಗುಡ್ಡ ಅಲೆದು ಮದೆನಾಡಿನ ಸಂತ್ರಸ್ತರ ಕೇಂದ್ರ ತಲುಪಿದ ರೇವತಿ, ತಾಯಿ ಪೂವಿ, ಮಾವ ರಾಜೇಶ್, ಭೋಜಮ್ಮ, ಮೋಹಿತ್ ಹಾಗೂ ಮಕ್ಕಳಾದ ವಿವೇಕ್, ಕುಮಾರೇಶ್ ಸುಳ್ಯದ ಉಮೇಶರ ವಸತಿಗೃಹದ ಕೊಠಡಿಯಲ್ಲಿದ್ದಾರೆ.
ಮನೆಯೊಳಗೆ ಇದ್ದೆವು ಶುಕ್ರವಾರ ಬೆಳಗ್ಗೆ
6 ಗಂಟೆಗೆ ಎದ್ದು ನಮ್ಮ ನಮ್ಮ ಮನೆಗೆ ಬಂದಿದ್ದೆವು. ಎಲ್ಲರೂ ಮನೆಯೊಳಗೆ ಇದ್ದ ಸಂದರ್ಭ 8.30ರ ಹೊತ್ತಿಗೆ ದುರ್ಘಟನೆ ನಡೆಯಿತು ಅನ್ನುತ್ತಾರೆ ಭೋಜಮ್ಮ ಅವರ ಪುತ್ರ ವಿವೇಕ್.
ಮೇಮಲೆ ಬೆಟ್ಟದ ನೀರು!
ಸುನಾಮಿಯಂತೆ ಎರಗಿದ ನೀರು ಎಲ್ಲಿಂದ ಬಂತು ಅನ್ನುವುದೇ ಎಲ್ಲರ ಪ್ರಶ್ನೆ. ಈ ಕುಟುಂಬದವರು ಹೇಳುವ ಪ್ರಕಾರ, ಮನೆಯಿಂದ ಮೇಲ್ಭಾಗದಲ್ಲಿನ ಮೇಮಲೆ ಬೆಟ್ಟ ಭಾಗದಲ್ಲಿ ನೀರು ತುಂಬಿದ ಪ್ರದೇಶ ಒಡೆದು ಜೋಡುಪಾಲದತ್ತ ನುಗ್ಗಿದೆ. ಇದನ್ನು ಸ್ಥಳೀಯರೂ ಪುಷ್ಟೀಕರಿಸುತ್ತಾರೆ.
ಏಳು ತಾಸು ಗುಡ್ಡ ಅಲೆದೆವು!
ಮನೆ ಬಿಟ್ಟು ಒಂದೇ ಸವನೆ ಓಟ ಕಿತ್ತೆವು. ಎಲ್ಲಿದ್ದೇವೆ ಅನ್ನುವುದು ಗೊತ್ತಾಗುತ್ತಿರಲಿಲ್ಲ. ನನಗಂತೂ ಒಂದು ಹೆಜ್ಜೆ ಇಡಲು ಸಾಧ್ಯವಾಗದ ಸ್ಥಿತಿ, ಆದರೂ ಅಪರಾಹ್ನ 3.30ರ ತನಕ ನಡೆದೆವು. ಎರಡು-ಮೂರು ಕಡೆ ಪ್ರವಾಹ ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಯಿತು. ಆ ಕಷ್ಟ ಶತ್ರುವಿಗೂ ಬೇಡ ಎನ್ನುತ್ತ ಪಟ್ಟ ಪಾಡನ್ನು ವಿವರಿಸಿದರು ರವಿಯವರ ಪತ್ನಿ, 56 ವರ್ಷ ವಯಸ್ಸಿನ ಪೂವಿ. ಪಟ್ಟ ಕಷ್ಟಕ್ಕೆ ಸಾಕ್ಷಿಯಂತೆ ಅವರ ಕಾಲಿನಲ್ಲಿ ಗಾಯ ಇದೆ.
— ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ