ಕಡಬ ಐತೂರು ಗ್ರಾ.ಪಂ. ಪಿಡಿಒ ಬೆಳ್ತಂಗಡಿಯಲ್ಲಿ ಎಸಿಬಿ ಬಲೆಗೆ
Team Udayavani, Jun 4, 2019, 12:18 PM IST
ಬೆಳ್ತಂಗಡಿ: ಕಡಬ ತಾಲೂಕಿನ ಐತೂರು ಗ್ರಾ.ಪಂ. ಪಿಡಿಒ ಪ್ರೇಮ್ ಸಿಂಗ್ ನಾಯಕ್ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿ¨ರೆ.
ಕಡಬ ತಾಲೂಕು ಸುಂಕದಕಟ್ಟೆ ನಿವಾಸಿ ಶಾಹುಲ್ ಹಮೀದ್ ಅವರು ತಾಯಿಯ ಹೆಸರಿಂದ ತನ್ನ ಹೆಸರಿಗೆ 10 ಸೆಂಟ್ಸ್ ಜಾಗದ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ 8 ಸಾ.ರೂ. ಪಿಡಿಒ ಖಾತೆಗೆ ಜಮಾ ಮಾಡಿದ್ದರು. ಬಳಿಕ 10 ಸಾ. ರೂ. ಬೇಡಿಕೆ ಇಟ್ಟಿದ್ದರು. ಸೋಮವಾರ ಮಂಗಳೂರಿನಲ್ಲಿ ಪಿಡಿಒಗಳ ಸಭೆ ಇದ್ದ ಕಾರಣ ಗುರುವಾಯನಕೆರೆಗೆ ಬರ ಹೇಳಿದ್ದರು. ಸಂಜೆ ಶಾಹುಲ್ ಹಮೀದ್ ಪಿಡಿಒ ಪ್ರೇಮ್ ಸಿಂಗ್ ನಾಯಕ್ಗೆ 9 ಸಾ. ರೂ. ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ¨ªಾರೆ.
ಪಶ್ಚಿಮ ವಲಯ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ಅವರ ನಿರ್ದೇಶನದ ಮೇರೆಗೆ ಇನ್ಸ್ಪೆ ಕ್ಟರ್ ಮೋಹನ್ ಕೊಟ್ಟಾರಿ, ಉಡುಪಿ ಇನ್ಸ್ಪೆ ಕ್ಟರ್ ಜಯರಾಂ ಗೌಡ, ಸಿಬಂದಿ ವರ್ಗದ ಹರಿಪ್ರಸಾದ್ , ರಾಧಾಕೃಷ್ಣ ಡಿ.ಎ., ರಾಧಾಕೃಷ್ಣ ಕೆ., ಪ್ರಶಾಂತ್, ರಾಕೇಶ್, ಅಬ್ದುಲ್ ಜಲಾಲ…, ನಯನಾ, ವೈಶಾಲಿ, ಉಮೇಶ್, ಗಣೇಶ್, ಪ್ರಸನ್ನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ