ಕಿಂಡಿ ಅಣೆಕಟ್ಟುಗಳು: ಜಲ ಸಂರಕ್ಷಣೆಯ ಹೊಸ ಅಧ್ಯಾಯ


Team Udayavani, Jan 30, 2018, 4:18 PM IST

30-Jan-5.jpg

ಸುಬ್ರಹ್ಮಣ್ಯ : ಬೇಸಗೆ ನಿಧಾನಕ್ಕೆ ಕಾವೇರುತ್ತಿರುವಂತೆ ಸುಳ್ಯ ತಾಲೂಕಿನ ಬಹುತೇಕ ಕಿಂಡಿ ಅಣೆ ಕಟ್ಟುಗಳಿಗೆ ಹಲಗೆ ಜೋಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಬೇಸಗೆಯ ದಿನಗಳಲ್ಲಿ ನದಿ, ತೊರೆ, ಕೆರೆ, ತೋಡುಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತದೆ. ಕುಡಿಯುವ ನೀರು ಮತ್ತು ಕೃಷಿಗೆ ಆತಂಕದ ದಿನಗಳು ಹತ್ತಿರದಲ್ಲಿವೆ. ಇದನ್ನು ಗಮನಿಸಿದ ಸರಕಾರ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಆದ್ಯತೆ ನೀಡಿದೆ.

ಫ‌ಲಾನುಭವಿಗಳಿಂದಲೇ ನಿರ್ವಹಣೆ
ಡಿಸೆಂಬರ್‌ ಕೊನೆಯ ಮತ್ತು ಜನವರಿ ಆರಂಭದ ದಿನಗಳಲ್ಲಿ ನೀರಿನ ಹರಿವು ಗಮನಿಸಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಜಲಾನಯನ ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಫ‌ಲಾನುಭವಿಗಳೇ ಅದರ ನಿರ್ವಹಣೆ ಮಾಡಬೇಕಿದೆ.

ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಸಹಭಾಗಿತ್ವ ಮೂಲಕ ನಿರ್ಮಾಣವಾಗುವ ಕಿಂಡಿ ಅಣೆಕಟ್ಟಿನಲ್ಲಿ ಐದು ವರ್ಷದ ನಂತರ ಸಣ್ಣ ಪುಟ್ಟ ದುರಸ್ತಿಗಷ್ಟೆ ಅನುದಾನ ನೀಡಲಾಗುತ್ತದೆ. ಹಲಗೆ ಹಾಕುವ ಮತ್ತು ತೆಗೆಯುವ ಕೆಲಸವನ್ನು ಕಿಂಡಿ ಅಣೆಕಟ್ಟಯ ವ್ಯಾಪ್ತಿಯ ಫ‌ಲಾನುಭವಿಗಳೇ ಮಾಡಬೇಕು. ಹಲಗೆಗೆ ಹಾನಿ ಆದರೆ ಅವರೇ ಹೊಸ ಹಲಗೆ ತರಬೇಕು.

ಪ್ರತಿ ಗ್ರಾ.ಪಂ.ಗಳು ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಅಭಿಯಾನ ನಡೆಸಬೇಕಿದೆ. ತಮ್ಮ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣವನ್ನು ಪ್ರೋತ್ಸಾಹಿಸಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಜಲ ಸಂರಕ್ಷಣೆಯ ಸ್ವಯಂ ಜಾಗೃತಿ ಎಲ್ಲರಲ್ಲೂ ಮೂಡದಿದ್ದರೆ ಫ‌ಲವತ್ತಾದ ಭೂಮಿ ಮುಂದೆ ಬರಡಾಗುವುದರಲ್ಲಿ ಸಂಶಯವಿಲ್ಲ.

ಸುಳ್ಯವನ್ನೇ ಗಮನಿಸಿ. ಇದು ಕೃಷಿ ಪ್ರಧಾನ ತಾಲೂಕು. ಬಹುತೇಕರು ಕೃಷಿ ಅವಲಂಬಿತರು. ಇಲ್ಲಿ ಕೃಷಿಗೆ ಬೇಕಾದ
ನೀರನ್ನು ಕೆರೆ, ಬಾವಿ ಹಾಗೂ ನದಿಗಳಿಂದ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಯಂತೆ ಮಳೆಯಾಗದೆ, ಜನವರಿ- ಫೆಬ್ರವರಿ ತಿಂಗಳಿಗೇ ಜಲ ಮೂಲಗಳು ಬತ್ತುತ್ತಿವೆ. ನೀರಿನ ಕೊರತೆ ನೀಗಿಸಲು ಭೂಮಿಯಲ್ಲಿ ಕನ್ನ ಕೊರೆತು ಅಂತರ್ಜಲವನ್ನು ಹಾಯಿಸಲಾಗುತ್ತಿದೆ. ಆದರೆ, ಅಂತರ್ಜಲ ಹೆಚ್ಚಳಕ್ಕೆ ಪೂರಕವಾದ ಕಿಂಡಿ ಅಣೆಕಟ್ಟು ಇತ್ಯಾದಿಗಳನ್ನು ಮರೆಯದಿದ್ದರೆ ಲೇಸು ಎನ್ನುತ್ತಾರೆ ಕೃಷಿ ತಜ್ಞರು.

ಮಳೆಕೊಯ್ಲು ಏಕಿಲ್ಲ?
ಕೃಷಿ ಸಮೃದ್ಧ ತಾಲೂಕಿನಲ್ಲಿ ಈಗ ಬೃಹತ್‌ ಗಾತ್ರದ ಕಟ್ಟಡಗಳು ತಲೆ ಎತ್ತಿವೆ. ಕಾಂಕ್ರೀಟ್‌ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಎಲ್ಲಿಯೂ ಇಲ್ಲ. ಸರಕಾರಿ ಕಚೇರಿಗಳಲ್ಲಿ ಕೂಡ ಅಳವಡಿಸುತ್ತಿಲ್ಲ. ಬಹುತೇಕ ಮಳೆ ನೀರಿ ಚರಂಡಿಯಲ್ಲಿಯೇ ಹರಿಯುವುದರಿಂದ ಅಂತರ್ಜಲ ಬೇಗನೆ ಬರಿದಾಗುತ್ತಿದೆ.

110 ಕಿಂಡಿ ಅಣೆಕಟ್ಟು
ಸುಳ್ಯ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳು 110ರಷ್ಟಿವೆ. ಇದು ಜಲ ಸಂರಕ್ಷಣೆ ಜತೆಗೆ ಕೃಷಿ ತೋಟಗಳಿಗೆ ನೀರೊದಗಿಸಲು ಸಹಕಾರಿಯಾಗಿದೆ. ಜಲಾನಯನ ಇಲಾಖೆ ಮೂಲಕ ಅಣೆಕಟ್ಟು ಇದ್ದು ಸಣ್ಣ ನೀರಾವರಿ ಇಲಾಖೆಯ ಮೂಲಕ ಕೂಡ ಕಿಂಡಿ ಅಣೆಕಟ್ಟುಗಳು ತಾಲೂಕಿನ ಹಲವೆಡೆ ನಿರ್ಮಾಣಗೊಂಡಿವೆ. ಹಳೆಯ ಅಣೆಕಟ್ಟಿನಲ್ಲಿ ಹಲಗೆಗಳ ನಡುವೆ ಅಂತರ ಇರುವುದರಿಂದ ಸೋರಿಕೆಯಾಗುತ್ತಿದ್ದು, ಪೂರ್ಣಪ್ರಮಾಣದಲ್ಲಿ ನೀರಿನ ಸಂಗ್ರಹ ಸಾಧ್ಯವಾಗುತ್ತಿಲ್ಲ. ಉಳಿದಂತೆ ಸುಳ್ಯ ತಾಲೂಕಿನಲ್ಲಿ ಬಹುತೇಕ ಕಿಂಡಿ ಅಣೆಕಟ್ಟುಗಳು ಸುಸ್ಥಿತಿಯಲ್ಲಿವೆ.

ಹಲಗೆ ಜೋಡಣೆ ಪೂರ್ಣ
ತಾಲೂಕಿನಲ್ಲಿ ಇರುವ ಕಿಂಡಿ ಅಣೆಕಟ್ಟುಗಳಿಗೆ ಪೈಕಿ ಬಹುತೇಕ ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕಾರ್ಯ ಮುಕ್ತಾಯವಾಗಿದೆ. ನೀರು ಸಂರಕ್ಷಣೆಗೊಂಡು ಬಳಕೆಗೆ ಸಿಗುತ್ತಿದೆ.
ಮೋಹನ್‌ ನಂಗಾರು,
  ಕೃಷಿ ಅಧಿಕಾರಿ, ಸುಳ್ಯ

 ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Kolhapur: ಜೈಲಿನೊಳಗೆ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಖಾನ್‌ ಹತ್ಯೆ

Kolhapur: ಜೈಲಿನೊಳಗೆ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ ಖಾನ್‌ ಹತ್ಯೆ

8

Natasa Stankovic: ಹಾರ್ದಿಕ್‌ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ನತಾಶ

ಟಿ20 ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾಗ್ ಪರಾಗ್

T20 World Cup 2024: ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾನ್ ಪರಾಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temple: ರಜೆ ಹಿನ್ನಲೆ… ಸುಬ್ರಹ್ಮಣ್ಯ, ಧರ್ಮಸ್ಥಳ ದೇಗುಲಗಳಲ್ಲಿ ಭಕ್ತ ಸಂದಣಿ

Temple: ರಜೆ ಹಿನ್ನಲೆ… ಸುಬ್ರಹ್ಮಣ್ಯ, ಧರ್ಮಸ್ಥಳ ದೇಗುಲಗಳಲ್ಲಿ ಭಕ್ತ ಸಂದಣಿ

Bantwal: ಬರಿಮಾರು ಗ್ರಾಮದ ಗಾಣದಪಾಲು: ನೆರೆಕರೆ ಮನೆಯವರ ಜಗಳ; ಪ್ರತ್ಯೇಕ ಪ್ರಕರಣ ದಾಖಲು

Bantwal: ಬರಿಮಾರು ಗ್ರಾಮದ ಗಾಣದಪಾಲು: ನೆರೆಕರೆ ಮನೆಯವರ ಜಗಳ; ಪ್ರತ್ಯೇಕ ಪ್ರಕರಣ ದಾಖಲು

14-vitla

Vitla: ಅಣ್ಣನ ಹಣ, ಭೂಮಿ ಲಪಟಾಯಿಸಿದ ಸಹೋದರಿ

ಸಂಪಾಜೆ: ಬ್ಯಾಂಕ್‌ನಲ್ಲಿ ಧರಣಿ ಕುಳಿತ ಗ್ರಾಹಕ

Sampaje ಬ್ಯಾಂಕ್‌ನಲ್ಲಿ ಧರಣಿ ಕುಳಿತ ಗ್ರಾಹಕ

Fraud Case ಡ್ರಮ್‌ ಪೂರೈಕೆ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

Fraud Case ಡ್ರಮ್‌ ಪೂರೈಕೆ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

Odisha Assembly poll: ಒಡಿಶಾ ವಿಧಾನಸಭೆ ಈ ಬಾರಿ ಬಿಜೆಪಿ ತೆಕ್ಕೆಗೆ, ಬಿಜೆಡಿಗೆ ಮುಖಭಂಗ?

hejjaru kannada movie songs

Hejjaru: ಪ್ರೀತಿಯಲ್ಲಿ ಇವನ್ಯಾರೋ… ಹೆಜ್ಜಾರು ಹಾಡುಹಬ್ಬ

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Shimoga: ಮಟನ್ ಹೆಚ್ಚಿಗೆ ಹಾಕೆಂದು ಹೇಳಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಮಚ್ಚೇಟು!

Kotee movie trailer

Kotee movie; ಇನ್ನೆರಡು ದಿನದಲ್ಲಿ ಧನಂಜಯ್‌ ನಟನೆಯ ‘ಕೋಟಿ’ ಟ್ರೇಲರ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.