ದೇರ್ಲದ ಅಯ್ಯಪ್ಪ ವ್ರತಧಾರಿ ಕೋಯಿಕ್ಕೋಡ್ನಲ್ಲಿ ಸಾವು
Team Udayavani, Dec 24, 2022, 1:05 AM IST
ಪುತ್ತೂರು: ಶಬರಿಮಲೆ ಯಾತ್ರೆ ಸಂದರ್ಭ ಅಸ್ವಸ್ಥರಾದ ಕೆಯ್ಯೂರು ಗ್ರಾಮದ ದೇರ್ಲ ಗಂಗಾಧರ (39) ಅವರು 21ರಂದು ಕೇರಳದ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅವರು ಸುಳ್ಯದ ಬೆಳ್ಳಾರೆಯಿಂದ ಬೆಂಗಳೂರಿನ ಸಹೋದ್ಯೋಗಿಗಳೊಂದಿಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ದಾರಿ ಮಧ್ಯೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗಂಗಾಧರ್ ತನ್ನ ಬಳಗದಿಂದ ತಪ್ಪಿಸಿಕೊಂಡಿದ್ದ ಬಗ್ಗೆ ಜತೆಗಿದ್ದವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ಸಂಜೆ ವೇಳೆಗೆ ಪೊಲೀಸರು ಗಂಗಾಧರ್ ಅವರನ್ನು ಹುಡುಕಿ ತಂಡಕ್ಕೆ ಒಪ್ಪಿಸಿದ್ದರು.
ಆದರೆ ಆ ಬಳಿಕ ಗಂಗಾಧರ್ ಅಸ್ವಸ್ಥಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಕೋಯಿಕ್ಕೋಡ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.