ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಾರ್ಷಿಕ ಆದಾಯ 89,65,91,361.68 ರೂ.
Team Udayavani, May 6, 2017, 3:05 PM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ 89,65,91,361.68 ರೂ. ಆದಾಯ ಗಳಿಸಿದೆ. 2016 ಎಪ್ರಿಲ್ನಿಂದ 2017 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇಗುಲಕ್ಕೆ ಈ ಆದಾಯ ಲಭಿಸಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೈತೋಟದಿಂದ ಆದಾಯ ಬರುತ್ತದೆ.
2015-16ನೇ ಆರ್ಥಿಕ ವರ್ಷದಲ್ಲಿ ದೇಗುಲ 88,83,54,674.36 ರೂ. ಆದಾಯ ಗಳಿಸಿತ್ತು. ಶ್ರೀ ದೇಗುಲ ಕಳೆದ ವರ್ಷಕ್ಕಿಂತ 82,36,687.32 ರೂ. ಅಧಿಕ ಆದಾಯ ಗಳಿಸಿದೆ ಎಂದು ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
ಆದಾಯ ಮೂಲಗಳು
ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೈ ತೋಟದಿಂದ ಆದಾಯ ಬರುತ್ತದೆ. ಈ ಬಾರಿ ಸ್ವಂತ ಕೃಷಿಯಿಂದ 2,12,22,317.00 ರೂ., ಕಟ್ಟಡ ಬಾಡಿಗೆಯಿಂದ 44,43,851.00 ರೂ., ಕಾಣಿಕೆ ಮೂಲಕ 1,68,39,124.14 ರೂ., ಕಾಣಿಕೆ ಡಬ್ಬಿಯಿಂದ 17,65,59,002.00 ರೂ., ಹರಕೆ ಸೇವೆಗಳಿಂದ 38,24,37,464.18 ರೂ., ವಿವಿಧ ಬ್ಯಾಂಕ್ಗಳಲ್ಲಿರುವ ನಿರಖು ಠೇವಣಿ ಬಡ್ಡಿಯಿಂದ 19,20,25,572.57 ರೂ., ಅನುದಾನ ಮೂಲಕ 1,22,673.00 ರೂ., ಸಂಕೀರ್ಣ ಜಮೆ 4,36,07,667.04 ರೂ., ನಿಧಿ ಮೂಲಕ 5,93,33,690.75 ರೂ. ಆದಾಯ ಬಂದಿದೆ. ಹೀಗೆ ಒಟ್ಟು 89 ಕೋಟಿ 65 ಲಕ್ಷದ 91 ಸಾವಿರದ 361.68 ರೂ. ಆದಾಯ ದೇಗುಲಕ್ಕೆ ಬಂದಿದೆ.
ಮೂಲ ಸೌಕರ್ಯಕ್ಕೆ ಆದ್ಯತೆ: ಮುಂಡೋಡಿ
ಭಕ್ತರಿಗೆ ಬೇಕಾದ ಆವಶ್ಯಕತೆಗಳನ್ನು ವ್ಯವಸ್ಥಿತವಾಗಿ ಪೂರೈಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಗುಲದ ಆಡಳಿತ ಮಂಡಳಿ ಭಕ್ತರ ಅನುಕೂಲತೆಗೆ ಅನೇಕ ಅಭಿವೃದ್ಧಿ ಯೋಜನೆ ಹಮ್ಮಿಕೊಂಡು ಅದನ್ನು ಕಾರ್ಯಗತಗೊಳಿಸಿದೆ. ಕ್ಷೇತ್ರ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ