ವಕೀಲ ನೌಶಾದ್ ಕೊಲೆ ಕೇಸ್-ಐವರು ಆರೋಪಿಗಳು ಖುಲಾಸೆ; ಹೈಕೋರ್ಟ್
Team Udayavani, Jul 31, 2018, 6:14 PM IST
ಮಂಗಳೂರು:2009ರಲ್ಲಿ ಮಂಗಳೂರಿನಲ್ಲಿ ನಡೆದ ವಕೀಲ ನೌಶಾದ್ ಖಾಸೀಮ್ ಜಿ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಹೈಕೋರ್ಟ್ ಮಂಗಳವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.
2009ರ ಏಪ್ರಿಲ್ 9ರಂದು ವಕೀಲ ನೌಶಾದ್ ಅವರನ್ನು ಹತ್ಯೆಗೈಯಲಾಗಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಹಾಗೂ ಇಬ್ಬರಿಗೆ 7 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.
ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಐವರೂ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ .ದಿನೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ, ರಿತೇಶ್ ಅಲಿಯಾಸ್ ರೀತು, ಸುಬ್ರಹ್ಮಣ್ಯ, ಗಣೇಶ್ ಖುಲಾಸೆಗೊಳಿಸಿದೆ.