ಜಾತಿಯ ಸಂಕೋಲೆ ಕಳಚೋಣ ಭವ್ಯ ಭಾರತನ್ನು ಕಟ್ಟೋಣ: ಚಕ್ರವರ್ತಿ ಸೂಲಿಬೆಲೆ
Team Udayavani, Apr 24, 2017, 3:10 PM IST
ಕಿನ್ನಿಗೋಳಿ: ದೇಶ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ರಾಮಾನುಜಾ ಚಾರ್ಯರು ಸಾವಿರದ ವರ್ಷಗಳ ಹಿಂದೆ ಜಾತಿಯ ಪರಿಕಲ್ಪನೆಯನ್ನು ಮೆಟ್ಟಿ ನಿಂತವರು. ಅದೇ ರೀತಿ 100 ವರ್ಷಗಳ ಹಿಂದೆ ಡಾ| ಬಿ. ಆರ್. ಅಂಬೇಡ್ಕರ್ ಕೂಡ ಜಾತಿಯ ಸಾಮರಸ್ಯಕ್ಕಾಗಿ ಜೀವನವನ್ನು ಸವೆಸಿದರು ಎಂದು ಖ್ಯಾತ ಅಂಕಣಕಾರ ಯುವಾ ಬ್ರಿಗೇಡ್ ಮಾಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಎ. 23ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ರೋಟರ್ಯಾಕ್ಟ್ ಕ್ಲಬ್ ಯುವ ಬ್ರಿಗೇಡ್ ಕಿನ್ನಿಗೋಳಿ ಇದರ ಆಶ್ರಯದಲ್ಲಿ ಸಾವಿರದ ಜಯಂತಿಯ “ಜಾತಿಯ ಸಂಕೋಲೆಯನ್ನು ಕಳಚೋಣ ಬನ್ನಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಥವರನ್ನು ನೆನಸಿಕೊಂಡು ಶತಮಾನಗಳಿಂದ ಅಂಟಿಕೊಂಡಿರುವ ಜಾತಿಯ ಕೊಳೆಯನ್ನು ತೊಳೆದು ಬಿಡಲು ನಾವು ಯಾಕೇ ಪ್ರಯತ್ನ ಮಾಡಬಾರದು ಎಂದು ಪ್ರಶ್ನಿಸಿದರು. ಮೇಲ್ವರ್ಗ ಹಾಗೂ ಕೆಳವರ್ಗ ಎಂಬ ಮನೋಧರ್ಮ ಹಿಂದಿನ ಕಾಲದಿಂದಲೂ ಬಂದಿದೆ. ಅದನ್ನು ವಿರೋಧಿಸಿದ್ದ ರಾಮಾನುಜಾಚಾರ್ಯರು ಮತ್ತು ಎಲ್ಲ ಅವಮಾನಗಳ ವಿರುದ್ಧ ಸೆಟೆದು ನಿಂತು ಸಮಾಜದ ಉದ್ಧಾರಕ್ಕೆ ಕಟಿಬದ್ಧರಾದ ಡಾ| ಅಂಬೇಡ್ಕರರ ಅವರನ್ನು ನೆನಪಿಸುವುದು ಅಗತ್ಯ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ
ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ
Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ
Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!