ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನಲ್ಲಿ ಮಹಾವೀರ ಜಯಂತಿ ಆಚರಣೆ
Team Udayavani, Apr 25, 2021, 5:48 PM IST
ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನಲ್ಲಿ ರವಿವಾರ ಭ| ಮಹಾವೀರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಾಜಿ ಸಚಿವ, ಮಹಾವೀರ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಅವರ ಉಪಸ್ಥಿತಿ ಯಲ್ಲಿ ಮಲ್ಲಿನಾಥ ಇಂದ್ರ ಅವರು ಕಾಲೇಜಿನ ಪ್ರವೇಶಭಾಗದಲ್ಲಿರುವ ಶ್ರೀ ಮಹಾವೀರ ಸ್ವಾಮಿಯ ಅಮೃತಶಿಲೆಯ ಮೂರ್ತಿ ಗೆ ಹಾಲು, ಶ್ರೀಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಪೂಜೆ ನಡೆಸಿಕೊಟ್ಟರು.
ಆಭಯಚಂದ್ರ ಸಾಂದರ್ಭಿಕವಾಗಿ ಮಾತನಾಡಿ, “ಇಪ್ಪತ್ತನಾಲ್ಕನೇ ತೀರ್ಥಂಕರ ಭ| ಮಹಾವೀರರು ರಾಜನಾಗಿದ್ದರೂ ಸುಖಭೋಗ ತ್ಯಜಿಸಿ ಅಹಿಂಸೆಯೇ ಪರಮ ಧರ್ಮ ಎಂದು ಲೋಕಕ್ಕೆ ಸಾರಿದವರು. ಅವರ ಬೋಧನೆಯ ಬೆಳಕಿನಲ್ಲಿ ಜಗತ್ತು ಶಾಂತಿಯನ್ನು ಕಾಣುವಂತಾಗಲಿ. ಜಗತ್ತನ್ನು ಕಂಗೆಡಿಸಿರುವ ರೋಗರುಜಿನ ಹತೋಟಿಗೆ ಬಂದು ಜಗತ್ತು ನೆಮ್ಮದಿಯನ್ನು ಅನುಭವಿಸುವಂತಾಗಲಿ” ಎಂದು ಪ್ರಾರ್ಥಿಸಿದರು.
ಕಾಲೇಜಿನ ಪ್ರಾಚಾರ್ಯ ಮೇಜರ್ ಡಾ. ರಾಧಾಕೃಷ್ಣ ಶೆಟ್ಟಿ, ಪ.ಪೂ.ಕಾಲೇಜು ಪ್ರಾಚಾರ್ಯ ಪ್ರೊ. ಎಂ. ರಮೇಶ್ ಭಟ್, ಪ್ರೊ. ಹರೀಶ್,ಎಸ್ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ ಪ್ರಾಚಾರ್ಯ ಜೆ.ಜೆ.ಪಿಂಟೋ, ಎಂಕೆ ಅನಂತ್ರಾಜ್ ಸಿಪಿಎಡ್ ಪ್ರಾಚಾರ್ಯ ಧನಂಜಯ ಶೆಟ್ಟಿ, ಎ.ಜಿ.ಸೋನ್ಸ್ ಐಟಿಐ ಪ್ರಾಚಾರ್ಯ ಜಯರಾಮ ಶೆಟ್ಟಿಗಾರ್, ವಿವಿಧ ಸಂಸ್ಥೆಗಳ ಸಿಬಂದಿ ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ