ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಹಲವೆಡೆ ಜಲಾವೃತ
Team Udayavani, Jul 10, 2022, 3:00 PM IST
ಸುಬ್ರಹ್ಮಣ್ಯ: ಪ್ರಸಿದ್ಧ ಯಾತ್ರಾ ಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪರಿಸರದ ಅಕ್ಕಪಕ್ಕದ ಹಲವೆಡೆ ನೆರೆ ನೀರಿನಿಂದ ಜಲಾವೃತ ಗೊಂಡಿದೆ.
ಸುಬ್ರಹ್ಮಣ್ಯ ಕುಮಾರಧಾರ ಬಳಿಯ ಪಂಜ ಸಂರ್ಪಕ ರಸ್ತೆಯ ದರ್ಪಣ ತೀರ್ಥ ಹೊಳೆಯ ಸೇತುವೆ ಮುಳುಗಡೆಯಾಗಿದೆ. ಐನೆಕಿದು – ಹರಿಹರ ಪಲ್ಲತ್ತಡ್ಕ ಸಂಪರ್ಕ ರಸ್ತೆಯ ಗುಂಡಡ್ಕ ಸೇತುವೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಪಂಜ ಸಮೀಪದ ಬೊಳ್ಮಲೆ ಎಂಬಲ್ಲಿನ ಸೇತುವೆ ಮುಳುಗಡೆಯಾಗಿದೆ. ಪಂಜ – ಕಡಬ ಹೆದ್ದಾರಿಯ ಪುಳಿಕುಕ್ಕು ಬಳಿ ಕುಮಾರಧಾರ ನದಿ ನೀರು ಹೆದ್ದಾರಿಗೆ ನುಗ್ಗಿ ಹೆದ್ದಾರಿ ಜಲಾವೃತ ಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಯೇನೆಕಲ್ಲು ಶಂಖಪಾಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸುತ್ತ ನದಿ ನೀರು ಆವರಿಸಿದೆ. ಸುಬ್ರಹ್ಮಣ್ಯ ಪರಿಸರದ ಹಲವೆಡೆ ಹಾನಿ ಹಾಗೂ ಸಂಪರ್ಕ ಕಡಿತ ಘನೆಯೂ ಸಂಭವಿಸಿದೆ. ಸುಬ್ರಹ್ಮಣ್ಯ ದ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ.
ಪಾಣಾಜೆ: ಭಾರಿ ಮಳೆಗೆ ಬಾವಿ ಕುಸಿತ
ಪಾಣಾಜೆ: ಪಾಣಾಜೆ ಗ್ರಾಮದ ಗುವೆಲ್ ಗದ್ದೆ ಎಂಬಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಬಾವಿ ಕುಸಿದಿದೆ. ಶಿವಕುಮಾರ್ ಎಂಬವರ ಬಾವಿ ಕುಸಿದಿದ್ದು ವಾಸದ ಮನೆ ಇದ್ದು ಅಪಾಯದ ಅಂಚಿನಲ್ಲಿದೆ.ಬಾವಿ ಕುಸಿದಿರುವ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಸ್ಥಳ ದಲ್ಲಿ ಜಮಾವಣೆ ಗೊಂಡಿದ್ದಾರೆ.ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡದೆ ಇರುವುದರಿಂದ ಬಾವಿ ಕುಸಿಯಲು ಕಾರಣ ಎಂದು ಅಂದಾಜಿಸಲಾಗಿದೆ.