ಮೂಡುಕೋಡಿ ಬಿಜೆಪಿ ಗ್ರಾಮ ಸಮಿತಿ: ಉಚಿತ ಗ್ಯಾಸ್ ವಿತರಣೆ
Team Udayavani, Aug 22, 2017, 7:50 AM IST
ವೇಣೂರು: ಪ್ರಧಾನಮಂತ್ರಿ ಉಜ್ವಲ ಅನಿಲ ಯೋಜನೆಯಡಿ ಮೂಡುಕೋಡಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಫಲಾನುಭವಿ ಗ್ರಾಮಸ್ಥರಿಗೆ ಉಚಿತ ಗ್ಯಾಸ್ ವಿತರಣೆ ಕಾರ್ಯಕ್ರಮ ನಡ್ತಿಕಲ್ಲು ಶ್ರೀರಾಮ ಭಜನ ಮಂದಿರದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಅವರು ಫಲಾನುಭವಿಗಳಿಗೆ ಗ್ಯಾಸ್ ಕಿಟ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೇಣೂರು ಗ್ರಾ.ಪಂ. ಸದಸ್ಯರಾದ ಲಕ್ಷ್ಮಣ ಪೂಜಾರಿ, ಹರೀಶ್ ಪಿ.ಎಸ್., ವೇಣೂರು ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕಿ ವೀಣಾ ಜಯ ದೇವಾಡಿಗ, ಮೂಡುಕೋಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ, ವೇಣೂರು ಪಾರ್ಶ್ವನಾಥ ಭಾರತ್ ಗ್ಯಾಸ್ ಗ್ರಾಮೀಣ ವಿತರಣೆ ಕೇಂದ್ರದ ಮ್ಯಾನೇಜರ್ ಎಚ್. ಮಹಮ್ಮದ್, ಸಿಬಂದಿ ಸತೀಶ್, ಪ್ರವೀಣ್, ದೀಕ್ಷಿತ್, ಅಶ್ವತ್ಥ್ , ತುಳಸಿ, ಸುಪ್ರೀತಾ ಮತ್ತಿತರರು ಉಪಸ್ಥಿತರಿದ್ದರು.ಬಿಜೆಪಿ ಗ್ರಾಮ ಸಮಿತಿ ಸದಸ್ಯ ಹರೀಶ್ ಆಚಾರ್ಯ ಸ್ವಾಗತಿಸಿ ವಾಸುದೇವ ಕಾರಂತ ವಂದಿಸಿದರು. ಬಿಜೆಪಿ ಗ್ರಾಮ ಸಮಿತಿ ಸದಸ್ಯರು ಸಹಕರಿಸಿದರು.