ಪುತ್ತೂರು ಕಂಬಳಕ್ಕೆ ಕರೆ ಮುಹೂರ್ತ
Team Udayavani, Dec 1, 2017, 2:45 PM IST
ಪುತ್ತೂರು: ಐತಿಹಾಸಿಕ ಪುತ್ತೂರು ಕೋಟಿ -ಚೆನ್ನಯ ಜೋಡುಕರೆ ಕಂಬಳವು 25ನೇ ವರ್ಷದ ಸಂಭ್ರಮದಲ್ಲಿದ್ದು, ಜ. 20ರಂದು ಪುತ್ತೂರು ಕಂಬಳ ನಡೆಯಲಿದೆ. ಗುರುವಾರ ಕಂಬಳ ಕೂಟಕ್ಕೆ ಕರೆ ಮುಹೂರ್ತ ನೆರವೇರಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ಎನ್. ಸುಧಾಕರ ಶೆಟ್ಟಿ ಹಾಗೂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮುಹೂರ್ತ ನೆರವೇರಿಸಿದರು.
ಈ ಸಂದರ್ಭ ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ., ಪ್ರಮುಖರಾದ ಎಲಿಕ ಜಯರಾಜ್, ಪ್ರೇಮಾನಂದ ನಾಯಕ್, ಸುಧೀರ್ ಶೆಟ್ಟಿ, ಮುರಳೀಧರ್ ಮಠಂತಬೆಟ್ಟು, ಗಣೇಶ್ ರಾಜ್ ಶೆಟ್ಟಿ, ರೋಹಿತ್ ನೆಲ್ಲಿಕಟ್ಟೆ, ಬಿ.ಎಂ. ರಾಜೇಶ್ ನೆಲ್ಲಿಕಟ್ಟೆ, ಗಣೇಶ್ ಶೆಟ್ಟಿ, ರೋಶನ್ ರೈ, ಉಮಾಶಂಕರ್ ಮೊದಲಾದವರು ಉಪಸ್ಥಿತರಿದ್ದರು.