ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆ: ಹಳೆ ಬಿಲ್‌ ಈಗ ಪಾಸ್‌ ಮಾಡುತ್ತಿರುವುದಕ್ಕೆ ಅಸಮಾಧಾನ


Team Udayavani, Jan 10, 2023, 5:50 AM IST

ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆ: ಹಳೆ ಬಿಲ್‌ ಈಗ ಪಾಸ್‌ ಮಾಡುತ್ತಿರುವುದಕ್ಕೆ ಅಸಮಾಧಾನ

ಸುಳ್ಯ: ಹಳೆಯ ಬಿಲ್‌ಗ‌ಳನ್ನು ಈಗ ಪಾಸ್‌ ಮಾಡುತ್ತಿರುವುದಕ್ಕೆ ವಿಪಕ್ಷ ಸದಸ್ಯರು ಕಾರಣ ಕ್ಷೇಳಿ ಆಕ್ಷೇಪಿಸಿದ ಘಟನೆ ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆ ನಗರ ಪಂಚಾಯತ್‌ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ ಅಧ್ಯಕ್ಷತೆಯಲ್ಲಿ ಸೋಮವಾರ ನ.ಪಂ. ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.

ವಿಷಯ ಪ್ರಸ್ತಾವಿಸಿದ ವಿಪಕ್ಷದವರು, ಹಳೆಯ ಬಿಲ್‌ಗ‌ಳನ್ನು ಈಗ ಪಾಸ್‌ ಮಾಡಲು ಕಾರಣಗಳೇನು? ಅಂದು ಬಿಲ್‌ ಪಾವತಿಸದೆ ಬಾಕಿ ಇಡಲು ಕಾರಣ ಏನೆಂದು ಪ್ರಶ್ನಿಸಿದರು. ಬಾಕಿಯಾಗಿರುವ ಬಗ್ಗೆ ಷರಾ ಬರೆಯಬೇಕಿತ್ತು ಎಂದರು. ಮುಂದಕ್ಕೆ ಹಳೆ ಬಿಲ್‌ ಬಾಕಿ ಮಾಡಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬರೆಯುವ ಎಂದು ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ ಸಭೆಗೆ ತಿಳಿಸಿ ವಿಚಾರವನ್ನು ಮುಗಿಸಿದರು.

ನಾನೂ ಬ್ಯಾನರ್‌ ಹಾಕುವೆ
ವೆಂಕಪ್ಪ ಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಪಟ್ಟಿಯನ್ನು ನಾನು ತಯಾರಿಸಿ ಬ್ಯಾನರ್‌ ಅಳವಡಿಸುತ್ತೇನೆ ಎಂದರು. ಸದಸ್ಯ ರೋಹಿತ್‌ ಮಾತನಾಡಿ, ಕೇಂದ್ರ, ರಾಜ್ಯ ಸರಕಾರ ಜನತೆಗೆ ವಿವಿಧ ಯೋಜನೆಗಳ ಮೂಲಕ ಹಣ ನೀಡುತ್ತಾ ಜನಪರ ಕೆಲಸ ಮಾಡುತ್ತಿದೆ. ಇದರ ಪಟ್ಟಿ ನನ್ನಲ್ಲೂ ಇದೆ. ಈ ಬಗ್ಗೆ ನಾನೂ ಬ್ಯಾನರ್‌ ಹಾಕುವೆ ಎಂದು ತಿಳಿಸಿದರು.

ಅಸಮಾಧಾನ
ನ.ಪಂ. ವಠಾರದಲ್ಲಿ ಕಸದ ರಾಶಿ ಹಾಗೆ ಉಳಿಯಲು ಹಿಂದಿನ ಮುಖ್ಯಾಧಿಕಾರಿ ಎಂ.ಆರ್‌. ಸ್ವಾಮಿ ಕಾರಣ ಎಂದು ದೂರು ನೀಡಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಇದಕ್ಕೆ ಅವರೊಬ್ಬರೆ ಕಾರಣವೆ? ಒಬ್ಬನನ್ನೇ ಹೊಣೆ ಮಾಡುವುದು ಎಷ್ಟು ಸರಿ. ಹಿಂದಿನವರು ಕಾರಣರಲ್ಲವೆ ಎಂದು ಸದಸ್ಯ ವೆಂಕಪ್ಪ ಗೌಡ ಪ್ರಶ್ನಿಸಿದಾಗ ಅಧ್ಯಕ್ಷ ವಿನಯಕುಮಾರ್‌ ಮಾತನಾಡಿ, ನಮ್ಮ ಆಡಳಿತ ಅವಧಿಯಲ್ಲಿ ಕಸದ ರಾಶಿ ತೆರವಿಗೆ ಅಂದಿನ ಮುಖ್ಯಾಧಿಕಾರಿ ಎಂ.ಆರ್‌.ಸ್ವಾಮಿ ಅವರು ವಿಫ‌ರಾಗಿದ್ದಾರೆ ಎಂದು ನಾವು ಬರೆದಿದ್ದೇವೆ ಎಂದರು. ಕಸ ಸಾಗಾಟಕ್ಕೆ ಪ್ರಮಾಣ ಅಂದಾಜು ಮಾಡುವಲ್ಲಿ ವ್ಯತ್ಯಾಸ ಆಗಿರುವುದಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸುಧಾಕರ್‌ ಸಮಜಾಯಿಸಿಕೆ ನೀಡಿದರು. ಕಸ ನಿರ್ವಹಣೆ ಬಗ್ಗೆ ನಾವು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಅವರು ಆದಷ್ಟು ಬೇಗ ಅನುಮತಿ ನೀಡಿದಲ್ಲಿ ಬೇಗ ಕಸ ಸಾಗಾಟ ಮಾಡುತ್ತೇವೆ. ಆದರೆ ಅವರು ಲಿಖೀತ ರೂಪದಲ್ಲಿ ಅನುಮತಿ ನೀಡಬೇಕು ಎಂದು ವಿನಯಕುಮಾರ್‌ ತಿಳಿಸಿದರು.

ಕಪ್ಪು ಪಟ್ಟಿ
ಸಚಿವ ಎಸ್‌.ಅಂಗಾರ ಅವರು ಸಾಮಾನ್ಯ ಸಭೆಗೆ ಬರಬೇಕೆಂದು ಪಟ್ಟು ಹಿಡಿದಿರುವ ವಿಪಕ್ಷ ಸದಸ್ಯ ಸದ್ರಿ ಸಭೆಗೂ ಕಪ್ಪು ಪಟ್ಟಿ ಧರಿಸಿದ್ದರು. ನ.ಪಂ.ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸದಸ್ಯ ಶರೀಫ್ ಕಂಠಿ ಆರೋಪಿಸಿದರು. ಮನೆ ಮಂಜೂರು ವಿಚಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ನಗರ ಪಂಚಾಯತ್‌ ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಶೀಲಾ ಅರುಣ್‌ ಕುರುಂಜಿ ಸೇರಿದಂತೆ ನ.ಪಂ. ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಸುಧಾಕರ್‌ ಸ್ವಾಗತಿಸಿ, ವಂದಿಸಿದರು.

ಬ್ಯಾನರ್‌ಗೆ ಆಕ್ಷೇಪ
ಸುಳ್ಯ ನಗರದಲ್ಲಿ ಲವ್‌ ಜೆಹಾದ್‌ ಕುರಿತು ಬ್ಯಾನರ್‌ ಅಳವಡಿಸಲಾಗಿದ್ದು, ಇದು ಸಮಾಜದ ಸೌಹಾರ್ದ ಕೆಡಿಸುವ ರೀತಿಯಲ್ಲಿದೆ ಎಂದು ಸದಸ್ಯ ಕೆ.ಎಸ್‌. ಉಮ್ಮರ್‌ಹೇಳಿದರು. ಲವ್‌ ಜೆಹಾದ್‌ ಇದೆ ಎಂಬುದನ್ನು ಕೋರ್ಟ್‌ ಮಾನ್ಯ ಮಾಡಿಲ್ಲ. ಬ್ಯಾನರ್‌ ಅಳವಡಿಸಿ 15 ದಿನಗಳು ಕಳೆದರೂ ತೆರವಾಗಿಲ್ಲ. ಒಂದೋ ಬ್ಯಾನರ್‌ ತೆರವು ಮಾಡಬೇಕು. ಇಲ್ಲವೇ ಲವ್‌ ಜೆಹಾದ್‌ ಇಲ್ಲ ಎಂಬ ಬಗ್ಗೆ ಬ್ಯಾನರ್‌ ಅಳವಡಿಸಲು ನಮಗೂ ಅನುಮತಿ ನೀಡಬೇಕು ಎಂದು ಶರೀಫ್ ಆಗ್ರಹಿಸಿದರು. ಉತ್ತರಿಸಿದ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ಲವ್‌ ಜೆಹಾದ್‌ ಇದೆಯೋ, ಇಲ್ಲವೋ ಗೊತ್ತಿಲ್ಲ. ಎನ್‌ಐಎ ಸುಳ್ಯಕ್ಕೂ ಬಂದಿದೆ. ಮಂಗಳೂರಿನ ವಿದ್ಯಾಸಂಸ್ಥೆಯ ಮೇಲೂ ದಾಳಿ ನಡೆಸಿದೆ. ಇದು ಇಲ್ಲಿ ಚರ್ಚಿಸುವ ವಿಚಾರವಲ್ಲ. ಬ್ಯಾನರ್‌ ತೆಗೆಯಲು ಸಂಘಟನೆಯವರಿಗೆ ತಿಳಿಸಿದ್ದೇವೆ. ತೆಗೆದಿರುವ ಸಾಧ್ಯತೆಯಿದೆ. ತೆಗೆದಿಲ್ಲ ಎಂದಾದರೆ ತೆಗಿಯುವಂತೆ ತಿಳಿಸಲಾಗುವುದು ಎಂದರು.

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.