ಯೇನೆಪೊಯ:ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ
Team Udayavani, Jul 11, 2017, 2:10 AM IST
ಬಲ್ಮಠ : ಇಲ್ಲಿನ ಯೇನೆಪೊಯ ಕಾಲೇಜಿನಲ್ಲಿ ಪ್ರಥಮಬಿ.ಕಾಂ., ಬಿ.ಕಾಂ – ಎಸಿಸಿಎ ಮತ್ತು ಬಿ.ಎಚ್.ಎಸ್. ಹಾಸ್ಪಿಟಾಲಿಟಿ ಸಯನ್ಸ್ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ (ಪ್ರೇರಣಾ) ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿದ್ದ ಯೇನೆಪೊಯ ವಿವಿ ಕುಲಸಚಿವ ಜಿ.ಶ್ರೀಕುಮಾರ್ ಮೆನನ್ ಅವರು ವಿದ್ಯಾರ್ಥಿಗಳಿಗೆ ಬಿ.ಕಾಂ. ಮತ್ತು ಬಿ.ಕಾಂ.- ಎಸಿಸಿಎ, ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸಿನ ಮಹತ್ವ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಯೇನೆಪೋಯ ಸಂಸ್ಥೆಯ ಮಾರಾಟ ಮತ್ತು ಸರಕು ಖರೀದಿ ವಿಭಾಗದ ನಿರ್ದೇಶಕ ಯೇನೆಪೊಯ ಮೊದಿನ್ಖುರ್ಷಿದ್, ಸಂಸ್ಥೆಯ ಫುಡ್ ಆ್ಯಂಡ್ ಬಿವೆರೆಜಸ್ ಜನರಲ್ ಮ್ಯಾನೇಜರ್ ರವಿ ಎನ್. ಖಂಡಿಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ಡಾ|ಜೊಬಿ ಇ.ಸಿ. ಮಾತನಾಡಿ, ಪೋಷಕರು ಹಾಗೂ ಉಪನ್ಯಾಸಕರ ಸಹಕಾರದಿಂದ ವಿದ್ಯಾರ್ಥಿಗಳ ಸರ್ವರ್ತೋಮುಖ ಬೆಳವಣಿಗೆ ಸಾಧ್ಯ ಎಂದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಚೈತ್ರಾ ಕಾಲೇಜಿನ ನೀತಿನಿಯಮಗಳನ್ನು ವಿವರಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಕಾವ್ಯಾ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾರತಿ ಇವರು ಅತಿಥಿಗಳನ್ನು ಪರಿಚಯಿಸಿದರು. ಮಾನವ ಸಂಪನ್ಮೂಲ ವಿಭಾಗದ ಉಪನ್ಯಾಸಕಿ ನೀಕ್ಷಿತಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳ ಪೋಷಕರು, ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.