ಬದುಕನ್ನೇ ಸುಡುತ್ತಿದೆ ‘ಪಚ್ಚನಾಡಿ ಡಂಪಿಂಗ್‌ ಯಾರ್ಡ್‌’

ದಿನವಿಡೀ ವಿಷಪೂರಿತ ಹೊಗೆ; ಸ್ಥಳೀಯರ ನರಕಯಾತನೆ !

Team Udayavani, May 15, 2019, 5:50 AM IST

24

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಾಕಿರುವ ತ್ಯಾಜ್ಯಕ್ಕೆ ಬೆಂಕಿಬಿದ್ದು ಹೊತ್ತಿ ಉರಿದ ಪರಿಣಾಮ ವಿಷಪೂರಿತ ಹೊಗೆ ಯಿಂದ ಮಂಗಳನಗರ, ಮಂಗಳ ಜ್ಯೋತಿ ವ್ಯಾಪ್ತಿಯ ಹಲವು ಜನರು ಅಸ್ವಸ್ಥರಾ ಗಿದ್ದಾರೆ.

ವಿಷಪೂರಿತ ಹೊಗೆ ಇನ್ನೂ ನಿಂತಿಲ್ಲವಾ ದ್ದರಿಂದ ಮಂಗಳನಗರ ವ್ಯಾಪ್ತಿಯ ಸುಮಾರು 150ಕ್ಕೂ ಅಧಿಕ ಮನೆಯ ಬಹುತೇಕ ಮಂದಿ ಕೆಮ್ಮು, ವಾಂತಿಯಿಂದ ಬಳಲುತ್ತಿದ್ದಾರೆ. ಈ ಪೈಕಿ ಇಬ್ಬರು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಬಹುತೇಕರು ಮನೆಗೆ ಬೀಗ ಹಾಕಿ, ಸಂಬಂಧಿಕರ ಮನೆಗೆ ತೆರಳಿದ್ದಾರೆ.

ರವಿವಾರ ಸಂಜೆ ಕಸದ ರಾಶಿಯ ಒಂದು ಭಾಗಕ್ಕೆ ಬೆಂಕಿ ಬಿದ್ದಿತ್ತು. ಸೋಮವಾರ ದಿನಪೂರ್ತಿ ವ್ಯಾಪಿಸಿತ್ತು. ಅಗ್ನಿಶಾಮಕದಳದಿಂದ ಬೆಂಕಿ ನಂದಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ. ಪರಿಣಾಮ ಸೋಮವಾರ ರಾತ್ರಿ ವಿಷಪೂರಿತ ಹೊಗೆ ಮತ್ತಷ್ಟು ವ್ಯಾಪಿಸಿ, ಸ್ಥಳೀಯರಿಗೆ ಉಸಿರಾಟಕ್ಕೂ ತೊಂದರೆ ಯಾಯಿತು. ಜತೆಗೆ ಕೆಲವರು ತಲೆಸುತ್ತು, ವಾಂತಿಯಿಂದ ಅಸ್ವಸ್ಥರಾದರು. ಹೀಗಾಗಿ ಕೆಲವರು ಸ್ಥಳೀಯ ಆಸ್ಪತ್ರೆಗೆ ರಾತ್ರಿಯೇ ದಾಖಲಾಗಿ ಚಿಕಿತ್ಸೆ ಪಡೆದು, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಉಸಿರಾಟಕ್ಕೆ ತೊಂದರೆ
ವಿಷಪೂರಿತ ಹೊಗೆ ವ್ಯಾಪಿಸಿದ ಪರಿಣಾಮ ಸ್ಥಳೀಯರು ಮೂಗು ಮುಚ್ಚಿ ಕಣ್ಣಿಗೂ ಬಟ್ಟೆ ಕಟ್ಟುವ ಪರಿಸ್ಥಿತಿಯಿದೆ.

ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಇಲ್ಲಿ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ ಎಂಬ ಮಾತು ಒಂದೆಡೆಯಾದರೆ, ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ತ್ಯಾಜ್ಯದ ರಾಶಿ ಇರುವ ಪ್ರದೇಶಕ್ಕೆ ಯಾರು ಬೇಕಾದರೂ ಬಂದು ಹೋಗುವಂತಹ ಪರಿಸ್ಥಿತಿ ಇದೆ.

ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳವಾರ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಡಂಪಿಂಗ್‌ ಯಾರ್ಡ್‌ನ ದುಸ್ಥಿತಿಯನ್ನು ವಿವರಿಸಿದರು. ಪಾಲಿಕೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. ತ್ಯಾಜ್ಯದ ರಾಶಿಗೆ ಬೆಂಕಿ ಬೀಳುವ ಪರಿಸ್ಥಿತಿ ನಿತ್ಯ ಆಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾಕೆ ಶಾಶ್ವತ ಪರಿಹಾರ ಹುಡುಕುತ್ತಿಲ್ಲ? ಕಾಂಪೌಂಡ್‌ ಗೋಡೆ ಯಾಕೆ ಮಾಡಿಲ್ಲ? ಕೇರಳದ ವಾಹನದವರೂ ಇಲ್ಲಿ ತ್ಯಾಜ್ಯ ಹಾಕುವುದು ಹೇಗೆ ಸಾಧ್ಯ? ಸಿಸಿ ಕೆಮರಾ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು.

ಈ ಮಧ್ಯೆ ಹೊಗೆಯಿಂದ ರಕ್ಷಿಸಿ ಕೊಳ್ಳಲು ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕುತ್ತಿದ್ದಂತೆ ಸ್ಥಳೀಯರು ಆಕ್ಷೇಪಿಸಿದರು. ‘ನಾವಿಲ್ಲಿ ಪ್ರತೀ ನಿತ್ಯ ಇದೇ ವಿಷಪೂರಿತ ಹೊಗೆಯಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ನೀವು ವರ್ಷಕ್ಕೊಮ್ಮೆ ಬಂದು ಮಾಸ್ಕ್ ಹಾಕುವುದು ಬೇಡ. ವಾಸ್ತವ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಗೊತ್ತಾಗಲಿ. ಮಾಸ್ಕ್ ತೆಗೆಯಿರಿ’ ಎಂದರು. ಬಳಿಕ ಮಂಗಳ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರ ಭೇಟಿ; ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ
ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳವಾರ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಡಂಪಿಂಗ್‌ ಯಾರ್ಡ್‌ನ ದುಸ್ಥಿತಿಯನ್ನು ವಿವರಿಸಿದರು. ಪಾಲಿಕೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. ತ್ಯಾಜ್ಯದ ರಾಶಿಗೆ ಬೆಂಕಿ ಬೀಳುವ ಪರಿಸ್ಥಿತಿ ನಿತ್ಯ ಆಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾಕೆ ಶಾಶ್ವತ ಪರಿಹಾರ ಹುಡುಕುತ್ತಿಲ್ಲ? ಕಾಂಪೌಂಡ್‌ ಗೋಡೆ ಯಾಕೆ ಮಾಡಿಲ್ಲ? ಕೇರಳದ ವಾಹನದವರೂ ಇಲ್ಲಿ ತ್ಯಾಜ್ಯ ಹಾಕುವುದು ಹೇಗೆ ಸಾಧ್ಯ? ಸಿಸಿ ಕೆಮರಾ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಹೊಗೆಯಿಂದ ರಕ್ಷಿಸಿ ಕೊಳ್ಳಲು ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕುತ್ತಿದ್ದಂತೆ ಸ್ಥಳೀಯರು ಆಕ್ಷೇಪಿಸಿದರು. ‘ನಾವಿಲ್ಲಿ ಪ್ರತೀ ನಿತ್ಯ ಇದೇ ವಿಷಪೂರಿತ ಹೊಗೆಯಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ನೀವು ವರ್ಷಕ್ಕೊಮ್ಮೆ ಬಂದು ಮಾಸ್ಕ್ ಹಾಕುವುದು ಬೇಡ. ವಾಸ್ತವ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಗೊತ್ತಾಗಲಿ. ಮಾಸ್ಕ್ ತೆಗೆಯಿರಿ’ ಎಂದರು. ಬಳಿಕ ಮಂಗಳ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಕಿಗೆ ಕಾರಣವೇನು ?
ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಇಲ್ಲಿ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ ಎಂಬ ಮಾತು ಒಂದೆಡೆಯಾದರೆ, ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ತ್ಯಾಜ್ಯದ ರಾಶಿ ಇರುವ ಪ್ರದೇಶಕ್ಕೆ ಯಾರು ಬೇಕಾದರೂ ಬಂದು ಹೋಗುವಂತಹ ಪರಿಸ್ಥಿತಿ ಇದೆ.

ತ್ಯಾಜ್ಯದ ಮೇಲೆ ಮಣ್ಣು
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಬೆಂಕಿಯ ಪರಿಣಾಮ ವಿಷಪೂರಿತ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೂಲಕ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಬೆಂಕಿ ವ್ಯಾಪಿಸದಂತೆ ತ್ಯಾಜ್ಯದ ಮೇಲೆ ಮಣ್ಣು ಸುರಿಯಲಾಗುತ್ತಿದೆ. ಸ್ಥಳೀಯರ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ.
– ಡಾ| ವೈ. ಭರತ್‌ ಶೆಟ್ಟಿ,ಶಾಸಕರು

ವಾಸ್ತವ್ಯಹೂಡಲಿ
ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಅಧಿಕಾರಿಗಳು ಒಂದು ದಿನ ರಾತ್ರಿ ಡಂಪಿಂಗ್‌ ಯಾರ್ಡ್‌ನ ಸಮೀಪದಮನೆಗಳಲ್ಲಿ ವಾಸ್ತವ್ಯ ಹೂಡಲಿ. ‌ ಮನೆ ಮಂದಿ ಎಲ್ಲ ಅಧಿಕಾರಿಗಳ ಮನೆಯ ಎಸಿ ರೂಮಿನಲ್ಲಿ ಮಲಗುತ್ತೇವೆ. ನಮ್ಮ ಒಂದು ದಿನದ ಸಂಕಷ್ಟ ಆಗ ಅಧಿಕಾರಿಗಳಿಗೆ ಗೊತ್ತಾಗಬಹುದು. ಈ ಮೂಲಕವಾದರೂ ಸಮಸ್ಯೆ ಪರಿಹಾರವಾಗಲಿ.
– ರವೀಂದ್ರ ನಾಯಕ್‌, ಸ್ಥಳೀಯರು

ಚಿತ್ರ: ಸತೀಶ್‌ ಇರಾ
•ದಿನೇಶ್‌ ಇರಾ

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.