ಸಮುದ್ರ ಬದಿಯ ಮರಳು ಅಗೆತಕ್ಕೆ ತಡೆ
Team Udayavani, Dec 13, 2017, 11:12 AM IST
ಉಳ್ಳಾಲ: ಇತ್ತೀಚೆಗೆ ಓಖೀ ಚಂಡಮಾರುತದ ಪ್ರಭಾವದಿಂದ ಸಮುದ್ರದ ಅಲೆಗಳಿಂದ ಹಾನಿಗೀಡಾದ ರೆಸಾರ್ಟ್ ಮಾಲಕರು ಸಮುದ್ರ ಬದಿಯ ಮರಳನ್ನು ಜೆಸಿಬಿ ಮೂಲಕ ಹಾನಿಗೀಡಾದ ತಡೆಗೋಡೆಗೆ ಹಾಕುವುದನ್ನು ಸ್ಥಳೀಯರು ಮತ್ತು ನಗರಸಭೆ ಕೌನ್ಸಿಲರ್ ತಡೆಯೊಡ್ಡಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ಕೈಕೋ ಸಮೀಪ ಇರುವ ಖಾಸಗಿ ರೆಸಾರ್ಟಿನ ಕಾಂಪೌಂಡ್ಗೆ ಸಮುದ್ರದ ಅಲೆಗಳು ಬಡಿದು ಹಾನಿ ಮಾಡಿದ್ದವು.
ಇದರಿಂದ ಸಾಕಷ್ಟು ಜಾಗ ಕೂಡ ಸಮುದ್ರಪಾಲಾಗಿತ್ತು. ರೆಸಾರ್ಟ್ನಲ್ಲಿ ನಡೆಯುತ್ತಿದ್ದ ಸಮಾರಂಭದ ವೇಳೆ ಅಲೆಗಳು ಬಡಿದು ಸೇರಿದ್ದ ಜನ ಈ ವೇಳೆ ಓಡಿದ್ದರು. ಈಗ ಸಮ್ಮರ್ ಸ್ಯಾಂಡ್ ರೆಸಾರ್ಟ್ನ ಮಾಲಕರು ಹೋದ ಜಾಗವನ್ನು ಸಮತಟ್ಟುಗೊಳಿಸುವ ಸಲುವಾಗಿ ಜೆಸಿಬಿ ಮೂಲಕ ಹೊಂಡ ನಿರ್ಮಿಸಿ ಮರಳು ರಾಶಿ ಹಾಕುತ್ತಿದ್ದರು. ಇದನ್ನು ಕಂಡ ಸ್ಥಳೀಯ ನಿವಾಸಿಗಳು ಇದು ಇನ್ನಷ್ಟು ತೊಂದರೆಯನ್ನು ಉಂಟು ಮಾಡುತ್ತದೆ, ಅಲ್ಲದೆ ಸಿಆರ್
ಝೆಡ್ ವ್ಯಾಪ್ತಿಗೆ ಬರುವ ಜಾಗದಿಂದ ಮರಳುಗಾರಿಕೆ ನಡೆಸುವುದೇ ಅಪರಾಧ ಎಂದು ಜೆಸಿಬಿ ಮೂಲಕ ನಡೆಯುತ್ತಿದ್ದ ಕಾಮಗಾರಿಗೆ ತಡೆಯೊಡ್ಡಿದ್ದರು.
ಈ ವೇಳೆ ರೆಸಾರ್ಟ್ ಮಾಲಕರು ಸಮುದ್ರಪಾಲಾದ ತಮ್ಮ ಜಾಗದಿಂದಲೇ ಮರಳನ್ನು ತೆಗೆಯಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದು, ಇದಕ್ಕೆ ಒಪ್ಪದ ಸ್ಥಳೀಯ ಕೌನ್ಸಿಲರ್ ಅಕ್ರಮವಾಗಿ ಮರಳು ತೆಗೆದಲ್ಲಿ ಪ್ರಕರಣ ದಾಖಲಿಸಿ ಜೆಸಿಬಿ ಯಂತ್ರವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದಾಗ, ತೆಗೆದಿರುವ ಹೊಂಡವನ್ನು ಮುಚ್ಚುವ ಭರವಸೆಯನ್ನು ರೆಸಾರ್ಟ್ ಮಾಲಕರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ