ಪುತ್ತೂರು ತಾ.ಪಂ. ಕಚೇರಿ ಲೆಟರ್ ಹೆಡ್, ಸಹಿ ದುರ್ಬಳಕೆ ಮಾಡಿದ ಸಿಬಂದಿ ವಿರುದ್ಧ ದೂರು !
Team Udayavani, Jan 10, 2023, 10:50 PM IST
ಪುತ್ತೂರು: ಖಾಸಗಿ ವಿಚಾರಕ್ಕಾಗಿ ತಾ. ಪಂ. ಕಚೇರಿಯ ಲೆಟರ್ ಹೆಡ್, ಸೀಲ್ ಮತ್ತು ಸಹಿಯನ್ನು ದುರುಪಯೋಗಪಡಿಸಿ ಕೊಂಡಿರುವ ಬಗ್ಗೆ ಪುತ್ತೂರು ತಾ. ಪಂ. ಕಾರ್ಯನಿರ್ವಹಣಾಧಿಕಾರಿಯು ಕಚೇರಿ ಸಿಬಂದಿ ವಿರುದ್ಧ ದೂರು ನೀಡಿದ ಘಟನೆ ನಡೆದಿದೆ.
ಪುತ್ತೂರು ತಾ.ಪಂ.ನಲ್ಲಿ ನಿಯೋಜನೆ ಮೇರೆಗೆ ಬೆರಳಚ್ಚುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಾನಂದ ಕೆ. ಅವರ ವಿರುದ್ಧ ತಾ.ಪಂ. ಕಾರ್ಯಾನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಎಚ್. ಅವರು ದೂರು ನೀಡಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೆಟರ್ ಹೆಡ್, ಸಹಿ ದುರ್ಬಳಕೆ !
ಶಿವಾನಂದ ಅವರು ಕಚೇರಿಯ ಪತ್ರ ವ್ಯವಹಾರ ರವಾನೆಯ ಜವಾಬ್ದಾರಿ ಕೂಡ ನಿರ್ವಹಿಸುತ್ತಿದ್ದಾರೆ. ಶಿವಾನಂದ ಅವರು ತನ್ನ ಹುದ್ದೆಯನ್ನು ಖಾಯಂಗೊಳಿಸಲು ಇಒ ಅವರ ಸಹಿ ಸಹಿತ ಕಚೇರಿ ಲೆಟರ್ ಹೆಡ್, ಸೀಲ್ ಅನ್ನು ಬಳಸಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಚೇರಿಯ ಪತ್ರವನ್ನು ಇಒ ಅವರ ಗಮನಕ್ಕೆ ತಾರದೆ, ಅದರ ಪ್ರತಿಯನ್ನು ಕಡತದಲ್ಲಿಯೂ ಇಡದೆ ಕಾನೂನು ಬಾಹಿರವಾಗಿ ಪತ್ರ ವ್ಯವಹಾರ ಮಾಡಿದ್ದು ಬೆಳಕಿಗೆ ಬಂದಿದೆ.
ಶಿವಾನಂದ ತನ್ನ ವೈಯುಕ್ತಿಕ ಉದ್ದೇಶಕ್ಕೋಸ್ಕರ ಸರಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದು ನಂಬಿಕೆ ದ್ರೋಹ ಎಸಗಿದ್ದಾರೆ. ಈ ಸಿಬಂದಿಯ ಕಾರ್ಯವೈಖರಿ ಬಗ್ಗೆ ಹಲವು ದೂರುಗಳು ಬಂದಿವೆ. ದುರುಪಯೋಗದ ಬಗ್ಗೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಾ.ಪಂ.ಇಒ ನವೀನ್ ಭಂಡಾರಿ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಉಪ್ಪಿನಂಗಡಿ: ಗ್ರಾಹಕನ ಸೋಗಿನಲ್ಲಿ ಬಂದು ಪರ್ಸ್ ಎಗರಿಸಿದ ಕಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ