ಅಮೂಲ್ಯ ಬಿಂಬಗಳ ರಕ್ಷಣೆ ಅಗತ್ಯ: ಡಾ| ಹೆಗ್ಗಡೆ
Team Udayavani, Oct 15, 2017, 9:34 AM IST
ಮೂಡಬಿದಿರೆ: ಜೈನಮಠದ ಆಡಳಿತಕ್ಕೊಳಪಟ್ಟ ಗುರುಗಳ ಬಸದಿಯ ಆವರಣದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ “ಸಿದ್ಧಾಂತ ರತ್ನಬಿಂಬ ಮಂದಿರ’ದ ಪುನರ್ ನಿರ್ಮಾಣ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ರಮಾರಾಣಿ ಶೋಧ ಸಂಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, “ದೇವರಿಗೆ ಭದ್ರತೆಯ ಆವಶ್ಯಕತೆ ಇರುವುದಿಲ್ಲ. ಆದರೆ ರತ್ನಬಿಂಬಗಳು ಅಮೂಲ್ಯವಾಗಿವೆ. ಅವುಗಳೊಂದಿಗೆ ನಮ್ಮ ಧಾರ್ಮಿಕ ಶ್ರದ್ಧೆ ಅವಿನಾಭಾವವಾಗಿದೆ. ಮುಂದಿನ ತಲೆಮಾರಿಗೆ ಧಾರ್ಮಿಕ ಶ್ರದ್ಧೆ ದಾಟಿಸಬೇಕಾಗಿರುವುದರಿಂದ ನಾವು ಈ ಬಿಂಬಗಳನ್ನು ರಕ್ಷಿಸಬೇಕು. ಎಲ್ಲರೂ ಈ ಮಹತ್ಕಾರ್ಯದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಬೇಕು’ ಎಂದರು.
ಮೂರು ತಿಂಗಳಲ್ಲಿ ಸಿದ್ಧ
ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಜೈನ ಧರ್ಮೀಯರ ವಿಶೇಷ ಪ್ರಾರ್ಥನೆ, ಸರ್ವ ಧರ್ಮೀಯರ ಸಹಕಾರದಿಂದ ಸಿದ್ಧಾಂತ ಬಿಂಬಗಳು ಮರಳಿ ಇಲ್ಲಿಗೆ ಬರುವಂತಾದದ್ದು ನಮ್ಮೆಲ್ಲರ ಪುಣ್ಯ. ಮೂರು ತಿಂಗಳಲ್ಲಿ ಅತ್ಯಾಧುನಿಕ ಸಿದ್ಧಾಂತ ಮಂದಿರವು ಸಿದ್ಧಗೊಳ್ಳಲಿದೆ ‘ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಕೆ. ಅಭಯಚಂದ್ರ ಮಾತನಾಡಿ, ಸಾವಿರ ಕಂಬ ಬಸದಿಯ ಆವರಣಕ್ಕೆ ಶಿಲಾಹಾಸು, ಅಭಿವೃದ್ಧಿ ಯೋಜನೆಗೆ ಒಂದು ಕೋಟಿ ವಿನಿಯೋಗಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಶೌಚಾಲಯ ಇತ್ಯಾದಿ ಮೂಲಸೌಕರ್ಯಗಳಿಗೆ 50 ಲಕ್ಷ ರೂ., ಕೊಂಡೆ ಬೀದಿಯ ಕಾಂಕ್ರಿಟೀಕರಣಕ್ಕೆ 15 ಲಕ್ಷ ಒದಗಿಸಲಾಗುವುದು’ ಎಂದರು. ಅಭಯಚಂದ್ರ ಹಾಗೂ ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್ ತಲಾ 1 ಲಕ್ಷ ದ ದಾನವನ್ನು ಪ್ರಕಟಿಸಿದರು.
ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ವಿ.ಕೆ. ಜೈನ್ ಪುತ್ತೂರು, ಚೌಟರ ಅರಮನೆ ಎಂ. ವೀರೇಂದ್ರ, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ , ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಉಪಸ್ಥಿತರಿದ್ದರು. ಶಿಲಾನ್ಯಾಸ ಸಂದರ್ಭ ಧನಕೀರ್ತಿ ಬಲಿಪ, ವಜ್ರನಾಭ ಚೌಟ ನಲ್ಲೂರು, ನೇಮಿರಾಜ್, ಶ್ರೀಪಾಲ್ ಎಸ್. ಮಂಜುಳಾ ಅಭಯಚಂದ್ರ, ವೃಂದಾ ರಾಜೇಂದ್ರ, ರೇಖಾ, ಕೆ.ಪಿ. ಜಗದೀಶ ಅಧಿಕಾರಿ, ವೇಣೂರು ನವೀನcಂದ್ರ ಬಲ್ಲಾಳ್, ಶಂಭವ ಕುಮಾರ, ಜಯರಾಜ ಕಂಬಳಿ ಇದ್ದರು. ಶೈಲೇಂದ್ರ ಕುಮಾರ್ ಆರೋಹ ಪ್ರಸ್ತಾವನೆಗೈದರು. ಪ್ರಭಾತ್ ಕುಮಾರ್ ಬಲಾ°ಡು ಕಾರ್ಯಕ್ರಮ ನಿರೂಪಿಸಿದರು.
ಸಿದ್ಧಾಂತ ರತ್ನಬಿಂಬ ಮಂದಿರಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆ ಶಿಲಾನ್ಯಾಸ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್