Road mishap ಗುರುಪುರ: ಟಿಪ್ಪರ್ – ಬೈಕ್ ಢಿಕ್ಕಿ; ಓರ್ವ ಸಾವು
Team Udayavani, Nov 21, 2023, 10:12 PM IST
ಬಜಪೆ: ಗುರುಪುರ ಪದವಿ ಪೂರ್ವ ಕಾಲೇಜಿನ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಂಗಳವಾರ ಮಧ್ಯಾಹ್ನ ಟಿಪ್ಪರ್ ಎರಡು ಬೈಕ್ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಅಡ್ಡೂರಿನ ಡಿ.ಎಸ್.ರಹೀಂ (55) ಅವರು ಮೃತಪಟ್ಟರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.
ಅಡ್ಡೂರಿಗೆ ಬೈಕ್ನಲ್ಲಿ ಬರುವಾಗ ಟಿಪ್ಪರ್ ಎರಡು ಬೈಕ್ಗಳಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ರಹೀಂ ಅವರ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು.
ಕಟ್ಟಡ ಸಾಮಾಗ್ರಿಗಳ ವ್ಯಾಪಾರ ಮಾಡುತ್ತಿದ್ದ ಅವರು ಆಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.ಕಾಂಜಿಲ ಕೋಡಿ ಬದ್ರುಲ್ ಹುದಾ ಜುಮ್ಮಾ ಮಸೀದಿಯ ಮಾಜಿ ಕೋಶಾಧಿಕಾರಿಯಾಗಿ, ಮುಸ್ಲಿಂ ವೆಲ್ಫೆರ್ ಎಸೋಸಿಯೇಸಿಯನ್ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.