ಉಜಿರೆ ಎಸ್ಡಿಎಂ: ಕ್ರೀಡಾ ಸಂಘ ಉದ್ಘಾಟನೆ
Team Udayavani, Jul 27, 2017, 10:30 AM IST
ಬೆಳ್ತಂಗಡಿ: ಯಶಸ್ಸು ಎನ್ನುವುದು ಸುಲಭವಲ್ಲ, ಅವಕಾಶಗಳ ಸದುಪಯೋಗದೊಂದಿಗೆ ಛಲದಿಂದ ಯಾವುದೇ ಕೆಲಸಗಳನ್ನು ಮಾಡಿದರೆ ಮಾತ್ರ ಗೆಲುವು ದಕ್ಕುತ್ತದೆ ಎಂದು ಉಜಿರೆ ಎಸ್ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶಕುಂತಲಾ ಹೇಳಿದರು. ಅವರು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನಡೆದ ಕ್ರೀಡಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಗುರಿಯೆಡೆಗೆ ಗಮನವಿರಲಿ. ಆ ದಾರಿಯಲ್ಲಿ ಸಾಗುವಾಗ ಏನೇ ಅಡೆತಡೆಗಳು ಬಂದರೂ, ಎದುರಿಸಿ ಮುಂದೆ ಹೋಗಬೇಕು. ಆಗ ವಿದ್ಯಾರ್ಥಿ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ಎಂದರು.
ಕ್ರೀಡಾ ಸಹಾಯಕ ನಿರ್ದೇಶಕ ಸುದೀನ್ ಅವರು ಕ್ರೀಡಾ ಸಂಘದ ಪದಾಧಿಕಾರಿಗಳ ಪಟ್ಟಿ ಮಂಡಿಸಿದರು. ಕ್ರೀಡಾ ಸಂಘದ ಪದಾಧಿಕಾರಿಗಳಾಗಿ ತೃಪ್ತಿ ಪಿ. ಜಿ., ಸ್ನೇಹಾ ಎಸ್., ನಿಶ್ಮಿತಾ ಶೆಟ್ಟಿ, ಸಂಜನಾ ಮುತ್ತಮ್ಮ, ಸಚಿನ್, ವರುಣ್, ಸಾಯೆಶ್, ದೀಪು ಕುಮಾರ್ ಆಯ್ಕೆಯಾದರು. ನೂತನ ಕ್ರೀಡಾ ತರಬೇತಿದಾರರಾಗಿ ಕೇರಳದ ಅಖೀಲಾ ಜೋಸೆಫ್ ಆಯ್ಕೆಯಾದರು. ಪ್ರಸಕ್ತ ಶೆ„ಕ್ಷಣಿಕ ವರ್ಷದ ಮೊದಲ ಕ್ರೀಡಾ ಭಿತ್ತಿ ಪತ್ರಿಕೆಯನ್ನು ಶಕುಂತಲಾ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ನಿರ್ದೇಶಕ ರಮೇಶ್ಎಚ್. ಉಪಸ್ಥಿತರಿದ್ದರು. ಸ್ನೇಹಾ ಎಸ್. ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ