ಸೆ. 25ರಂದು ಹೆಲ್ತ್ ಕೌಂಟಿ ರೆಸಾರ್ಟ್ಸ್  ಉದ್ಘಾಟನೆ


Team Udayavani, Sep 24, 2017, 3:17 PM IST

24Maniapl-10.jpg

ಮಂಗಳೂರು : ಶ್ರೀಕೃಷ್ಣ ಗ್ರೂಪ್‌ನ ಪ್ರವರ್ತನೆಯಲ್ಲಿ ಓಶಿಯನ್‌ ಪರ್ಲ್ ಸಂಸ್ಥೆ ಪ್ರಗತಿ ಪಾಲುದಾರರಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಹೆಲ್ತ್‌ ಕೌಂಟಿ ರೆಸಾರ್ಟ್ಸ್ ಪ್ರೈ. ಲಿ. ಸಂಸ್ಥೆಯ ಹಾಸ್ಪಿಟಾಲಿಟಿ ಸೇವೆ ಲಭ್ಯವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಸಂಜೀವಿನಿ ಪಾರ್ಕ್‌ ಎದುರು ಈ ರೆಸಾರ್ಟ್ಸ್ ಆ್ಯಂಡ್‌ ಸ್ಪಾ ಸಂಸ್ಥೆಯನ್ನು ಸೆ. 25ರ ಸಂಜೆ 5.30ಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಉದ್ಘಾಟಿಸಲಿದ್ದಾರೆ.

‘ಈ ರೆಸಾರ್ಟ್ಸ್ ಅವಳಿ ನಗರದ ಹೃದಯ ಭಾಗದಲ್ಲೇ ಪ್ರಥಮವಾಗಿ 5.5 ಎಕರೆಯಷ್ಟು ವಿಸ್ತಾರವಾದ ಜಮೀನಿನಲ್ಲಿ ನಿರ್ಮಾಣವಾಗಿದೆ. ಇಲ್ಲಿ ನಿಸರ್ಗ ಸೌಂದರ್ಯವನ್ನು ಸ್ಥಳೀಯ ಸಂಸ್ಕೃತಿಯ ಜತೆ ಬೆಸೆಯಲಾಗಿದೆ. ಅತಿಥಿಗಳಿಗೆ ಲಕ್ಸುರಿ ಮತ್ತು ಆರೋಗ್ಯಪೂರ್ಣ ಸೇವೆ ನೀಡಲಾಗುತ್ತದೆ’ ಎಂದು ಶ್ರೀಕೃಷ್ಣ ಮಿಲ್ಕ್ ಪ್ರೈ. ಲಿ. ಸಂಸ್ಥೆಯ ಅಧ್ಯಕ್ಷ ದಿನೇಶ್‌ 
ಆರ್‌. ಪೈ ಅವರು ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

‘ಬೆಂಗಳೂರು-ಗೋವಾ ನಡುವೆ ಈ ರೆಸಾರ್ಟ್ಸ್ ಇದೆ. ಈ ನಗರವು 10 ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಕ್ಷಿಪ್ರವಾಗಿ ಬೆಳೆಯುತ್ತಿದೆ. ಚಾರಿತ್ರಿಕ ಹಂಪೆ ಸಮೀಪದಲ್ಲಿದೆ. ಹಾಸ್ಪಿಟಾಲಿಟಿ ಉದ್ಯಮಕ್ಕೆ ಕೌಂಟಿ ರೆಸಾರ್ಟ್ಸ್ ಅಪೂರ್ವ ಕೊಡುಗೆ ನೀಡಲಿದೆ. ಹೊಟೇಲ್‌ ಉದ್ಯಮದಲ್ಲಿ ಬ್ರ್ಯಾಂಡ್ ಆಗಿ ಪ್ರಸಿದ್ಧವಾಗಿರುವ ದಿ ಓಶಿಯನ್‌ ಪರ್ಲ್ ಪ್ರಗತಿ ಪಾಲುದಾರರಾಗಿದ್ದಾರೆ’ ಎಂದವರು ವಿವರಿಸಿದರು.

ಅತ್ಯಾಧುನಿಕ ಸೌಲಭ್ಯ
‘ಈ ರೆಸಾರ್ಟ್‌ನಲ್ಲಿ 32 ಕಾಟೇಜ್‌ಗಳು, ಸ್ಯೂಟ್‌ಗಳು, ಪ್ರೀಮಿಯಂ ರೂಮ್ಸ್‌, ಫ್ಯಾಮಿಲಿ ರೂಮ್ಸ್‌, ಸ್ಟಾಂಡರ್ಡ್‌ ರೂಮ್ಸ್‌ ಇದೆ. ಶುಭ ಸಮಾರಂಭ- ಸಭೆಗಳಿಗಾಗಿ ಹುಬ್ಬಳ್ಳಿಯು ಈ ಮೂಲಕ ಆಕರ್ಷಕ ಲಾನ್‌ ಸೌಲಭ್ಯ ಹೊಂದಲಿದೆ’ ಎಂದು ಓಶಿಯನ್‌ ಪರ್ಲ್ನ ಉಪಾಧ್ಯಕ್ಷ ಬಿ.ಎನ್‌. ಗಿರೀಶ್‌ ಹೇಳಿದರು.

ಶ್ರಮಣ್‌ ರೆಸ್ಟೋರೆಂಟ್‌ ಪ್ರಾಂತ ದಲ್ಲಿ ಪ್ರಥಮವಾಗಿ ಸಸ್ಯಾಹಾರಿ ಮಾರ್ವಾಡಿ ರೆಸ್ಟೋರೆಂಟ್‌, ಕೋರಲ್‌ ಮತ್ತು ಜಾಝ್ ಲೌಂಜ್‌ ಬಾರ್‌ ಗಳೆಂಬ ಮೂರು ರೆಸ್ಟೋರೆಂಟ್‌ಗಳಿರುತ್ತವೆ. ಓಪನ್‌ ಏರ್‌ ಆ್ಯಂಫಿ ಥಿಯೇಟರ್‌, ಈಜುಕೊಳ ನಿರ್ಮಾಣ ವಾಗಲಿದೆ. ಇದು ಹೆಲ್ತ್‌ಸ್ಪಾ, ಜಿಮ್‌ ಸಹಿತವಾಗಿರುತ್ತದೆ. ಇಲ್ಲಿನ ಸರ್ವ ಸೌಲಭ್ಯ, ಸ್ಥಳಾವಕಾಶವನ್ನು ಸರ್ವ ಸಮಾರಂಭಗಳಿಗೆ ಬಳಸಬಹುದಾಗಿದೆ. ಹಾಂಗ್ಯೋ ಐಸ್‌ಕ್ರೀಮ್ಸ್‌ನ ಉಪಾಧ್ಯಕ್ಷ ಬ್ರಿಯಾನ್‌ ಡಿ’ಸೋಜಾ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಡಾ| ವಿಜಯ್‌ ಸಂಕೇಶ್ವರ, ಅರವಿಂದ ಬೆಲ್ಲದ್‌, ಪ್ರದೀಪ್‌ ಶೆಟ್ಟರ್‌, ರಾಮ್‌ದಾಸ್‌ ಕಾಮತ್‌, ಜಯರಾಮ್‌ ಬನಾನ್‌, ಆರ್‌.ಆರ್‌. ಕಾಮತ್‌, ಫಯಾಜ್‌ ಅಹ್ಮದ್‌ ಭಲ್ಲಿ, ಹರ್ಷಿಕಾ ಪೂಣಚ್ಚ ಮುಖ್ಯ ಅತಿಥಿಗಳಾಗಿರುತ್ತಾರೆ.

ಶ್ರೀಕೃಷ್ಣ ಗ್ರೂಪ್‌ ಕರ್ನಾಟಕದ ಡೈರಿ ಕ್ಷೇತ್ರದಲ್ಲಿ ಮುಂಚೂಣಿಯ ಸಂಸ್ಥೆಯಾಗಿದೆ. ಅದರ ಹಾಂಗ್ಯೋ ಐಸ್‌ಕ್ರೀಮ್ಸ್‌ ಏಳು ರಾಜ್ಯಗಳಲ್ಲಿ ಜನಪ್ರಿಯ ಅಸ್ತಿತ್ವ ಹೊಂದಿದೆ. ಓಶಿಯನ್‌ ಪರ್ಲ್ ಗ್ರೂಪ್‌ ದಿಲ್ಲಿ ಸಹಿತ ಉತ್ತರ ಭಾರತದಲ್ಲಿ ಅಪಾರ ಜನಪ್ರಿಯವಾಗಿದ್ದು, ಕರ್ನಾಟಕ ಕರಾವಳಿಯ ಮಂಗಳೂರು, ಉಡುಪಿಗಳಲ್ಲೂ ಯಶಸ್ವಿಯಾಗಿ ಕಾರ್ಯನಿರತವಾಗಿದೆ.

ಟಾಪ್ ನ್ಯೂಸ್

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.