ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನ: ಸೀತಾ ಕಲ್ಯಾಣ, ಲಘು ಪೂರ್ಣಾಹುತಿ
Team Udayavani, Nov 3, 2022, 12:31 AM IST
ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ದ್ವಾದಶ ಕೋಟಿ ಶ್ರೀ ರಾಮನಾಮ ತಾರಕ ಮಂತ್ರ ಜಪ ಯಜ್ಞ ಮಂಗಳಾಚರಣೆ ಮಹೋತ್ಸವದ ಯಜ್ಞ ಮಂಟಪದಲ್ಲಿ ಸೋಮವಾರ ರಾತ್ರಿ ಸೀತಾ ಕಲ್ಯಾಣ, ದೇವರಿಗೆ ಉಯ್ಯಾಲೆಯಲ್ಲಿ ಪೂಜೆ ನೆರವೇರಿತು.
7ನೇ ದಿನ ವೈದಿಕ ತಂಡದಿಂದ ನಡೆದ ಶ್ರೀರಾಮ ಭದ್ರಕಾ ಮಂಡಲ ಪೂಜೆ ಹಾಗೂ ಪ್ರಧಾನ ಹವನ, ಸುಂದರಕಾಂಡ ವಿಹಿತ ಹವನದ ಲಘುಪೂರ್ಣಾಹುತಿ ನಡೆಯಿತು. ಮುಂಜಾನೆ ಕ್ಷೇತ್ರದಲ್ಲಿ ದೇವದರ್ಶನ ಸೇವೆ ಒಳಾವರಣದಲ್ಲಿ ನಡೆಯಿತು. ರಾತ್ರಿ ರಾವಣ ದಹನ, ಬುಧವಾರ ಶ್ರೀರಾಮ ಪಟ್ಟಾಭಿಷೇಕ ನೆರವೇರಿತು.
ಮುಂಜಾನೆಯಿಂದ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಫಲಾಹಾರ ಹಾಗೂ ಬೋಜನದ ವ್ಯವಸ್ಥೆ ಶಿಸ್ತುಬದ್ಧವಾಗಿ ನಡೆಯುತ್ತಿದೆ.
ನಿತ್ಯವೂ ನೂರಾರು ಭಜಕರು ಭಜನೆಯೊಂದಿಗೆ ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬರುತ್ತಿದ್ದಾರೆ.ನ. 3ರಂದು ಮಹಾ ಮಂಗಳ್ಳೋ ತ್ಸವದ ಪೂರ್ಣಾಹುತಿಯನ್ನು ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ನೆರವೇರಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು