ಗೇರುಕಟ್ಟೆ ಜಾರಿಗೆಬೈಲು: ಮನೆಯಿಂದ ಕಳವು
Team Udayavani, Jun 11, 2019, 9:57 AM IST
ಬೆಳ್ತಂಗಡಿ: ಗೇರುಕಟ್ಟೆ ಜಾರಿಗೆಬೈಲು ನಿವಾಸಿ ಉಸ್ಮಾನ್ ಅವರ ಮನೆಯ ಬೀಗ ಒಡೆದು ನಗ – ನಗದು ಕಳವು ಮಾಡಲಾಗಿದೆ.
ಉಸ್ಮಾನ್ ಅವರು 10 ದಿನಗಳ ಹಿಂದೆ ಮೂರು ತಿಂಗಳ ವೀಸಾದಲ್ಲಿ ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಮೇಲಿನ ಮನೆಯನ್ನು ಹಮೀದ್ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ಅವರ ಪತ್ನಿ ಹಬ್ಬದ ಹಿಂದಿನ ದಿನ ತನ್ನ ಅಕ್ಕನ ಮನೆ ಕಲ್ಲೇರಿಗೆ ತೆರಳಿದ್ದರು. ಸೋಮವಾರ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.
ಹಿಂದಿನ ಬಾಗಿಲನ್ನು ಒಡೆದು ಕಳ್ಳರು ಮೇಲಿನ ಮನೆಗೆ ನುಗ್ಗಿದ್ದಾರೆ. ಎರಡೂ ಮನೆಗಳ 8 ಕಪಾಟುಗಳನ್ನು ಒಡೆದು ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಹಮೀದ್ ಮನೆಯಿಂದ 22 ಸಾ. ಮೌಲ್ಯದ ಚಿನ್ನಾಭರಣ ಹಾಗೂ 2 ಸಾವಿರ ರೂ. ಕಳವು ಮಾಡಲಾಗಿದೆ. ಉಸ್ಮಾನ್ ಅವರು ಮಂಗಳವಾರ ವಿದೇಶದಿಂದ ವಾಪಸಾಗಲಿದ್ದಾರೆ. ಬಳಿಕ ಕಳ್ಳತನವಾದ ಸೊತ್ತಿನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ