ಹೂಳು ತುಂಬಿದ ಎಎಂಆರ್, ತುಂಬೆ ಡ್ಯಾಂ
ತುಂಬೆ ನೀರಿನ ಮಟ್ಟ 4.54 ಮೀ. ಕುಸಿತ
Team Udayavani, May 5, 2019, 4:23 AM IST
ಬಂಟ್ವಾಳ: ನೇತ್ರಾವತಿ ನದಿ ಶಂಭೂರು ಎಎಂಆರ್ ಡ್ಯಾಂನಲ್ಲಿ ಹೂಳು ತುಂಬಿಕೊಂಡಿದೆ. ಡ್ಯಾಂ ನಿರ್ಮಾಣದ ಸಂದರ್ಭ 8.9 ಮೀ. ನೀರು ನಿಲುಗಡೆ ಲೆಕ್ಕಾಚಾರವಿತ್ತು. ಪ್ರಸ್ತುತ ಅದರಲ್ಲಿ ಹೂಳು ತುಂಬಿಕೊಂಡು ಉಪಯೋಗಕ್ಕೆ ಸಿಗುವ ನೀರು ಕೇವಲ 6 ಮೀ. ಎಂಬುದಾಗಿ ಇಲ್ಲಿನ ಹೆಸರು ಹೇಳಲಿಚ್ಛಿಸದ ತಜ್ಞರೇ ಅಭಿಪ್ರಾಯಪಡುತ್ತಾರೆ. ನೀರು ಬರಿದಾಗಿರುವ ಕಾರಣಕ್ಕೆ ಅಪಾರ ಪ್ರಮಾಣ ದಲ್ಲಿ ಹೂಳು ತುಂಬಿರುವುದು ಗಮನಕ್ಕೆ ಬರುತ್ತದೆ.
ಅಂದರೆ 2.9ಮೀ. ಹೂಳು ಈಗಾಗಲೇ ತುಂಬಿ ಕೊಂಡಿದೆ. ನದಿಯ ಎರಡು ದಂಡೆಗಳು ಕೆಸರಿನಿಂದ ಆವೃತ್ತವಾಗಿವೆ. ಇದನ್ನು ತೆರವು ಮಾಡದೇ ಇದ್ದರೆ 2020-21ರ ಸಾಲಿಗೆ ನೀರಿನ ದಾಸ್ತಾನು ಕೇವಲ 5.05 ಮೀಟರ್ಗೆ ಬರಲಿದೆ ಎಂಬ ಆತಂಕವಿದೆ. ಈ ಹಿಂದೆ ಡ್ಯಾಂಗಿಂತ ಸುಮಾರು 1 ಕಿ.ಮೀ. ಮೇಲ್ಗಡೆ ನಿರ್ಮಾಣ ಆಗಿರುವ 2 ಮೀ. ಎತ್ತರದ ಸರಪಾಡಿ ಕಿರು ಡ್ಯಾಂನಲ್ಲಿ ಕುತ್ತಿಗೆ ಮಟ್ಟಕ್ಕೆ ಹೂಳು ತುಂಬಿದೆ. ಈಗ ನೀರು ನಿಲುಗಡೆ ಶೂನ್ಯವಾಗಿದೆ.
ತುಂಬೆಗೂ ಇದೇ ಸಮಸ್ಯೆ
ತುಂಬೆ ಡ್ಯಾಂ ಕೂಡಾ ಇದೇ ಸಮಸ್ಯೆ ಎದುರಿ ಸುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ. ತುಂಬೆ ಹೊಸ ಡ್ಯಾಂನಿಂದ ಸುಮಾರು 100 ಮೀ. ಮೇಲ್ಗಡೆ 4 ಮೀ. ಎತ್ತರದ ಕಿರು ಡ್ಯಾಂ ಇದೆ. ಪ್ರಸ್ತುತ ಅದರ ಸುಮಾರು ಅರ್ಧದಷ್ಟು, ಅಂದರೆ ಎರಡು ಮೀಟರ್ ಎತ್ತರಕ್ಕೆ ಹೂಳು ತುಂಬಿದ್ದಾಗಿ ತರ್ಕಿಸುತ್ತಾರೆ. ನೀರು ಬರಿದಾದರೆ ಅದು ಕಾಣು ಸಿಗಲಿದೆ.
ನೀರಿನ ಮಟ್ಟ 4.54 ಮೀ.
ನೇತ್ರಾವತಿ ನದಿ ತುಂಬೆ ಡ್ಯಾಂನಲ್ಲಿ ಮೇ 4ರಂದು ಬೆಳಗ್ಗೆ ನೀರಿನ ಮಟ್ಟ 4.54 ಮೀ.ಗೆ ಕುಸಿದಿದೆ. ಮನಪಾ ಸೂಚನೆಯಂತೆ ಮೇ 1ರಂದು ಬೆಳಗ್ಗೆ 6ಕ್ಕೆ ಇಲ್ಲಿ ನೀರೆತ್ತುವುದನ್ನು ನಿಲ್ಲಿಸಲಾಗಿದೆ. ಬುಧವಾರ ಬೆಳಗ್ಗೆ ಸರಬರಾಜು ನಿಲುಗಡೆ ಆಗಿದ್ದರೂ ನೀರಿನ ಮಟ್ಟ ಏರಿಕೆ ಆಗದೆ ಯಥಾಸ್ಥಿತಿಯಲ್ಲಿತ್ತು. ನದಿ ಮೇಲ್ಗಡೆಯಿಂದ ನೀರಿನ ಹರಿವು ಸಂಪೂರ್ಣ ನಿಲುಗಡೆ ಆಗಿದೆ.
ತುಂಬಿದೆ ಹೂಳು
ಸ್ಥಳೀಯರ ಪ್ರಕಾರ ತುಂಬೆ ಡ್ಯಾಂನಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ನೀರಿನ ಸಂಗ್ರಹದ ಸುಮಾರು 2.66 ಮೀಟರ್ ಸಿಗಬಹುದು ಎಂದು ತಜ್ಞ ಎಂಜಿನಿಯರ್ ತಿಳಿಸಿದ್ದಾರೆ. ತುಂಬೆ ಡ್ಯಾಂ ಹೂಳನ್ನು ತೆಗೆಸದಿದ್ದರೆ ಮುಂದಿನ 2 ವರ್ಷಗಳಲ್ಲಿ 6 ಮೀ. ಲೆಕ್ಕದಲ್ಲಿ ಕಾಣುವ ನೀರಿನ ಮಟ್ಟದಲ್ಲಿ 4 ಮೀಟರ್ ಮಟ್ಟಕ್ಕೆ ಹೂಳೇ ತುಂಬುವ ಮೂಲಕ ನೀರಿನ ಸಂಗ್ರಹ ಕುಸಿಯುವುದು ಎಂದಿದ್ದಾರೆ.
ಹೂಳೆತ್ತುವ ಪ್ರಕ್ರಿಯೆ
-ಎಂ. ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ತುಂಬೆ ಡ್ಯಾಂ ಹೋರಾಟ ಸಮಿತಿ
•ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು