Surathkal: ಹೆದ್ದಾರಿ ಗುಂಡಿಗೆ ಸ್ಕೂಟರ್ ಸವಾರ ಬಲಿ!
Team Udayavani, Jul 18, 2023, 7:49 PM IST
ಸುರತ್ಕಲ್: ಇಲ್ಲಿಗೆ ಬೈಕಂಪಾಡಿ ಎಚ್ ಪಿ ಪೆಟ್ರೋಲ್ ಪಂಪ್ ಸಮೀಪದ ಹೆದ್ದಾರಿ ಗುಂಡಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಮೃತರನ್ನು ಬಜ್ಪೆ ಕೆಂಜಾರ್ ನಿವಾಸಿ ಟೈಟಸ್ ಫೆರಾವೋ(69) ಎಂದು ಗುರುತಿಸಲಾಗಿದೆ.
ಸುರತ್ಕಲ್ ರಸ್ತೆಯ ಗುಂಡಿ ಮುಚ್ಚುವಂತೆ ಸಾರಿ ಸಾರಿ ಹೇಳಿದ್ರೂ ಕೇಳದ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿಯಾದಂತಾಗಿದೆ.
ಎಚ್ಪಿ ಪೆಟ್ರೋಲ್ ಪಂಪ್ ಬಳಿ ಬಾರೀ ಗಾತ್ರದ ಗುಂಡಿಯೊಂದಿದ್ದು, ಗ್ರಹಚಾರಕ್ಕೆ ಅದೇ ಗುಂಡಿಗೆ ಅವರ ಬೈಕ್ ಬಿದ್ದಿದೆ. ಇದರಿಂದ ಅವರು ಬೈಕ್ನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು ಅದೇ ಸಮಯಕ್ಕೆ ಲಾರಿಯ ಚಕ್ರ ಮೇಲೆಯೇ ಚಲಿಸಿ ಪ್ರಾಣ ಕಳೆದುಕೊಂಡಿದ್ದಾರೆ.