ಫಸಲಿನ ಹೊತ್ತಲ್ಲೇ ಗೇರು ಕೃಷಿಗೆ ಚಹಾ ಸೊಳ್ಳೆ  ಕಾಟ!


Team Udayavani, Jan 24, 2018, 1:06 PM IST

14-17.jpg

ಸುಳ್ಯ: ಅಡಿಕೆ ಧಾರಣೆ ಕೈ ಕೊಡುವ ಕಾಲದಲ್ಲಿ ಕೃಷಿಕರ ಪಾಲಿಗೆ ಆಸರೆಯಾಗಿ ನಿಲ್ಲುವ ಗೇರು ಕೃಷಿಗೆ ಈಗ ಫಸಲು ಬರುವ ಹೊತ್ತಿನಲ್ಲೇ ಚಹಾ ಸೊಳ್ಳೆಯ ಕಾಟ ಉಂಟಾಗಿದೆ! ಗೇರು ಮರಗಳು ನವೆಂಬರ್‌ನಿಂದ ಎಪ್ರಿಲ್‌ ತನಕ ಹೂ ಬಿಟ್ಟು ಫಸಲು ಕೊಡುವುದು ಹೆಚ್ಚು. ಡಿಸೆಂಬರ್‌, ಜನವರಿ ತಿಂಗಳಲ್ಲಿ ಹೂ ಬಿಟ್ಟು ಫಸಲಿಗೆ ಅಣಿಯಾಗಬೇಕಿದ್ದ ಮರಗಳಲ್ಲಿ ಚಿಗುರು, ಹೂಗಳು ಕರಟಿ ಹೋಗಿವೆ. ಗ್ರಾಮಾಂತರ ಪ್ರದೇಶದ ಗೇರು ತೋಟಗಳಲ್ಲಿ ಚಹಾ ಸೊಳ್ಳೆಗಳ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಂಡುಬಂದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರಲ್ಲಿ ನಿರಾಶೆ ಮೂಡಿಸಿದೆ.

ಹೂ ಬಿಟ್ಟಿಲ್ಲ
ಗ್ರಾಮಾಂತರ ಪ್ರದೇಶಗಳಲ್ಲಿ ಗೇರು ಕೃಷಿಯನ್ನು ವೈಜ್ಞಾನಿಕವಾಗಿ ಅಥವಾ ಹೊಸ ತಳಿಗಳನ್ನು ನೆಟ್ಟು ನಡೆಸುವ ಪ್ರಕ್ರಿಯೆ ಪ್ರಾರಂಭವಾದುದು ಕೆಲವೇ ವರ್ಷಗಳ ಹಿಂದೆ. ಬಹುತೇಕ ಕಡೆ ಹಳೆಯ ಮರಗಳೇ ಇವೆ. ಆದರೆ ಚಹಾ ಸೊಳ್ಳೆ ಕಾಟ ಹಳೆಯ ಮರಗಳನ್ನೂ ಹೊಸ ಗಿಡಗಳನ್ನೂ ಸಮಾನವಾಗಿ ಬಾಧಿಸುತ್ತಿದೆ. ಈ ಅವಧಿಯಲ್ಲಿ ಮರವಿಡೀ ಹೂ ಬಿಟ್ಟಿರುತ್ತಿದ್ದ ಗೇರು ತೋಟಗಳಲ್ಲಿ ಈಗ ಅಲ್ಲಲ್ಲಿ ಅಪರೂಪಕ್ಕೆ ಎಂಬಂತೆ ಹೂಗಳಿವೆ.

ಕೆಲವು ಮರಗಳು ಚಿಗುರಿ ಹಸಿರು ಬಣ್ಣಕ್ಕೆ ತಿರುಗಿವೆ. ಗೇರು ತೋಟದ ಶೇ.75ರಷ್ಟು ಭಾಗ ಹೂ ಬಾರದೆ ಮಳೆಗಾಲದಲ್ಲಿ ಕಾಣಸಿಗುವಂತೆ ಹಸಿರಾಗಿದೆ. ಹೂ ಬಿಟ್ಟ ಕೆಲವೇ ಮರಗಳಿಗೆ ಚಹಾ ಸೊಳ್ಳೆ, ಇನ್ನಿತರ ಕ್ರಿಮಿ ಕೀಟಗಳ ಬಾಧೆ. ರೋಗಬಾಧೆ ಗೇರು ನಿಗಮದ, ಎನ್‌ಆರ್‌ಸಿಸಿ ಗೇರು ತೋಟದಲ್ಲಿಯೂ ಕಂಡುಬಂದಿದೆ.

ಫಸಲು ಕಡಿಮೆ
ಜಿಲ್ಲೆಯಲ್ಲಿ ಅಂದಾಜು 40 ಸಾವಿರ ಹೆಕ್ಟೇರ್‌ ಗೇರು ತೋಟವಿದೆ. ಈಗ ಗೇರುಬೀಜಕ್ಕೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 160 ರೂ. ಧಾರಣೆ ಇದೆ. ಫಸಲು ಇದೇ ತೆರನಾಗಿ ಕುಸಿತ ಕಂಡರೆ, ಗೇರು ಧಾರಣೆ ಗಗನಕ್ಕೇರುವುದು ನಿಶ್ಚಿತ. ಆದರೆ ಚಳಿಗಾಲ ಕಳೆದು ಸೆಕೆೆ ಆವರಿಸಿದರೆ ಸಮಸ್ಯೆ ಹತೋಟಿಗೆ ಬಂದು ಫಸಲು ಸಿಗಬಹುದು ಎಂಬ ನಿರೀಕ್ಷೆ ಕೆಲವು ಬೆಳೆಗಾರರದ್ದು. ವಾತಾವರಣದಲ್ಲಿನ ಕ್ಷಿಪ್ರ ಬದಲಾವಣೆ, ತೀವ್ರ ಚಳಿ, ಮೋಡ ಈ ಕೀಟ ಬಾಧೆಗೆ ಮುಖ್ಯ ಕಾರಣ ಅನ್ನುತ್ತಾರೆ ಗೇರು ಕೃಷಿಕರು. ಹೂ ಬಿಡುವ ಮೊದಲೇ ಸರಕಾರಿ ಗೇರು ತೋಟಗಳ ಏಲಂ ನಡೆಯುತ್ತದೆ. ಉತ್ತಮ ಫಸಲು ಸಿಗಬಹುದೆಂದು ಗುತ್ತಿಗೆ ಪಡಕೊಂಡವರಿಗೆ ನಷ್ಟದ ಭೀತಿ ಎದುರಾಗಿದೆ.

ಏನಿದು ಚಹಾ ಸೊಳ್ಳೆ?
ಚಹಾ ಸೊಳ್ಳೆ ಕೊಕೊ, ಗೇರು, ಹತ್ತಿ, ಚಹಾ- ಹೀಗೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟು ಮಾಡುವ ಕೀಟ. ಇದು ಗೇರು ಚಿಗುರು ಅಥವಾ ಹೂವಿನ ಸಸ್ಯರಸವನ್ನು ಹೀರುತ್ತದೆ. ಇದರಿಂದ ಚಿಗುರು ಮತ್ತು ಹೂಗೊಂಚಲುಗಳು ಒಣಗುತ್ತವೆ. ಕೀಟವು ರಸ ಹೀರಿದ ಅಂಗಾಂಶ ನಾಶವಾಗಿ ಕಂದು ಬಣ್ಣದ ಚುಕ್ಕಿಗಳು ಉಂಟಾಗುತ್ತವೆ. ಕಾಯಿ ಕಟ್ಟುವ ಹಂತದಲ್ಲಿ ಈ ಕೀಟದ ಹಾವಳಿ ಕಂಡುಬಂದರೆ, ಗೇರು ಹಣ್ಣಾಗುವ ಮೊದಲೇ ಒದುರುತ್ತದೆ.

ಗೇರು ಸಂಶೋಧನ ಕೇಂದ್ರದ ವಿಜ್ಞಾನಿಗಳ ಪ್ರಕಾರ ಇದೊಂದು ಮಾರಕ ಕಾಯಿಲೆ ಅಲ್ಲ, ಔಷಧ ಸಿಂಪಡಿಸಿದರೆ ಕೀಟ ಬಾಧೆ ನಿವಾರಣೆಯಾಗುತ್ತದೆ. ಆದರೆ ಕಳೆದ ವರ್ಷದ ಇಳುವರಿ ಪರಿಗಣಿಸಿ ಬೆಳೆಗಾರರು ಹೇಳುವ ಪ್ರಕಾರ, ಈ ಬಾರಿ ಔಷಧ ಸಿಂಪಡಿಸಿದರೂ ಕೀಟ ಬಾಧೆ ಪರಿಹಾರ ಕಂಡಿಲ್ಲ. ಗೇರು ತೋಟ ಲೀಸ್‌ಗೆ ಪಡೆದುಕೊಂಡವರ ಅಭಿಪ್ರಾಯದಂತೆ, ಎಕರೆಗಟ್ಟಲೆ ಗೇರು ತೋಟಕ್ಕೆ ಔಷಧ ಸಿಂಪಡಿಸುವುದು ಸಾಧ್ಯವಿಲ್ಲದ ಮಾತು. ಏಲಂ ಮಾಡುವ ಮೊದಲೇ ಮರಗಳು, ಫ‌ಸಲಿನ ಗುಣಮಟ್ಟ ಖಾತರಿ ಪಡಿಸಬೇಕಾದದ್ದು ಗೇರು ನಿಗಮದ ಜವಾಬ್ದಾರಿ, ಈಗ ತಮಗೆ ನಷ್ಟ ತಪ್ಪಿದ್ದಲ್ಲ ಅನ್ನುವ ಅಳಲು ಲೀಸ್‌ಗೆ ಪಡೆದುಕೊಂಡವ ರದ್ದು.

ರಕ್ಷಣೆ ಹೇಗೆ?
ಕೀಟ ಬಾಧೆ ಗಮನಿಸಿ ಔಷಧ ಸಿಂಪಡಿಸಬೇಕು ಅನ್ನುವುದು ಸರಳ ಸೂತ್ರ. ಹೂಗೊಂಚಲು ಬರುವ ವೇಳೆ, ಕಾಯಿ ಕಟ್ಟುವ ಅವಧಿಯಲ್ಲಿ ಔಷಧ ಸಿಂಪಡಿಸಿದರೆ ಚಹಾ ಸೊಳ್ಳೆಯ ಕಾಟವನ್ನು ದೂರ ಇರಿಸಬಹುದು. ಆರಂಭದಲ್ಲಿ ಒಮ್ಮೆ ಸಿಂಪಡಿಸಿ, ಅನಂತರ 30 ದಿನ ಬಿಟ್ಟು ಬಾಧೆಯ ಲಕ್ಷಣ ಗಮನಿಸಿ ಮತ್ತೂಮ್ಮೆ ಸಿಂಪಡಿಸಬೇಕು. ಕೀಟ ಬಾಧೆ ನಿವಾರಣೆಗೆ ಸೂಕ್ತ ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ರೋಗ ಅಲ್ಲ
ಮೋಡ ಕಾಣಿಸಿಕೊಂಡ ಸಮಯದಲ್ಲಿ ಹೂ ಕರಟುತ್ತದೆ ಅನ್ನುತ್ತಾರೆ. ಆದರೆ ಅದು ಮೋಡದಿಂದ ಉಂಟಾಗುವ ಸಮಸ್ಯೆ ಅಲ್ಲ. ಕೀಟ ಬಾಧೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಮೋಡ ಬಂದಾಗ ಕೀಟಗಳ ಹಾವಳಿ ಜಾಸ್ತಿ ಇರುತ್ತದೆ. ಅಂದರೆ ಇದು ರೋಗ ಅಲ್ಲ, ಕೀಟಬಾಧೆ. ಹೂ ಕರಟಿ, ಫಸಲಿಗೆ ತೊಂದರೆ ಆಗುವುದು ಇದೆ. ಚಹಾ ಸೊಳ್ಳೆ ಬಾಧೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಸೂಕ್ತ ಔಷಧಗಳಿವೆ.
ಗಂಗಾಧರ ನಾಯಕ್‌ ಪ್ರಭಾರ ನಿರ್ದೇಶಕ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು

ಹತೋಟಿಗೆ ಬರಬಹುದು
ಚಹಾ ಸೊಳ್ಳೆ ಕಾಟ ಜಾಸ್ತಿಯಾಗಿದೆ. ವಾತಾವರಣದಲ್ಲಿನ ಏರಿಳಿತವೂ ರೋಗಬಾಧೆ ಹೆಚ್ಚಳಕ್ಕೆ ಕಾರಣವಾಗಿದೆ. ಗೇರು ಮರ ಬಲಿತಂತೆ ಸೊಳ್ಳೆ ಕಾಟ ಕಡಿಮೆ ಆಗುತ್ತದೆ. ಮೊನೋಕ್ರೋಟೋಪಾಸ್‌ ಔಷಧ ಸಿಂಪಡಣೆಯಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಕೆಲವರು ಕಟಾರ ಔಷಧ ಬಳಕೆಗೆ ಮುಂದಾಗಿದ್ದಾರೆ. ಸೆಕೆಗಾಲ ಬಂದರೆ ರೋಗ ಹತೋಟಿಗೆ ಬರಲಿದೆ. ಆಗ ಸೂಕ್ತ ಔಷಧ ಬಳಕೆ ಮಾಡಿದರೆ, ಇಳುವರಿಗೆ ಕೊರತೆ ಬಾರದು.
ಸುಭಾಷ್‌ ರೈ ಕಡಮಜಲು ಗೇರು ಕೃಷಿಕ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.