ಪಂಜದಲ್ಲಿ ಒಂಟಿ ವೃದ್ಧನ ಕೊಲೆ: ಓರ್ವನ ಸೆರೆ
Team Udayavani, Sep 13, 2018, 12:24 PM IST
ಸುಳ್ಯ : ಸೆಪ್ಟಂಬರ್ 7ರಂದು ಪಂಜ ಸಮೀಪದ ಪಂಬೆತ್ತಾಡಿಯಲ್ಲಿ ಕಲ್ಚಾರು ಸುಬ್ರಹ್ಮಣ್ಯ ಭಟ್ ಅವರು ತನ್ನ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣ ಕೊಲೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿ ಸೆ.12ರಂದು ಸುಳ್ಯ ಕೋರ್ಟಿಗೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿ ಕೊಡಿಯಾಲ ಕಲ್ಪಡ ನಿವಾಸಿ ಆಶಿಕ್ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ. ತನಿಖೆ ನಡೆಸಿರುವ ಸುಳ್ಯ ವೃತ್ತ ನಿರೀಕ್ಷಕ ಸತೀಶ್ಕುಮಾರ್ ನೇತೃತ್ವದ ಪೊಲೀಸರ ತಂಡ ಅಂಗಳದಲ್ಲಿ ಹಾಸಿದ್ದ ಟರ್ಪಾಲಿನ ಮೇಲೆ ಪಿಕಪ್ ಚಲಿಸಿದ ಗುರುತನ್ನು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣದ ವಿವರ
ಘಟನೆ ಬೆಳಕಿಗೆ ಬರುವ ಎರಡು ದಿನಗಳ ಮೊದಲು ಆರೋಪಿಯು ಸುಬ್ರಹ್ಮಣ್ಯ ಭಟ್ ಅವರನ್ನು ಹೊಡೆದು ಕೊಂದಿದ್ದ. ಬಳಿಕ ಭಟ್ಟರು ತನ್ನೊಡನೆ ಅಡಿಕೆ ಮಾರಲು ಹೇಳಿದ್ದಾರೆಂದು ನಂಬಿಸಿ ಪರಿಚಿತರಾದ ವಸಂತ, ದೀಕ್ಷಿತ್, ಲಕ್ಷ್ಮೀಶ, ಪಿಕಪ್ ಮಾಲಕ ವಿದ್ಯಾನಂದ ಅವರನ್ನು ಭಟ್ಟರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಫೋನ್ನಲ್ಲಿ ಭಟ್ಟರೊಡನೆ ಮಾತನಾಡುವಂತೆ ನಟಿಸಿ ಮನೆಯ ಬಾಗಿಲು ತೆರೆದು ಅಡಿಕೆ ತುಂಬಿಸಿ ಕಾಣಿಯೂರಿನ ವ್ಯಾಪಾರಿಗೆ ಮಾರಿದ್ದಾನೆಂದು ತನಿ ಖೆಯಿಂದ ತಿಳಿದುಬಂದಿದೆ. ವಸಂತ, ದೀಕ್ಷಿತ್, ಲಕ್ಷೀಶ ಹಾಗೂ ವಿದ್ಯಾನಂದ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ