ಪೊಲೀಸರ ಸ್ಪಂದನೆ ಪರಿತ್ಯಕ್ತ ವೃದ್ಧೆ ಸಹೋದರಿ ಮನೆಗೆ
Team Udayavani, Jul 29, 2018, 9:40 AM IST
ವೇಣೂರು: ಪತಿ ಹಾಗೂ ಪುತ್ರನಿಂದ ಪರಿತ್ಯಕ್ತಳಾಗಿ ಸಾರ್ವಜನಿಕ ಶೌಚಾಲಯದ ಸ್ನಾನಗೃಹವನ್ನೇ ಆವಾಸಸ್ಥಾನ ಮಾಡಿಕೊಂಡಿದ್ದ ವೃದ್ಧ ಮಹಿಳೆಯ ಸಂಕಷ್ಟಕ್ಕೆ ವೇಣೂರು ಪೊಲೀಸರು ಸ್ಪಂದಿಸಿದ್ದು, ತಾತ್ಕಾಲಿಕವಾಗಿ ಆಕೆಯ ಸಹೋದರಿಯ ಮನೆಯಲ್ಲಿ ಆಶ್ರಯದ ವ್ಯವಸ್ಥೆ ಮಾಡಿದ್ದಾರೆ.
ಕಳೆದೆರಡು ವರ್ಷಗಳಿಂದ ವೇಣೂರು ಮಹಾವೀರ ನಗರದ ಶೌಚಾಲಯದ ಸ್ನಾನ ಗೃಹದಲ್ಲಿ ವಾಸವಾಗಿರುವ ಸರಸ್ವತಿ (67) ಅವರು ಬಗ್ಗೆ ಉದಯವಾಣಿ ಶನಿವಾರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ಇದನ್ನು ಗಮನಿಸಿದ ವೇಣೂರು ಪೊಲೀಸರು ಕೂಡಲೇ ಆಕೆಯನ್ನು ಭೇಟಿಯಾಗಿ ವಿಚಾರಿಸಿದರು. ಕಳಸ ದಲ್ಲಿರುವ ಪತಿ ಹಾಗೂ ಪುತ್ರನಿಗೆ ವಿಪರೀತ ಕುಡಿತದ ಚಟವಿದ್ದು, ಗಲಾಟೆ ನಡೆಸುತ್ತಾರೆ. ಅದನ್ನು ತಾಳಲಾರದೆ ತಾನು ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಸರಸ್ವತಿ ಹೇಳಿದರು. ವೇಣೂರಿನಲ್ಲಿಯೇ ನೆಲೆಸಿರುವ ಆಕೆಯ ಸಹೋದರಿ ಸುನಂದಾ ಅವರ ಮನವೊಲಿಸಿದ ಪೊಲೀಸರು ಸರಸ್ವತಿಗೆ ಅವರ ಮನೆಯಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಪತಿ ಹಾಗೂ ಪುತ್ರನನ್ನು ಕಳಸದಿಂದ ಕರೆಸಿ ವಿಚಾರಿಸಿ ಸರಸ್ವತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾ.ಪಂ.ನ್ನು ಸಂಪರ್ಕಿಸಿ ಸರಕಾರದಿಂದ ಲಭಿಸುವ ಸವಲತ್ತು ಒದಗಿಸು ವುದಾಗಿಯೂ ಭರವಸೆ ನೀಡಿದ್ದಾರೆ.
ಮುಖಮಾಡದ ಜನಪ್ರತಿನಿಧಿಗಳು!
ಅನಾಥ ವೃದ್ಧೆಗೆ ಆಶ್ರಯ ನೀಡಲು ವೇಣೂರಿನ ಕೆಲವು ಸಮಾಜಸೇವಾ ಸಂಘಟನೆಗಳು, ಉದ್ಯಮಿಗಳು, ನಾಗರಿಕರು ಮುಂದೆ ಬಂದಿದ್ದಾರೆ. ಆದರೆ ಸಮಸ್ಯೆಗೆ ಸ್ಪಂದಿಸಬೇಕಾದ ಯಾವುದೇ ಜನಪ್ರತಿನಿಧಿಗಳಾಗಲಿ, ಇತರ ಇಲಾಖೆಗಳ ಅಧಿಕಾರಿಗಳಾಗಲಿ ಇತ್ತ ಭೇಟಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್