ಇಂದು ಶ್ರವಣಬೆಳಗೊಳ ಶ್ರೀಗಳು ಮೂಡುಬಿದಿರೆಗೆ
Team Udayavani, Feb 11, 2024, 5:35 AM IST
ಮೂಡುಬಿದಿರೆ: ಶ್ರವಣಬೆಳಗೊಳ ಕ್ಷೇತ್ರದ ಜಗದ್ಗುರು ಅಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಪಟ್ಟಾಚಾರ್ಯವರ್ಯ ಭಟ್ಟಾರಕ ಮಹಾ ಸ್ವಾಮೀಜಿ ಅವರು ಫೆ. 11ರಂದು ಬೆಳಗ್ಗೆ 9 ಗಂಟೆಗೆ ಮೂಡುಬಿದಿರೆ ಪುರಪ್ರವೇಶಗೈಯಲಿದ್ದು ಹಳೆ ಪೊಲೀಸ್ ಠಾಣೆಯ ಬಳಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಶ್ರೀ ಜೈನ ಮಠಕ್ಕೆ ಕರೆತರಲಾಗುವುದು.
ಬಳಿಕ ಧಾಮ ಸಂಪ್ರೋ ಕ್ಷಣೆ ಆರಂಭಗೊಂಡಿರುವ ಹಿರೇ ಅಮ್ಮನವರ ಬಸದಿಜಿನಬಿಂಬಗಳ ದರ್ಶನಗೈದು ಧಾಮ ಸಂಪ್ರೋಕ್ಷಣ ವಿಧಿಗಳಲ್ಲಿ ಅವರು ಪಾಲ್ಗೊಳ್ಳಲಿ ದ್ದಾರೆ ಎಂದು ಬಸದಿ ಆಡಳಿತದಾರ ಭಾಸ್ಕರ ಎಸ್. ಕಟ್ಟೇಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.