ತಾ.ಪಂ. ಸದಸ್ಯರನ್ನು  ಹುಡುಕಿಕೊಡಿ: ಗ್ರಾಮಸ್ಥರ ಆಗ್ರಹ


Team Udayavani, Jan 5, 2018, 12:33 PM IST

5-Jan-12.jpg

ಅಳಿಕೆ: ಅಳಿಕೆ-ಪೆರುವಾಯಿ ಗ್ರಾಮಕ್ಕೆ ಸಂಬಂಧಪಟ್ಟ ಬಂಟ್ವಾಳ ತಾ.ಪಂ. ಸದಸ್ಯರು ನಾಪತ್ತೆಯಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಯಾವುದೇ ಕಾರ್ಯಕ್ರಮ, ಗ್ರಾಮಸಭೆಗಳಿಗೆ ಹಾಜರಾಗುತ್ತಿಲ್ಲ. ಅವರನ್ನು ಹುಡುಕಿಕೊಡಿ ಎಂದು ಅಳಿಕೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ ಘಟನೆ ಸಂಭವಿಸಿದೆ.

ಅಳಿಕೆ ಗ್ರಾ.ಪಂ. ಸಭಾಭವನದಲ್ಲಿ ಗುರುವಾರ ದ್ವಿತೀಯ ಸುತ್ತಿನ ಗ್ರಾಮಸಭೆ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಗ್ರಾಮಸ್ಥರಾದ ಬಾಲಕೃಷ್ಣ ಪೂಜಾರಿ ಮತ್ತು ಜಗತ್‌ ಶಾಂತಪಾಲ ಚಂದಾಡಿ ಮಾತನಾಡಿ, ತಾ.ಪಂ. ಸದಸ್ಯರು ನಾಪತ್ತೆಯಾಗಿದ್ದರೆ ಪತ್ತೆ ಮಾಡಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವುದು ಉತ್ತಮ ಎಂದರು. ಅಧ್ಯಕ್ಷ ಪದ್ಮನಾಭ ಪೂಜಾರಿ ಪ್ರತಿಕ್ರಿಯಿಸಿ, ತಾ.ಪಂ. ಸದಸ್ಯರ ಮನೆಗೆ ಸಿಬಂದಿ ತೆರಳಿ ಆಮಂತ್ರಣವನ್ನು ನೀಡಿದ್ದಾರೆ. ಆದರೆ ಸಹಿ ಪಡೆದುಕೊಳ್ಳಲು ಕೂಡಾ ಅವರು ಸಿಗುತ್ತಿಲ್ಲ. ಹೆಚ್ಚಿನ ಮಾಹಿತಿ ನಮಗಿಲ್ಲ ಎಂದು ಹೇಳಿದರು.

ಕೃಷಿಕರು ಅಲೆದಾಡುತ್ತಿದ್ದಾರೆ
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಎಸ್‌. ಕೆ. ಸರಿಕಾರ್‌ ಮಾಹಿತಿ ನೀಡಿದರು. ಆಗ ಅಧ್ಯಕ್ಷರು ಮಾತನಾಡಿ, ಕೃಷಿಕರ ಬೇಡಿಕೆಗಳಿಗೆ ಕೃಷಿ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಗ್ರಾಮಸ್ಥರನ್ನು ತಾಲೂಕು ಕೇಂದ್ರಿ ಕರೆಸಿ ಅಲೆದಾಡಿಸುತ್ತಿದ್ದೀರಿ ಎಂಬ ಆರೋಪವಿದೆ ಎಂದರು. ಅಧಿಕಾರಿ ಉತ್ತರಿಸಿ, ಕೃಷಿಕರ ಬಗ್ಗೆ ಹೆಚ್ಚು ಜಾಗರೂಕನಾಗಿ ವ್ಯವಹರಿಸುತ್ತೇನೆ ಎಂದರು.

ಬಸ್‌ ನೆಕ್ಕಿತ್ತಪುಣಿಗೆ ಬರಲಿ
ಕೆಎಸ್‌ಆರ್‌ಟಿಸಿ ಬಸ್‌ ಅಳಿಕೆಯಿಂದ ಮುಂದುವರಿದು ನೆಕ್ಕಿತ್ತಪುಣಿಗೆ ಬರಲಿ ಮತ್ತು ಈ ಪರಿಸರದಲ್ಲಿ ಸರ್ವೆ ನಡೆಸಲಾದ ಬಸ್‌ ಟ್ರಿಪ್‌ಗ್ಳನ್ನು ಆರಂಭಿಸಬೇಕು. ಇದಕ್ಕೆ ಗ್ರಾಮಸಭೆ ನಿರ್ಣಯವನ್ನೂ ಕಳುಹಿಸಲಾಗಿದೆ. ಆದರೆ ಕ್ರಮ ಕೈಗೊಂಡಿಲ್ಲ. ಕೂಡಲೇ ಬಸ್‌ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿ
ಕೇರಳಕ್ಕೆ ಕೋಳಿ ಸಾಗಾಟ ಮಾಡುವ ಲಾರಿಗಳಲ್ಲಿರುವ ತ್ಯಾಜ್ಯವನ್ನು ದಾರಿ ಮಧ್ಯೆ ಅಲ್ಲಲ್ಲಿ ಎಸೆದು ತೆರಳುತ್ತಿದ್ದಾರೆ. ಪರಿಣಾಮವಾಗಿ ಊರು ಗಬ್ಬುನಾತ ಬೀರುತ್ತಿದೆ ಎಂದು ಪೊಲೀಸರಲ್ಲಿ ದೂರಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನಸ್ನೇಹಿ ಪೊಲೀಸ್‌ ಎಂಬ ಯೋಜನೆಯಲ್ಲಿ ಬೀಟ್‌ ಸಭೆ ಆಯೋಜಿಸಲಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಇಲ್ಲಿ ಏನೂ ನಡೆಯುತ್ತಿಲ್ಲ. ಗ್ರಾಮದಲ್ಲಿ ಕಳ್ಳತನ ಪ್ರಕರಣಗಳೂ ಹೆಚ್ಚಾಗಿವೆ ಎಂದು ಗ್ರಾಮಸ್ಥರು ಹಾಗೂ ಅಧ್ಯಕ್ಷರು ಆಗ್ರಹಿಸಿದರು.

ಅಂಗನವಾಡಿ ದುರಸ್ತಿ ಪೂರ್ತಿಯಾಗಲಿ
ಎರುಂಬು ಅಂಗನವಾಡಿ ಕಟ್ಟಡದ ಮಾಡು ಸರಿಯಿಲ್ಲ. ಮಕ್ಕಳು, ಕಾರ್ಯಕರ್ತೆಯರು ಅಪಾಯದ ಸನ್ನಿವೇಶವನ್ನು
ಎದುರಿಸುತ್ತಿದ್ದಾರೆ. ಕಾಮಗಾರಿ ಸರಿಯಿಲ್ಲ. ಅದನ್ನು ಸರಿಪಡಿಸ ಬೇಕು ಎಂದು ಬಾಲಕೃಷ್ಣ ಪೂಜಾರಿ ಆಗ್ರಹಿಸಿದರು.
ಅದನ್ನು ಸರಿಪಡಿಸುತ್ತೇವೆ ಎಂದು ಜಿ.ಪಂ. ಎಂಜಿನಿಯರ್‌ ಅಜಿತ್‌ ಭರವಸೆ ನೀಡಿದರು.

ಮೆಸ್ಕಾಂ ಉಕ್ಕುಡ ಶಾಖಾಧಿಕಾರಿ ಆನಂದ್‌ ಅವರು ಮಾತನಾಡಲು ಆರಂಭಿಸಿದಾಗ ಗ್ರಾಮಸ್ಥರು ತಂತಿ
ಬದಲಾಯಿಸಲು ಕಳೆದ ಗ್ರಾಮ ಸಭೆಯಲ್ಲಿ ಆಗ್ರಹಿಸಿದ್ದೇವೆ. ಇನ್ನೂ ಸರಿಯಾಗಲಿಲ್ಲ. ಗ್ರಾಮದಲ್ಲಿ ಪ್ರತಿದಿನವೂ ವಿದ್ಯುತ್‌ ಕಣ್ಣಾಮುಚ್ಚಾಲೆಯಾಡುತ್ತಿದೆ ಎಂದು ದೂರಿದರು.

ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ಅಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸೆಲ್ವಿನ್‌ ಡಿ’ಸೋಜಾ, ಹಿರಿಯ ಪಶುವೈದ್ಯ ಪರೀಕ್ಷಕ ಕಾಶಿಮಠ ಈಶ್ವರ ಭಟ್‌, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಜಯಪ್ರಕಾಶ್‌ ಕೆ.ಕೆ.,
ಕಂದಾಯ ಇಲಾಖೆಯ ಗ್ರಾಮಕರಣಿಕ ಪ್ರಕಾಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೋಲಾಕ್ಷಿ
ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿ ಬಂಟ್ವಾಳ ಶಿಕ್ಷಣ ಇಲಾಖೆಯ ಶ್ರೀಕಾಂತ್‌ ಭಾಗವಹಿಸಿದ್ದರು.

ಗ್ರಾ.ಪಂ. ಸದಸ್ಯರಾದ ಮೋನಪ್ಪ ಎರುಂಬು, ಜಯಂತಿ, ಸರೋಜಿನಿ, ಮುಕಾಂಬಿಕಾ ಜಿ. ಭಟ್‌, ಸುಧಾಕರ ಮಡಿಯಾಲ, ಗಿರಿಜಾ, ಸರಸ್ವತಿ, ರವೀಶ, ಸದಾಶಿವ ಶೆಟ್ಟಿ ಮಡಿಯಾಲ, ಅಬ್ದುಲ್‌ ರಹಿಮಾನ್‌ ಮತ್ತು ಪಿಡಿಒ ಜಿನ್ನಪ್ಪ ಗೌಡ ಜಿ. ಉಪಸ್ಥಿತರಿದ್ದರು.

ಪಡಿತರ ಚೀಟಿ ಸಿಕ್ಕಿಲ್ಲ: ಗ್ರಾಮಸ್ಥರ ಅಳಲು
ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ 1 ವರ್ಷ ಕಳೆದರೂ ಪಡಿತರ ಚೀಟಿ ಮನೆಗೆ ಬರಲಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಆಗ ಉತ್ತರಿಸಲು ಆಹಾರ ಇಲಾಖೆ ಅಧಿಕಾರಿ ಹಾಜರಿರಲಿಲ್ಲ. ಅಧಿಕಾರಿ ಬರಬೇಕೆಂದು ಸ್ಥಳೀಯರು ಆಗ್ರಹಿಸಿದರು. ಬಳಿಕ ಆಗಮಿಸಿದ ಅಧಿಕಾರಿ ವಾಸು ಶೆಟ್ಟಿ, 2017ರ ಫೆಬ್ರವರಿ ಬಳಿಕದ ಜೂನ್‌ ವರೆಗಿನ ಪಡಿತರ ಚೀಟಿಯನ್ನು ತನಿಖೆ
ಮಾಡಿ ವಿತರಿಸಲಾಗಿದೆ. ಜುಲೈ ಬಳಿಕದ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಸರ್ವರ್‌ ಸಮಸ್ಯೆಯಿದೆ. ಪಡಿತರ ಚೀಟಿ ಸಿಗದವರಿಗೆ ಇನ್ನೊಂದು ವಾರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಪಡಿತರ ಚೀಟಿದಾರರಿಗೆ ಅಕ್ಕಿ, ತೊಗರಿಬೇಳೆ ನೀಡಲಾಗುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಗ್ಯಾಸ್‌ ಇದ್ದವರಿಗೂ 1 ಲೀ. ಸೀಮೆಎಣ್ಣೆ ಸಿಗಲಿದೆ. ಅಂತ್ಯೋದಯ ಕಾರ್ಡ್‌ ವ್ಯವಸ್ಥೆಯನ್ನೂ ಸರಿಪಡಿಸಲಾಗುವುದು ಎಂದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.