ಇನ್ನು ಹಗಲಲ್ಲೂ ಬೆಳಗಲಿದೆ ದ್ವಿಚಕ್ರ ವಾಹನಗಳ ಹೆಡ್‌ಲೈಟ್‌!


Team Udayavani, Mar 23, 2017, 12:51 PM IST

hesdlight.jpg

- ಫೋರ್‌ ವೀಲರ್‌ಗೂ ಎಎಚ್‌ಒ 
- ಬ್ಯಾಟರಿ ಬಗ್ಗೆ  ಆತಂಕ ಬೇಡ
- ಎಪ್ರಿಲ್‌ ಬಳಿಕ ದಂಡ

ಪುತ್ತೂರು: ಹೊಸ ದ್ವಿಚಕ್ರ ವಾಹನ ಖರೀದಿಸಿ ಚಲಾಯಿಸಿಕೊಂಡು ಹೋಗುತ್ತಿದ್ದೀರಿ; ಎದುರಿನಿಂದ ಬರುವವರೆಲ್ಲರೂ “ಹೆಡ್‌ಲೈಟ್‌ ಉರಿಯುತ್ತಿದೆ; ಆಫ್ ಮಾಡಿ’ ಎಂದು ಸೂಚನೆ ನೀಡುತ್ತಿದ್ದಾರೆ; ಯಾವ ಸ್ವಿಚ್‌ ಆನ್‌/ಆಫ್ ಮಾಡಿದರೂ ದೀಪ ಮಾತ್ರ ಆರುತ್ತಿಲ್ಲ…. ಛೆ! ಹೊಸ ವಾಹನವೇ ದುರಸ್ತಿಗೆ ಬಂತಾ? ಎಂಬ ಚಿಂತೆ ನಿಮ್ಮನ್ನು ಕಾಡಿತೇ? ಚಿಂತೆ ಬೇಡ ಇನ್ನು ದ್ವಿಚಕ್ರ ವಾಹನಗಳಲ್ಲಿ ಹೆಡ್‌ಲೈಟ್‌ ಆರಿಸುವಂತಿಲ್ಲ; ಕೆಲವು ಕಂಪೆನಿಗಳು ಈಗಾಗಲೇ ಈ ನಿಯಮವನ್ನು ಜಾರಿಗೆ ತಂದಿವೆ.

ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸಲಹೆ ನೀಡುವಂತೆ ನೇಮಿಸಿದ ಸಲಹಾ ಸಮಿತಿಯ ವರದಿಯಂತೆ ಕೇಂದ್ರ ಸರಕಾರ ಈ ನಿಯಮ ಜಾರಿ ಮಾಡಲು ಮುಂದಾಗಿದೆ. ಹಳೆ ಸಾರಿಗೆ ನಿಯಮಗಳಿಗೆ ತಿದ್ದುಪಡಿ ತಂದು ದ್ವಿಚಕ್ರ ವಾಹನಗಳಿಗೆ ಅಟೋಮೆಟಿಕ್‌ ಹೆಡ್‌ಲೈನ್‌ ಆನ್‌ (ಎಎಚ್‌ಒ) ಸಿಸ್ಟಮ್‌ ತರಲು ಯೋಜನೆ ರೂಪಿಸಿದ ಪರಿಣಾಮ 2017ರ ಅನಂತರ ಉತ್ಪಾದನೆಗೊಳ್ಳುವ ಹಳೆ ಮತ್ತು ಹೊಸ ಮಾಡೆಲ್‌ ದ್ವಿಚಕ್ರ ವಾಹನಗಳಲ್ಲಿ ಹೆಡ್‌ಲ್ಯಾಂಪ್‌ ಆನ್‌ ಆಗಿರುತ್ತದೆ.

2015ರ ಅಂಕಿ-ಅಂಶದ ಆಧಾರದಲ್ಲಿ ಕರ್ನಾಟಕದಲ್ಲಿ 44,000 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 13,158 ಅಪಘಾತ ಬೈಕ್‌ಗೆ ಸಂಬಂಧಿಸಿದ್ದು. 1.5 ಲಕ್ಷ ಜನ ಮೃತಪಟ್ಟವರ ಪೈಕಿ 32,000 ಮಂದಿ ಬೈಕ್‌ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಡ್‌ಲೈಟ್‌ ನಿರಂತರ ಉರಿಸುವಿಕೆ ಅಪಘಾತ ನಿಯಂತ್ರಣಕ್ಕೆ ಕಾರಣವಾಗಬಹುದು ಎನ್ನುವ ಉದ್ದೇಶ ಹೊಂದಲಾಗಿದೆ.

ಅಧಿಕೃತ ಸುತ್ತೋಲೆ ಬಂದಿಲ್ಲ
ಈ ಹೊಸ ಎಎಚ್‌ಒ ನಿಯಮದ ಬಗ್ಗೆ ಆರ್‌ಟಿಒ, ಸಂಚಾರ ಠಾಣಾ ಇಲಾಖೆಗಳಿಗೆ ಅಧಿಕೃತ ಸುತ್ತೋಲೆ ಬಂದಿಲ್ಲ. ಹೊಸ ಬೈಕ್‌ಗಳಲ್ಲಿ ಎಎಚ್‌ಒ ಕಡ್ಡಾಯವಾಗಿದ್ದು, ತಂತ್ರಜ್ಞಾನ ಬಳಸಿ ಲೈಟ್‌ ಆಫ್‌ ಮಾಡಿ ವಾಹನ ಚಲಾಯಿಸಿದರೆ ದಂಡ ವಿಧಿಸುವಿಕೆಗೆ ಅವಕಾಶ ಇದೆಯೋ ಅನ್ನುವ ಬಗ್ಗೆ ಇನ್ನು ಸ್ಪಷ್ಟ ನಿರ್ದಶನ ಇಲಾಖೆಗಳಿಗೆ ಬಂದಿಲ್ಲ.

ಬಹುತೇಕ ಸವಾರರದ್ದು ಒಂದೇ ಪ್ರಶ್ನೆ. ಹೆಡ್‌ಲೈಟ್‌ ನಿರಂತರ ಚಾಲು ಆಗುವುದರಿಂದ ಬ್ಯಾಟರಿ ವೀಕ್‌ ಆಗುತ್ತದೆ. ವಾಹನ ಹಾಳಾಗುತ್ತದೆ. ಆದರೆ ಇದನ್ನು ದ್ವಿಚಕ್ರ ವಾಹನ ಶೋರೂಂನವರು ಒಪ್ಪುವುದಿಲ್ಲ. ಬ್ಯಾಟರಿ ಚಾರ್ಜ್‌ ಆಗಿ ಹೆಚ್ಚಾದ ವಿದ್ಯುತ್‌ ಪೂರೈಕೆ ಆಗುತ್ತದೆ. ಹಾಗಾಗಿ ಬೈಕ್‌ ಹಾಳಾಗುತ್ತದೆ, ಬ್ಯಾಟರಿ ವೀಕ್‌ ಆಗುತ್ತದೆ ಎಂಬ ಆತಂಕ ಬೇಡ ಎನ್ನುತ್ತಾರೆ ಶೋರೂಂ ಮಾಲಕರು.

ಫೋರ್‌ ವೀಲರ್‌ಗೂ ಎಎಚ್‌ಒ!
ದ್ವಿಚಕ್ರ ವಾಹನಗಳಂತೆ ಫೋರ್‌ವೀಲರ್‌ಗೂ ಈ ನಿಯಮ ಅಳವಡಿಕೆಯ ಚಿಂತನೆ ನಡೆದಿದೆ. ಕಡ್ಡಾಯ ನಿಯಮ ಇಲ್ಲಿಗೂ ಅನ್ವಯವಾದರೆ, ನಾಲ್ಕು ಚಕ್ರದ ಎಲ್ಲ ವಾಹನಗಳಿಗೂ ಈ ಸಿಸ್ಟಮ್‌ ಅಳವಡಿಕೆ ಆಗಲಿದೆ.

ಈ ನಿಯಮ ಯಾಕೆ?
ವಾಹನ ಅಪಘಾತ ತಪ್ಪಿಸುವುದು ಈ ಎಎಚ್‌ಒ ಅಳವಡಿಕೆಯ ಮುಖ್ಯ ಉದ್ದೇಶ. ಮುಂಜಾನೆ ವೇಳೆ ವಾಹನ ಸಂಚರಿಸುವ ಸಂದರ್ಭ ಬೆಳಕು ಕಡಿಮೆ ಆಗಿ ಅಪಘಾತಗಳು ಸಂಭವಿಸುತ್ತಿವೆ. ಅಟೋಮೆಟಿಕ್‌ ಹೆಡ್‌ಲ್ಯಾಂಪ್‌ ಆನ್‌ ಸಿಸ್ಟಮ್‌ನಿಂದ ಸವಾರರಿಗೆ ಎದುರುಗಡೆಯಿಂದ ಬರುವ ವಾಹನದ ಹೆಡ್‌ಲ್ಯಾಂಪ್‌ ಗೋಚರಿಸಿ ವಾಹನದ ಬರುವಿಕೆ ಅರಿವಾಗುತ್ತದೆ. ಸ್ವಿಚ್‌ ಆನ್‌/ಆಫ್‌ ಬಟನ್‌ ವ್ಯವಸ್ಥೆಯಲ್ಲಿ ಬಹುತೇಕರು ಆನ್‌ ಮಾಡಲು ಮರೆತಿರುತ್ತಾರೆ. ಅಟೋಮೆಟಿಕ್‌ ವ್ಯವಸ್ಥೆಯಿಂದ ಆ ಸಮಸ್ಯೆ ಬಾರದು. ಅಪಘಾತದ ಪ್ರಮಾಣದಲ್ಲಿ ಇಳಿಮುಖ ಸಾಧ್ಯ ಅನ್ನುವುದು ಹೊಸ ನಿಯಮದ ಹಿಂದಿನ ಉದ್ದೇಶ.

ವಿದೇಶಗಳಲ್ಲಿ ಹತ್ತು ವರ್ಷದ ಹಿಂದೆಯೇ ಇಂತಹ ನಿಯಮ ಜಾರಿಯಲ್ಲಿದೆ. ಭಾರತದಲ್ಲಿ ಇದು ಇತ್ತೀಚಿನ ವರ್ಷದ ಬೆಳವಣಿಗೆ. ಎಎಚ್‌ಒ ಸಿಸ್ಟಮ್‌ ಇರುವ ಹೊಸ ಬೈಕ್‌ಗಳಲ್ಲಿ ಬೀಮ್‌ ಬದಲಾಯಿಸಬಲ್ಲ ಬಟನ್‌ ಮಾತ್ರ ಇದೆ ಅನ್ನುತ್ತಾರೆ ಮೋಟಾರ್‌ ವಾಹನ ತಜ್ಞರು.

ನಿಯಮ ಮೀರಿದರೆ ದಂಡ
ಸ್ವಯಂಚಾಲಿತ ಹೆಡ್‌ಲ್ಯಾಂಪ್‌ ಬಗ್ಗೆ ಇಲಾಖೆಗೆ ಯಾವುದೇ ಸುತ್ತೋಲೆ ಬಂದಿಲ್ಲ. ದ್ವಿಚಕ್ರ ವಾಹನ ಖರೀದಿಸಿದ ಗ್ರಾಹಕ, ಅದರ ಮೂಲ ಸ್ವರೂಪವನ್ನು ಬದಲಾಯಿಸುವುದಕ್ಕೆ ಅವಕಾಶ ಇಲ್ಲ. ಹೆಡ್‌ಲೈಟ್‌ ಉರಿಸುವಿಕೆ ಕಡ್ಡಾಯ ಆದಲ್ಲಿ ತನ್ನಿಷ್ಟದಂತೆ ಹೆಡ್‌ಲೈಟ್‌ ಆನ್‌/ಆಫ್‌ ಮಾಡಿದರೆ ಸಾರಿಗೆ ನಿಯಮದ ಪ್ರಕಾರ ಅದು ಅಪರಾಧವೆನಿಸುತ್ತದೆ.
– ಫೆಲಿಕ್ಸ್‌  ಡಿ’ಸೋಜಾ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.